ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.

ಸಾವಯವ ರಸಗೊಬ್ಬರ ಎಂದರೆ ಅದು ರಾಸಾಯನಿಕ ಗೊಬ್ಬರಗಳಿಗೆ ಸಮನಾದ ಫಲಿತಾಂಶವನ್ನು ಕೊಡುವಂತಹ ಸಾವಯವ ಮೂಲವಸ್ತುಗಳನ್ನು ಸೇರಿಸಿ ತಯಾರಿಸಿದ ಗೊಬ್ಬರ. ರಸ ಗೊಬ್ಬರ, ರಾಸಾಯನಿಕ ಗೊಬ್ಬರ ಬೇರೆ ಬೇರೆ. ರಸ ಗೊಬ್ಬರ ಎಂಬುದು ಹೆಚ್ಚು ಸಾತ್ವಾಂಶಗಳ ಯಾವುದೇ ಮೂಲವಸ್ತುಗಳ ಮೂಲಕ ತಯಾರಿಸಬಹುದು. ‘ರಸ’ ಎಂದರೆ ಹೆಚ್ಚು ಸತ್ವ ಉಳ್ಳ ತಯಾರಿಕೆ.   ರಾಸಾಯನಿಕ ಮಾತ್ರವಲ್ಲ, ಸಾವಯವ ಮೂಲದಲ್ಲೂ ರಸಗೊಬ್ಬರ ತಯಾರಿಸಬಾರದು ಎಂದಿಲ್ಲ. ತಯಾರಿಸಬಹುದು. ಇದು ಹೊಸ ತಂತ್ರಜ್ಞಾನವಂತೂ ಅಲ್ಲ. ಮರೆತು ಹೋಗಿರಬಹುದು ಅಥವಾ ಕಷ್ಟ ಎಂದು ಬಿಟ್ಟಿರಬಹುದು. ಸಾವಯವ…

Read more

ಕೀಟಗಳ ನಿಯಂತ್ರಣಕ್ಕೆ ಹೀಗೆ ಮಾಡಿದರೆ ತುಂಬಾ ಅನುಕೂಲ.

 ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಬಂಧಿಸುವುದು. ಕೀಟಗಳಿಗೆ ಬೇಕಾದಷ್ಟು ಅಹಾರ ಕೊಟ್ಟು ಅವುಗಳನ್ನು ಅಲ್ಲೇ ಬಂಧಿಸುವುದು ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ. ನಾವು ಕೈಯಿಂದ ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ ಸಿಂಪಡಿಸಬೇಕು ಎಂದು ಕೇಳುತ್ತೇವೆಯೇ ವಿನಹ ಏನು ಮಾಡಬೇಕು ಎಂದು ಕೇಳುತ್ತಿಲ್ಲ. ತಜ್ಞರ ಬಳಿಗೆ ರೈತರು ಹೋಗುವುದಿಲ್ಲ….

Read more

ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
ಸಾವಯವ ತ್ಯಾಜ್ಯಗಳನ್ನು ಮಧ್ಯದಲ್ಲಿ ಹಾಕಬೇಕು.

ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವ ವೈಜ್ಞಾನಿಕ ವಿಧಾನ.

ಹಸಿ ಸಾವಯವ ಗೊಬ್ಬರಗಳನ್ನು ಹಾಕಿದ ಸ್ಥಳದಲ್ಲಿ ನೆಲದ ಹುಲ್ಲು ಇತ್ಯಾದಿ ಸತ್ತು ಹೋಗುತ್ತದೆ.  ಕಳಿಯುವ ಕ್ರಿಯೆಯಲ್ಲಿ ಕೆಲವು ಆಮ್ಲಗಳು ಮತ್ತು ಶಾಖ ಬಿಡುಗಡೆಯಾಗಿ ನೆಲಕ್ಕೆ ಅದು ಸ್ವಲ್ಪ ಮಟ್ಟಿಗೆ ಪ್ರಸಾರವಾಗುತ್ತದೆ. ಒಂದು ವೇಳೆ ನೀವು ಹಸಿ ಸಾವಯವ ಗೊಬ್ಬರಗಳನ್ನು ಮರದ – ಸಸಿಯ ಬುಡಕ್ಕೆ ಹಾಕಿದರೆ ಅದರ ಕಾಂಡದ ಭಾಗಕ್ಕೆ ಘಾಸಿ ಉಂಟಾಗುತ್ತದೆ. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬೇಕಿದ್ದರೆ ಅದರ ಜೊತೆಗೆ ತೇವಾಂಶ ( ನೀರು) ಅಗತ್ಯ….

Read more
ಬಳಕೆಗೆ ಸಿದ್ದವಾದ ಸುಡುಮಣ್ಣು – Sudumannu ready to use.

ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.

ಎಲ್ಲಾ  ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ  ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ,  ಅದು ಪೂರ್ಣ ಸ್ಟೆರಿಲೈಸ್ ಮಾಡಿದ  ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ…

Read more
ಗೋಬರ್ ಗ್ಯಾಸ್ ಸ್ಥಾವರ

ಗೋಬರ್ ಗ್ಯಾಸ್ ಸ್ಲರಿಯಲ್ಲಿ ಸತ್ವ ಇದೆ.

ಸಗಣಿಯನ್ನು ಹಾಗೆಯೇ ಬೆಳೆಗಳಿಗೆ ಹಾಕುವುದಕ್ಕಿಂತ ಅದನ್ನು ದ್ರವೀಕರಿಸಿ ಕೊಡುವುದರಿಂದ ಅದರ ಪೂರ್ಣ ಸತ್ವಗಳು  ಬೆಳೆಗಳಿಗೆ  ದೊರೆಯುತ್ತದೆ. ಅನಿಲ ಉತ್ಪಾದನೆ ಅಗುವಾಗ ಸಗಣಿಯ ಸಾರ ಕಡಿಮೆಯಾಗುತ್ತದೆ ಎಂಬುದು ನಿಜವಲ್ಲ. ಅನಿಲ ಉತ್ಪಾದನೆಗೆ ಬೇಕಾಗುವ ಅಂಶವೇ ಬೇರೆ. ಬೆಳೆಗಳಿಗೆ ಬೇಕಾಗುವುವಂತದ್ದು ಅದರಲ್ಲೇ ಉಳಿಯುತ್ತದೆ.ಪ್ರತೀಯೊಬ್ಬ ಗೋಬರ್ ಗ್ಯಾಸ್ ಸ್ಲರಿ ಬಳಕೆದಾರ ತಿಳಿಯಬೇಕಾದ  ಮಾಹಿತಿ ಇಲ್ಲಿದೆ. ಹಳ್ಳಿಯಲ್ಲಿ ಕೃಷಿಕರ ಮನೆಯಲ್ಲಿ ಬಯೋಗ್ಯಾಸ್ ಅಥವಾ ಗೋಬರ್ ಗ್ಯಾಸ್ ಇದ್ದರೆ ಸಿದ್ದ ಗೊಬ್ಬರ ಇದ್ದಂತೆ. ಒಂದೆರಡು ದನ ಇದ್ದವರೂ ಗೋಬರ್ ಗ್ಯಾಸ್ ಮಾಡಿಕೊಳ್ಳಬಹುದು. ಹೆಚ್ಚು ದನ…

Read more
ಬೂದಿಯ ಮೂಲಕ ಕೀಟ ನಿಯಂತ್ರಣ

ಸಾವಯವ ಕೀಟ –ರೋಗ-ನಿಯಂತ್ರಣ ವಿಧಾನ.

ಸರ್ವ ರೋಗಕ್ಕೆ ಬೂದಿ ಮದ್ದು ಎಂಬುದನ್ನು ಎಲ್ಲರೂ ಕೇಳಿರಬಹುದು. ಬೂದಿ ಎಂದರೆ ಅದು ಮರವನ್ನು ಸುಟ್ಟಾಗ ಸಿಗುವ ವಸ್ತು, ಇದು ಕ್ಷಾರೀಯ. ಇದನ್ನು ಬೆಳೆಗಳ  ಮೇಲೆ ಚೆಲ್ಲಿದಾಗ ಅದು ಒಂದು ಪೊಟ್ಯಾಶಿಯಂ ಸತ್ವದ ಪೋಷಕವಾಗಿಯೂ ,  ಕೀಟ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಇದನ್ನು ಬಹುಸ್ತರದ ಸಾವಯವ ಕೀಟ –ರೋಗ-ನಿಯಂತ್ರ ಕ ಎಂಬುದಾಗಿ ಹಿರಿಯರು ಹೇಳುತ್ತಾ ಬಂದಿದ್ದಾರೆ. ದುರದೃಷ್ಟವೆಂದರೆ ಈಗ  ಅಡುಗೆ ಒಲೆಗೆ ಗ್ಯಾಸ್  ಬಂದಿದೆ. ಬಿಸಿ ನೀರ ಸ್ನಾನಕ್ಕೆ ಸೋಲಾರ್ ಬಂದಿದೆ. ಕಟ್ಟಿಗೆ ಸುಟ್ಟ ಬೂದಿ…

Read more
tasty vegetable grown with out manure

ನಾವು ತಿನ್ನುವ ಆಹಾರ ರುಚಿ ಇರುವುದಿಲ್ಲ ಕಾರಣ ಇಷ್ಟೇ

ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅದಕ್ಕೆ ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ. ಮಣ್ಣಿಗೆ ಜೀವ ಇದೆ.ಇದು ಕೃಷಿಗೆ ಜೀವ ಕೊಡುತ್ತದೆ . ಮಣ್ಣಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸೇರಿಕೊಂಡಿವೆ . ಮಣ್ಣು ಇಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಜೀವಿ ಇಲ್ಲದೇ ಮಣ್ಣು ಆಗಲು ಸಾಧ್ಯವಿಲ್ಲ. ಒಂದು ಇಂಚು ಮಣ್ಣು ಆಗಬೇಕಾದರೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಇಂದು ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು,…

Read more

ಸಾವಯವ ಕೃಷಿಗೆ ದೊಣ್ಣೆ ನಾಯಕರ ಸಲಹೆ ಬೇಕಾಗಿಲ್ಲ.

ಸಾವಯವ ಕೃಷಿ ಎಂಬುದು ನಮ್ಮ ಪರಂಪರೆಯಿಂದ ನಡೆದು ಬಂದ ಕೃಷಿ ಪದ್ದತಿ. ಇತ್ತೀಚೆಗೆ ಕೆಲವು ಜನರಿಗೆ ಸಾವಯವ  ಹೆಸರೇ  ಮೈಮೇಲೆ ದೆವ್ವ ಬಂದಂತೆ  ಬರುತ್ತಿರುವುದು ವಿಪರ್ಯಾಸ. ಸಾವಯವ ಕೃಷಿ ಎಂದರೆ ಮಣ್ಣನ್ನು ಫಲವತ್ತಾಗಿಸಿಕೊಂಡು ಅದನ್ನೇ ಪೊಷಕಾಂಶ ಭರಿತವಾದ ಬೆಳೆ ಮಾಧ್ಯಮವಾಗಿ ಮಾಡಿ ಕೃಷಿ ಮಾಡುವುದು.  ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಗೆ ಬೇರೆ ಪೋಷಕಾಂಶಗಳು ಬೇಕಾಗುವುದಿಲ್ಲ. ಬೆಳೆ ಬೆಳೆದಂತೆ ಫಲವತ್ತಾದ ಮಣ್ಣಿನ ಪೋಷಕಗಳು ಉಪಯೋಗವಾಗಿ ಕಡಿಮೆಯಾಗುತ್ತಾ ಬರುತ್ತದೆ. ಅದನ್ನು ಮತ್ತೆ ಮತ್ತೆ ನವೀಕರಿಸುತ್ತಾ ಬೆಳೆ ಬೆಳೆಯಬಹುದು. ಈ…

Read more

ಜೈವಿಕ ಬೆಳೆ ಪೋಷಕಗಳನ್ನು ಬಳಸುವಾಗ ಎಚ್ಚರವಿರಲಿ.

ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಬಗ್ಗೆ ಹೇಳುವುದೇ ಆದರೆ ಅವುಗಳ ಅಸಮತೋಲನ ಉಂಟಾದರೆ ಅದೂ ಸಹ ತೊಂದರೆದಾಯಕ. ಇದು ಜೈವಿಕ ಉತ್ಪನ್ನಗಳ ಪ್ರಚಾರದ ಕಾಲ. ಸಾವಯವ , ಹಾನಿ ರಹಿತ, ಪರಿಸರ ಸ್ನೇಹಿ, ಎಂದೆಲ್ಲಾ ಪ್ರಚಾರಗಳ ಮೂಲಕ ರೈತರಿಗೆ ಜೈವಿಕ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ. ಜೈವಿಕ ಉತ್ಪನ್ನ್ಗಗಳ ಬಗ್ಗೆ ಹೇಳುವುದೆಲ್ಲಾ ನಿಜವಲ್ಲ. ಇದೂ ಸಹ ಅತಿಯಾದರೆ ತೊಂದರೆ ಉಂಟು. ಕೃಷಿಕರಲ್ಲಿ ಕೆಲವರಿಗೆ ಕಾಲು ಹಿಮ್ಮಡಿ ಒಡೆಯುವ ಸಮಸ್ಯೆ ಇದೆ. ಹೆಚ್ಚಾಗಿ ಇದು ತೋಟದಲ್ಲಿ ಒಡಾಡುವಾಗ, ಧೂಳು ಇರುವ ಸ್ಥಳದಲ್ಲಿ ಹೋಗುವಾಗ…

Read more
error: Content is protected !!