krushiabhivruddi

ಕಾಲಬದ್ಧ ನಿರ್ವಹಣೆಯ ಉತ್ತಮ ಇಳುವರಿಯ ಅಡಿಕೆ

ಉತ್ತಮ ಇಳುವರಿ ಪಡೆಯಲು ಈ ವಿಧಾನ ಅನುಸರಿಸಿರಿ.

ಯಾವುದೇ ವೃತ್ತಿಯಲ್ಲಿ ನಾವು ಮಾಡಿದ  ಕೆಲಸವನ್ನು ಒಮ್ಮೆ ತಿರುಗಿ ನೋಡಿದರೆ  ನಮಗೆ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯುತ್ತದೆ. ಕೃಷಿಯಲ್ಲಿ ನಾವು ಮಾಡಿದ ನಾಲ್ಕು ಐದು ವರ್ಷಗಳ ಬೆಳೆ  ಕ್ರಮವನ್ನು ಅಭ್ಯಸಿದರೆ ನಮಗೆ ಹೇಗೆ ಮಾಡಿದರೆ ಉತ್ತಮ ಎಂಬುದು ತಿಳಿಯುತ್ತದೆ. ನಾವು ಮಾಡುವ ವೃತ್ತಿಯಲ್ಲಿ ಯಾವಾಗ ಏನು ಮಾಡಿದ್ದೇವೆ ಅದರ ಫಲಿತಾಂಶ ಏನಾಗಿದೆ ಎಂಬುದನ್ನು ಪರಾಂಬರಿಸಿ ಗಮನಿಸುತ್ತಿದ್ದರೆ, ತಪ್ಪು ಎಲ್ಲಿ ಅಗಿದೆ, ಸರಿ ಮಾಡುವುದು ಹೇಗೆ ಎಂದು ನಮಗೇ ತಿಳಿಯುತ್ತದೆ.  ಕೃಷಿಯೂ ಹಾಗೆಯೇ? ನಮ್ಮ ಕೃಷಿ…

Read more
ಜೇನು ನೊಣಗಳು

ಜೇನು ನೊಣ ಯಾವ ಸಮಯದಲ್ಲಿ ಹಿಡಿದರೆ ಒಳ್ಳೆಯದು.

ಕಾರ್ತಿಕ ಮಾಸದ ನಂತರ ಜೇನು ಕುಟುಂಬ ಸಂಖ್ಯಾಭಿವೃದ್ದಿಯಾಗುತ್ತದೆ. ಸಂಖ್ಯೆ  ಹೆಚ್ಚಾದಾಗ ಪಾಲಾಗುತ್ತದೆ. ಪಾಲಾದಾಗ ಅರ್ಧ ಪಾಲು ನೊಣಗಳು ವಾಸಸ್ಥಳದಿಂದ ವಿಭಾಗಗೊಂಡು ಹೊರ ಬಂದು ಎಲ್ಲಾದರೂ ವಿಶ್ರಮಿಸಿ ಹೊಸ ವಾಸ ಸ್ಥಳವನ್ನು ಹುಡುಕುತ್ತವೆ. ಆಗ ನಿಮ್ಮ ತೋಟದಲ್ಲಿ ಖಾಲಿ ಜೇನು ಪಟ್ಟಿಗೆ ಇದ್ದರೆ ಅಲ್ಲಿ ಅವು ವಾಸ ಅಯ್ಕೆ ಮಾಡಬಹುದು. ಈ ಸಮಯದಲ್ಲಿ ಜೇನು ಕುಟುಂಬಗಳು ಹೊರಗೆ ಹಾರಾಡುವುದು ಹೆಚ್ಚು. ಈಗ ಅವುಗಳಿಗೆ ಪುಷ್ಪಗಳೂ ಲಭ್ಯ. ಸಾಮಾನ್ಯವಾಗಿ ಅವು ತಂಪು ಇರುವಲ್ಲಿ ವಾಸಸ್ಥಾನ ಹುಡುಕುತ್ತವೆ. ವಿಭಾಗ ಆಗಿ  ಹೊರಟು…

Read more
ಅಡಿಕೆ- ಟೆಂಡರ್ ಪ್ರಾಂಗಣದಲ್ಲಿ

ಅಡಿಕೆ ಖರೀದಿಗೆ ದುಡ್ಡಿಲ್ಲ- ಕರಿಮೆಣಸಿಗೆ ಬೇಡಿಕೆ -07-10-2021 ರ ಧಾರಣೆ.

ಅಡಿಕೆಗೆ ದರ ಏರಿಸಿದ್ದು ಯಾಕೋ?ಇಳಿಸಿದ್ದು ಯಾಕೋ? ಈ ಆಟದಲ್ಲಿ ಅದೆಷ್ಟು ಬೆಳೆಗಾರರ ಆಸೆ ನಿರಾಸೆಯಾಗಿದೆ ! ವರ್ತಕರು ನಷ್ಟ ಅನುಭವಿಸಿದ್ದಾರೆ! ದೊಡ್ಡ ಕುಳಗಳ ಮಧ್ಯೆ ಸಣ್ಣ ಕುಳಗಳು ರಚ್ಚಾಪಚ್ಚವಾಗಿಬಿಟ್ಟವೋ ಎಂಬ ಸ್ಥಿತಿ ಉಂಟಾಗಿದೆ.  ಅಡಿಕೆ ಮಾರುಕಟ್ಟೆ ಎಂಬುದು ಬಹುಷಃ ಯಾವ ಅಂಜನ ಜ್ಯೋತಿಷ್ಯಕ್ಕೂ ಸಿಕ್ಕದ ಒಂದು ಗುಟ್ಟಾಗಿ ಉಳಿದಿದೆ. ಕೆಂಪಡಿಕೆ ಮತ್ತೆ ಇಳಿಕೆಯಾಗಿದ್ದು ಗರಿಷ್ಟ ದರ 45,000 ದ ಅಸು ಪಾಸಿಗೆ ಇಳಿಕೆಯಾಗಿದೆ. ಶಿರಸಿ ಯಲ್ಲಾಪುರದಲ್ಲಿ ಹೊಸ ರಾಶಿ ಬಾರದ ಕಾರಣ ಸ್ವಲ್ಪ ಹೆಚ್ಚು ದರ ಇದೆ….

Read more
ಅಡಿಕೆ ಹರಾಜು ಪ್ರಾಂಗಣ

ಅಡಿಕೆ, ರಬ್ಬರ್, ಕಾಫೀ, ಕರಿಮೆಣಸು, ಧಾರಣೆ – ದಿನಾಂಕ – 05-10-2021

ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುವ ಪ್ರದೇಶಗಳಲ್ಲಿ ಇಂದು ದಿನಾಂಕ- 05-10-2021 ಅಡಿಕೆ ಟೆಂಡರ್ ವಿವರ. ಹಾಗೂ ಕರಿಮೆಣಸು, ಕೊಬ್ಬರಿ, ಕಾಫೀ, ರಬ್ಬರು ದರಗಳು. ಕೆಂಪಡಿಕೆ ಧಾರಣೆ ಇಳಿಕೆಯಾಗುತ್ತಿದೆ. ಚಾಲಿ ಸ್ಟಡೀ ಯಾಗಿ ಮುಂದುವರಿದಿದೆ. ಚಾಲಿ ಅಡಿಕೆಯ ದರ ಇಳಿಕೆಗೆ ಸಜ್ಜಾಗಿರುವ ಖಾಸಗಿ ವರ್ತಕರಿಗೆ ಸಹಕಾರಿ ದೈತ್ಯ ಕ್ಯಾಂಪ್ಕೋ  ಒಂದು ರೀತಿಯಲ್ಲಿ ಅಡ್ಡಿಯಾಗಿದೆ. ಕ್ಯಾಂಪ್ಕೋ ನಡೆಯ ಮೇಲೆ ಎಲ್ಲರ ಕಣ್ಣು ಎಂಬಂತಾಗಿದೆ. ಕ್ಯಾಂಪ್ಕೋ ಬೆಳೆಗಾರರ ಬೆಂಬಲಕ್ಕೆ ನಿಂತಂತಿದೆ. ಕೆಂಪಡಿಕೆ ದಾರಣೆ ಇಳಿಕೆಯಾಗುತ್ತಿದ್ದಂತೆ ಹಸಿ ಅಡಿಕೆಯ ದರವೂ ಇಳಿಕೆಯಾಗಿದೆ. ಸಪ್ಟೆಂಬರ್…

Read more

ಕೊಳೆ ರೋಗ ಬಂದಿದೆಯೇ?ಹಾಗಿದ್ದರೆ ನೀವು ಮಾಡಬೇಕಾದ ಅಗತ್ಯ ಕೆಲಸ ಏನು?

ಈ ವರ್ಷ ಮಳೆಯ ಅರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕೊಳೆ ರೋಗ ಬಂದ ಪ್ರಮಾಣ ತುಂಬಾ ಕಡಿಮೆ. ಒಂದು ವೇಳೆ ಕೊಳೆ ರೋಗ ಬಂದಿದ್ದರೆ ನೀವು ತೋಟದಲ್ಲಿ ಏನು ಮಾಡಬೇಕು. ಇದರ ಪ್ರತಿಫಲ ಏನು ಇಲ್ಲಿದೆ ಮಾಹಿತಿ. ಅಡಿಕೆ ಮರಗಳಲ್ಲಿ ಕಾಯಿಗಳು ಬಲಿಯುತ್ತಿರುವಾಗ ಒಂದು ಶಿಲೀಂದ್ರ ಕಾಯಿಯ ಒಳಗೆ ಹೋಗಿ ಅದನ್ನು ಹಾನಿ ಮಾಡಿ ಕೊಳೆಯುವಂತೆ ಮಾಡುತ್ತದೆ. ಈ ಶಿಲೀಂದ್ರವು ಒಂದು ಪರಾವಲಂಭಿ ಜೀವಿಯಾಗಿದ್ದು, ಅಡಿಕೆಯ ಕಾಯಿಯ ಒಳಗೆ ಅದು ಸಂಖ್ಯಾಭಿವೃದ್ದಿಯಾಗಿ  ಅಲ್ಲಿಂದ ಹೊರ ಬರುವ ಸಮಯಕ್ಕೆ…

Read more
ಅಡಿಕೆ ಬೆಳೆಗಾರರನ್ನು ನಿದ್ದೆಗೆಡಿಸುತ್ತಿರುವ ಹಳದಿ ಎಲೆ ರೋಗದ ಅಡಿಕೆ ಮರ

ಕೃಷಿಕರ ಮನೋಸ್ಥಿತಿ ಕುರಿತು ರಮೇಶ್ ದೇಲಂಪಾಡಿಯವರ ಅರ್ಥಗರ್ಭಿತ ಮಾತು

ಒಂದು ಕಾಲದಲ್ಲಿ ಜನರಿಗೆ ಅದರಲ್ಲೂ ಕೃಷಿಕರಿಗೆ ತಿಳಿದವರು ಹೇಳಿದ ವಿಚಾರದಲ್ಲಿ ನಂಬಿಕೆ ಇತ್ತು. ನಂಬಿಕಾರ್ಹವಾದ ಸಲಹೆಗಳನ್ನೇ ನೀಡುವವರೂ ಇದ್ದರು. ಇಂದು ಜನತೆಗೆ ನಂಬಿಕೆ ಕಡಿಮೆಯಾಗಿದೆ. ಜನರ ಮನೋಸ್ಥಿತಿಗನುಗುಣವಾಗಿ ಉಳಿದೆಲ್ಲವೂ. ಈ ಬಗ್ಗೆ ಸುಳ್ಯದ ರಮೇಶ್ ದೇಲಂಪಾಡಿ ಎಂಬ ಕೃಷಿಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ. ಶ್ರೀಯುತರು ತಮ್ಮ ಬರಹದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ಸೂಚ್ಯವಾಗಿವಾಗಿ ಹೇಳಿದ್ದಾರೆ. ನಾವು  ಬದಲಾವಣೆಯಾದರೆ  ಮಾತ್ರ ಅಭಿವೃದ್ದಿ ಸಾಧಿಸಲು ಸಾಧ್ಯ ಎಂಬುದನ್ನು ತಮ್ಮ ಈ ಬರಹದಲ್ಲಿ ದ್ವನಿ ಅರ್ಥದಲ್ಲಿ ವಿವರಿಸಿದ್ದಾರೆ….

Read more
ಕೆಂಪಡಿಕೆ ಮತ್ತು ಚಾಲಿ ಹಾರಾಜು

ಕೆಂಪಡಿಕೆ ಇಳಿಕೆ- ಚಾಲಿ ಅಸ್ಥಿರ-ಇಂದಿನ ಧಾರಣೆ-01-10-2021

ಕೆಂಪಡಿಕೆ ಮಾಡುವ ಎಲ್ಲಾ ಕಡೆ ರಾಶಿ ದರ ಕೇವಲ 15 ದಿನಗಳ ಕಾಲಾವಧಿಯಲ್ಲೇ  ಕ್ವಿಂಟಾಲಿಗೆ 8000 ಇಳಿಕೆಯಾಗಿದೆ. ಚಾಲಿ ಯಾವುದೋ ಕಾರಣಕ್ಕೆ ಕ್ಯಾಂಪ್ಕೋ ಸಂಸ್ಥೆ ದರ ಇಳಿಸದೆ ಅಲ್ಲಿಂದಲ್ಲಿಗೆ ನಿಲ್ಲಿಸಿದೆ. ನಮೂದಿಸಿದ ದರಕ್ಕೂ ಕೊಳ್ಳುವ  ದರಕ್ಕೂ ಗುಣಮಟ್ಟದ ಹೆಳೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರಲಾರಂಭಿಸಿದೆ. ಸ್ವಲ್ಪ ಅಸ್ಥಿರತೆ ಸೂಚನೆ ಕಂಡು ಬರಲಾರಂಭಿಸಿದೆ. ಸಧ್ಯವೇ ಅಡಿಕೆ ವ್ಯವಹಾರ ನಡೆಸುವ ದೈತ್ಯ ಸಹಕಾರಿ ಸಂಸ್ಥೆ ತನ್ನ ವಾರ್ಷಿಕ ಮಹಾಸಭೆ ನಡೆಯಲಿದೆ. ಆ ತನಕ ದರ ಸ್ಥಿರತೆ ಇರಬಹುದು ಎಂಬುದಾಗಿ ಆಡಿಕೊಳ್ಳುತ್ತಿದ್ದಾರೆ….

Read more
ಚಾಲಿ ಅಡಿಕೆ

ಚಾಲಿ ಮತ್ತು ಕೆಂಪು ಅಡಿಕೆ ಧಾರಣೆ ದಿನಾಂಕ:29-09-2021

ಇಂದು ಕರಾವಳಿಯ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ದರವನ್ನು ಯಥಾಸ್ಥಿತಿ ಕಾಯ್ದುಕೊಂಡ ಕಾರಣ ಖಾಸಗಿಯವರು ಅಡಿಕೆ ಬೇಕು ಎನ್ನದೆ ಕ್ಯಾಂಪ್ಕೋ ದರದಲ್ಲೇ ಖರೀದಿ ನಡೆಸುತ್ತಿದ್ದರು. ಅಡಿಕೆ ಒತ್ತಾಯದಲ್ಲಿ ಬೇಕು ಎನ್ನುವಂತಹ ಸ್ಥಿತಿ ಇರಲಿಲ್ಲ. ಶಿರಸಿ, ಸಿದ್ದಾಪುರಗಳಲ್ಲೂ ಚಾಲಿ ಸ್ವಲ್ಪ ಹಿಂದೆಯೇ ಇತ್ತು. ಓರ್ವ ವರ್ತಕರ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಸ್ವಲ್ಪ ಇಳಿಕೆ ಆಗುವ ಸಾಧ್ಯತೆ ಇದೆಯಂತೆ. ಈಗಾಗಲೇ ಸಿಪ್ಪೆ ಗೋಟು ( ಒಣಗಿದ ಸಿಪ್ಪೆ ಇರುವ  ಚಾಲಿಗೆ ಸೂಕ್ತವಾದ ಅಡಿಕೆ) ದರ ಇಳಿಕೆಯಾಗಿದೆ. ವಾರದ…

Read more
ಮಾರಾಟಕ್ಕೆ ಬಂದ ಹಸಿ ಅಡಿಕೆ

ರೋಗದಲ್ಲಿ ಉದುರಿ ಬಿದ್ದ ಅಡಿಕೆಗೂ ಬೆಲೆ –ಬೇಡಿಕೆ.

ರೋಗದ ಅಡಿಕೆ, ಬಿದ್ದ ಅಡಿಕೆಯನ್ನು ಹೆಕ್ಕಿದರೆ ಅದನ್ನು ಏನು ಮಾಡುವುದು ಎಂದು ಅದನ್ನು ನಾವು  ಅಲ್ಲೇ ಬಿಡುತ್ತೇವೆ. ಇದಕ್ಕೆ ಬೆಲೆ ಇದೆ, ಕೊಳ್ಳುವವರು ಇದ್ದಾರೆ ಎಂದರೆ ಹೆಕ್ಕದೆ ಬಿಡುತ್ತೇವೆಯೇ? ಇಲ್ಲ. ಈ ಅಡಿಕೆಗೂ ಬೇಡಿಕೆ ಬಂದಿದೆ. ಬೆಲೆಯೂ ಇದೆ.  ಅದನ್ನು ಹೆಕ್ಕದೆ ಅಲ್ಲೇ ಉಳಿಸುವುದರಿಂದ ಹೆಚ್ಚಾಗುವ ರೋಗ ಸಾಧ್ಯತೆಯೂ ಇದರಿಂದ ಕಡಿಮೆಯಾಗುತ್ತದೆ. ಸಹಕಾರ ವ್ಯವಸ್ಥೆಯಲ್ಲಿ ದೇಶಕ್ಕೆ ಮಾದರಿಯಾದ ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಈಗ ಎಳೆಯ ಬಿದ್ದ ಅಡಿಕೆಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ತೋಟಗಾರ್ಸ್ ಕೋ ಓಪರೇಟಿವ್ ಸೊಸೈಟ್…

Read more
ಅಡಿಕೆ ಮಾರಾಟ

ಅಡಿಕೆ ಧಾರಣೆ ಇಂದು ದಿ.27-09-2021, ಎಲ್ಲೆಲ್ಲಿ ಹೇಗಿದೆ?

ಅಡಿಕೆ ಧಾರಣೆ ಯಾಕೋ ಹಿಮ್ಮುಖ ಚಲನೆಯನ್ನು ತೋರಿಸುತ್ತಿದೆ. ಇಂದು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಖಾಸಗಿಯವರ ಉತ್ಸಾಹ ಕಡಿಮೆಯಾಗಿದೆ. ಸಹಕಾರಿಗಳು ಅದರಲ್ಲೂ ಕ್ಯಾಂಪ್ಕೋ ದರ ಕರಾವಳಿಯಲ್ಲಿ ಉತ್ತಮ ಚಾಲಿಗೆ ರೂ.50,000 ಕ್ಕೆ ಖರೀದಿ ಮಾಡಿದೆ. ಖಾಸಗಿಯವರೂ ಯಾರೂ 50,000 ಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿಲ್ಲ. ಕೆಂಪು ರಾಶಿ ಶಿರಸಿಯಲ್ಲಿ ಗರಿಷ್ಟ 51,399,  ಯಲ್ಲಾಪುರದಲ್ಲಿ, 52,500 ಕ್ಕೆ ಖರೀದಿ ನಡೆದಿದೆ. ಚಾಲಿ ಸಹ 48,498 ಅತ್ಯಧಿಕ ದರವಾಗಿರುತ್ತದೆ. ಕೆಲವು ವರ್ತಕರು ಸ್ವಲ್ಪ ಉಮೇದು ಕಡಿಮೆ ಎನ್ನುತ್ತಾರೆ. ಮತ್ತೆ ಕೆಲವರು…

Read more
error: Content is protected !!