ಪನ್ನಿಯೂರು-9: ರೈತನ ಅನುಭವದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಮೆಣಸಿನ ತಳಿ

ಪನ್ನಿಯೂರು-9: ರೈತರ ಅನುಭವದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಮೆಣಸಿನ ತಳಿ

ಪನ್ನಿಯೂರು ಶ್ರೇಣಿಯ ವಿವಿಧ ತಳಿಗಳ ಪೈಕಿ ಪನ್ನಿಯೂರು-9 ತಳಿಯ ಕರಿಮೆಣಸು, ಹವಾಮಾನದಲ್ಲಿ ವ್ಯತ್ಯಯ ಕಂಡುಬಂದಿರುವ ಈ ವರ್ಷದಂತಹ ಪರಿಸ್ಥಿತಿಯಲ್ಲಿಯೂ ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕೃಷಿಕ ಜೋಸೆಫ್ ಚಾಕೋ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಗೆ ಕ್ಷೇತ್ರ ಭೇಟಿಗಾಗಿ ತೆರಳಿದ ಸಂದರ್ಭದಲ್ಲಿ, ಪ್ರಗತಿಪರ ಮೆಣಸು ಬೆಳೆಗಾರರಾದ ಶ್ರೀ ಜೋಸೆಫ್ ಚಾಕೋ ಅವರ ತೋಟಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಸಿಲ್ವರ್ ಓಕ್ ಮರಗಳನ್ನು ಆಧಾರವಾಗಿಸಿಕೊಂಡು ಮೆಣಸನ್ನು ಮುಖ್ಯ ಬೆಳೆಯಾಗಿ ಬೆಳೆಸುತ್ತಿರುವ…

Read more
ಪನ್ನಿಯೂರು-9: ರೈತನ ಅನುಭವದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಮೆಣಸಿನ ತಳಿ

Panniyur-9: A Promising Pepper Variety Proven Through a Farmer’s Field Experience

Panniyur-9 Pepper Variety Shows Fantastic Performance in a Farmer’s Field at Ripponpete, Shivamogga During a recent field visit to Ripponpete in Shivamogga taluk, Karnataka, I had an opportunity to visit the farm of Mr. Joseph Chacko, a progressive farmer who has developed an impressive black pepper cultivation system using Silver Oak trees as live support….

Read more
ಮೊದಲ ಮಳೆಯ ಈ ಕೆನ್ನೀರು ಅಸಾಧಾರಣ ಶಕ್ತಿ ಹೊಂದಿದೆ

ಮೊದಲ ಮಳೆಯ ನೀರಿಗಿದೆ ಅಪರಿಮಿತ ಪೋಷಕ ಶಕ್ತಿ.

ಮೊದಲ ಮಳೆ ಬಂದರೆ ಸಾಕು, ಎಲ್ಲಾ ತರಹದ ಬೀಜಗಳು ಹುಟ್ಟುತ್ತವೆ. ಹುಲ್ಲು ಸಸ್ಯಗಳು ಒಂದೇ ಸಮನೆ ಬೆಳೆಯುತ್ತವೆ. ನೀರಾವರಿಯಲ್ಲಿ ದೊರೆಯದ ಫಲಿತಾಂಶ ಮೊದಲ ಮಳೆ ಸಿಂಚನದಲ್ಲಿ  ದೊರೆಯುತ್ತದೆ. ಆದ ಕಾರಣ  ಮೊದಲ ಮಳೆಯ ನೀರಿನಲ್ಲಿ ಅಗಾಧ ಶಕ್ತಿ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಮೊದಲ ಮಳೆ ಬಂದ ತಕ್ಷಣ ಸಸ್ಯಗಳಿಗೆ ಬೇಸಿಗೆಯ ಬೇಗೆಗೆ ಸಹಜವಾಗಿ ಬರುವ ಹೇನು ತರಹದ ಕಿಟಗಳು ತಕ್ಷಣ ಕಣ್ಮರೆಯಾಗುತ್ತದೆ. ಮಣ್ಣಿನಲಿ ಒಂದು ವಾಸನೆ ಉಂಟಾಗುತ್ತದೆ. ಇದು ಮಣ್ಣಿನಲ್ಲಿರುವ ಜೀವಿಯಾದ ಆಕ್ಟಿನೋಮೈಸಿಟ್ಸ್  ಗಳು…

Read more
ಡ್ರಾಗನ್ ಹಣ್ಣಿನ ಬೆಳೆಯಿಂದ ರೈತರ ಆದಾಯ

ಡ್ರಾಗನ್ ಹಣ್ಣಿನ ಬೆಳೆಯಿಂದ ರೈತರ ಆದಾಯ ಹೆಚ್ಚಲಾರಂಭಿಸಿದೆ

ಡ್ರಾಗನ್ ಹಣ್ಣಿನ ಬೆಳೆಗೆ ಭಾರೀ ಮಹತ್ವ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಉತ್ತಮವಾಗಿದೆ. ಈ ಬೆಳೆ ರೈತರ ಆದಾಯ ಹೆಚ್ಚಳಕ್ಕೆ ನೆರವಾಗುತ್ತಿದೆ. ನಮ್ಮ ದೇಶವಲ್ಲದೆ ಬೇರೆ ದೇಶಗಳಲ್ಲೂ ಡ್ರಾಗನ್ ಹಣ್ಣಿನ ಬೆಳೆ ಜನಪ್ರಿಅತೆ ಗಳಿಸುತ್ತಿದ್ದು, ಇದಕ್ಕೆ ಪ್ರಾಪಂಚಿಕ ಮಾರುಕಟ್ಟೆ ಇದೆ. ಇಲ್ಲೊಬ್ಬರು ಹೂವಿನ ಹಡಗಲಿಯ ಕಾಲ್ವಿ ಗ್ರಾಮದ ರೈತ  ಡ್ರಾಗನ್ ಹಣ್ಣಿನ ಬೆಳೆ ಬೆಳೆದು ಹೇಗೆ ಆದಾಯ ಹೆಚ್ಚಿಸಿಕೊಂಡರು ನೋಡೋಣ. ಕರ್ನಾಟಕ ರಾಜ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ( 65) ಒಬ್ಬ…

Read more
ಎನ್ ಸಿ ಪಟೇಲ್ ರವರಿಗೆ ಗೌರವ ಡಾಕ್ಟರೇಟ್

ಎನ್ ಸಿ ಪಟೇಲ್ ರವರಿಗೆ ಗೌರವ ಡಾಕ್ಟರೇಟ್ – ಯೋಗ್ಯ ವ್ಯಕ್ತಿಗೆ ಯೋಗ್ಯ ಪುರಸ್ಕಾರ.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರು ತಮ್ಮ  56 ನೇ ಘಟಿಕೋತ್ಸವದಲ್ಲಿ ಎನ್ ಸಿ ಪಟೇಲ್  ಎಂಬ  ಅ ತ್ಯುತ್ತಮ ಕೃಷಿಕರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಯೋಗ್ಯ ವ್ಯಕ್ತಿಗೆ ಯೋಗ್ಯ ಪುರಸ್ಕಾರ ಎನ್ನಿಸಿದೆ. ಶ್ರಿಯುತ  ಎನ್ ಸಿ ಪಟೇಲ್ ಇವರು ತಮ್ಮ ಇಡೀ ಜೀವಮಾನವನ್ನೇ ಕೃಷಿಗಾಗಿ ಮುಡಿಪಾಗಿಟ್ಟವರು. ತೋಟಗಾರಿಕಾ ಬೆಳೆಗಳಾದ ಮಾವು, ದ್ರಾಕ್ಷಿ, ದಾಳಿಂಬೆ, ಸೀಬೆ, ನೇರಳೆ ಮುಂತಾದ ಬೆಳೆಗಳನ್ನು ಅಚ್ಚುಕಟ್ಟಾಗಿ ಬೆಳೆಯುತ್ತಿರುವ ಮಾದರಿ ರೈತ. ನಾಗದಾಸನಹಳ್ಳಿ ಚಿಕ್ಕಕೆಂಪಣ್ಣ ಪಟೇಲ್ (Nagadasanahalli Chikakempanna patel) ಬೆಂಗಳೂರು ಹೊರವಲಯದ ಯಲಹಂಕದ…

Read more
ಬೀದರ್ ನಲ್ಲೂ ಸೇಬು ಬೆಳೆಯುತ್ತದೆ

ಬೀದರ್ ನಲ್ಲೂ  ಸೇಬು ಬೆಳೆಯುತ್ತದೆ- ಬೆಳೆದು ನೋಡಿದ್ದಾರೆ ಅಪ್ಪಾರಾವ್ ಭೋಸಲೆ

ಬೀದರ್ ಜಿಲ್ಲೆಯ ಕೆಂಪು ಮಣ್ಣಿನಲ್ಲಿ ಸೇಬು ಬೆಳೆ ಬೆಳೆಯಬಹುದು. ಇದು ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಬೆಳೆಯಲ್ಲ. ಇದನ್ನು ಅಪ್ಪಾರಾವ್ ಭೋಸಲೆ  ಎಂಬ ಪ್ರಗತಿಪರ ರೈತರು  ಬೆಳೆದು ತೋರಿಸಿದ್ದಾರೆ. ಕೆಲವೊಂದು ಬೆಳೆಗಳು ಸಾಂಪ್ರದಾಯಿಕವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಬೆಳೆಯುವಂತದ್ದು ಎಂದು ಇತರರು ಅದರ ಗೋಜಿಗೆ ಹೋಗುವುದಿಲ್ಲ. ಕೆಲವೇ ಕೆಲವು ಆಸಕ್ತರು, ಬಂದರೆ ಬರುತ್ತದೆ, ಹೋದರೆ ಹೋಗುತ್ತದೆ ಎಂದು ಬೆಳೆಸಿ ನೋಡುವ ಮನಸ್ಸು ಮಾಡುತ್ತಾರೆ. ಕೆಲವೊಮ್ಮೆ ಅದು ಯಶಸ್ವಿಯೂ ಆಗುತ್ತದೆ. ಇಂತಹ ಉದಾಹರಣೆ ಸಾಕಷ್ಟು ಇದೆ. ಸಾಂಪ್ರದಾಯಿಕ ಪ್ರದೇಶ,  ವಾತಾವರಣ,…

Read more
ಕೃಷಿ ಅರಣ್ಯ ದೊಂದಿಗೆ ಅರಶಿನ ಬೆಳೆ

ಕೃಷಿ ಅರಣ್ಯ ದೊಂದಿಗೆ ಅರಶಿಣ ಬೆಳೆಸಿ ಮೌಲ್ಯವರ್ದನೆ.

ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದಲ್ಲಿ ನಲವತ್ತೆರಡು ವರ್ಷದ ಲಕ್ಷ್ಮೀಕಾಂತ ಹಿಬಾರೆಯವರು ಬಿರುಬಿಸಿಲಿನ  ನಾಡಾದರೂ ತಮ್ಮ 2.5 ಎಕರೆ ಬರಡು ಭೂಮಿಯಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ. ಸಹಜ ಮತ್ತು ನೈಸರ್ಗಿಕ  ಕೃಷಿ ಅರಣ್ಯ ಪ್ರದೇಶದಲ್ಲಿ ಔಷಧಿಯುಕ್ತ ಅರಶಿಣವನ್ನು ಮಿಶ್ರ ಬೆಳೆಯಾಗಿ ಬೆಳೆದು ಉತ್ತಮ ಆದಾಯ ಸಂಪಾದಿಸಿದ್ದಾರೆ. ಮುಖ್ಯವಾಗಿ ಅರಶಿನ ಹುಡಿ ಮಾಡಿ ಮೌಲ್ಯವರ್ಧನೆ ಮಾಡಿದ್ದೇ ಈ ಲಾಭಕ್ಕೆ ಕಾರಣ. ಲಕ್ಷ್ಮೀಕಾಂತ ಹಿಬಾರೆಯವರು ಕಳೆದ 10 ವರ್ಷದಿಂದ ಕೃಷಿ ಅರಣ್ಯ ಬೇಸಾಯ ಮಾಡುತ್ತಿದ್ದಾರೆ. ಇವರ ಹೊಲದಲ್ಲಿ ಬೆಳೆದಿರುವ ಬಗೆಬಗೆಯ ಅರಣ್ಯ…

Read more
ಬೆಳೆ ಯೋಜನೆ ಇದ್ದರೆ ತೆಂಗಿನ ಬೆಳೆಯೂ ಲಾಭದಾಯಕ

ಬೆಳೆ ಯೋಜನೆ ಇದ್ದರೆ ತೆಂಗಿನ ಬೆಳೆಯೂ ಲಾಭದಾಯಕವೇ.

ತೆಂಗು ಬೆಳೆ ಲಾಭದಾಯಕ ಎಂದರೆ ಎಲ್ಲರೂ ನಗುತ್ತಾರೆ. ಆದರೆ ತೆಂಗಿನ ಬೆಳೆಯೊಂದರಿಂದಲೇ ಲಾಭ ಇಲ್ಲ. ಅದರ ಜೊತೆಗೆ ಬೇರೆ ಬೇರೆ ಬೆಳೆ ಬೆಳೆಸಬೇಕು. ಉತ್ತಮ ಇಳುವರಿ ಕೊಡುವ ತಳಿಗಳನ್ನು ಆಯ್ಕೆ ಮಾಡಬೇಕು. ಇಂತಹ ಬೆಳೆ ಯೋಜನೆಯಿಂದ ತೆಂಗಿನ ಬೆಳೆ ಸಹ ಲಾಭದಾಯಕಬಲ್ಲದು ಎನ್ನುತ್ತಾರೆ  ಈ ರೈತ. ಹೈಬ್ರೀಡ್ ತಳಿಯ ತೆಂಗು, ಅದರ ಮಧ್ಯಂತರದಲ್ಲಿ ಬಾಳೆ,  ಅರಶಿನ, ಸುವರ್ಣ ಗಡ್ಡೆ,  ನೀರಿನ ಕೆರೆಯಲ್ಲಿ ಮೀನು ಸಾಕಾಣಿಕೆ, ಬೀಜೋತ್ಪಾದನೆಗಾಗಿ ಭತ್ತದ ಬೆಳೆ, ಬೇಸಿಗೆಯಲ್ಲಿ ಭಾರೀ ಲಾಭ ಕೊಡುವ ಲಿಂಬೆ, ಹಲಸು,…

Read more
ತೋಟಕ್ಕೆ ಮಣ್ಣು ಹಾಕಲು ಸಿದ್ದತೆ

ತೋಟಕ್ಕೆ ಮಣ್ಣು ಹಾಕುವುದರಿಂದ ಪ್ರಯೋಜನಗಳು

ಹೆಚ್ಚಿನವರು ತೋಟಕ್ಕೆ ಬಹಳ ಖರ್ಚು ಮಾಡಿ ಹೊರಗಡೆಯಿಂದ ಮಣ್ಣು  ತರಿಸಿ ಹಾಕುತ್ತಾರೆ.  ಹೊಸ ಮಣ್ಣು ಫಲವತ್ತಾಗಿದ್ದು, ಹೊಲದ ಸ್ಥಿತಿ ಸರಿಯಾಗಿದ್ದರೆ ಇದು ಬಹಳ ಒಳ್ಳೆಯದು. ಅಂಟು , ಜಿಗುಟು ಮಣ್ಣು ದಪ್ಪಕ್ಕೆ ಹಾಸಿದರೆ   ಬೇರಿಗೆ ಉಸಿರು ಕಟ್ಟಿದಂತಾಗಬಹುದು. ಬಹಳಷ್ಟು ಕಡೆ ಮಳೆಗಾಲದ ಮಳೆ ಹನಿಗಳ ಹೊಡೆತಕ್ಕೆ ಮಣ್ಣು ಸವಕಳಿಯಾಗಿ ಫಲವತ್ತತೆ ಕಡಿಮೆಯಾಗುತ್ತದೆ. ತೋಟದಲ್ಲಿ ಕಲ್ಲುಗಳೇ ಹೆಚ್ಚು ಇರುತ್ತವೆ. ಅದಕ್ಕಾಗಿ ಹೊಸ ಮಣ್ಣು ಹಾಕಿ ಅದನ್ನು ಮತ್ತೆ ಪುನಃಶ್ಚೇತನ ಮಾಡುವುದು  ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿ. ಇದರಲ್ಲಿ…

Read more
5th year yield

ARECA NUT- sustainable yield in 5th year .

Many farmers say we are planted areca nut but it is not yet started yield still it reached to  5-6 years. Here one farmer, Mr Deepak says without much care, it is possible to get Sustainable yield in 5th year. If you nourished well, even local varieties also start flowering in 4th year, and  give…

Read more
error: Content is protected !!