ಫಲವತ್ತತೆ ಕಳೆದುಕೊಳ್ಳುತ್ತಿರುವ ಕೃಷಿ ಭೂಮಿ- ಭವಿಷ್ಯದ ಆತಂಕ.
ನಮ್ಮ ದೇಶದ 50% ಕ್ಕೂ ಹೆಚ್ಚಿನ ಕೃಷಿ ಭೂಮಿ ಸಾರ ಕಳೆದುಕೊಂಡು ಬರಡಾಗುತ್ತಿರುವುದು ಭಾರತ ಸರಕಾರದ ಅಧ್ಯಯನಗಳಿಂದ ತಿಳಿದು ಬಂದಿದೆ. ಅಧ್ಯಯನದ ವರದಿ ಇರಲಿ. ನಮಗೆಲ್ಲಾ ಈ ವಿಚಾರ ಗಮನಕ್ಕೆ ಬಂದಿರುವಂತದ್ದೇ. ನಮ್ಮ ಕೃಷಿ ಭೂಮಿಯಲ್ಲಿ ಬೆಳೆ ಏನೋ ಹಿಂದಿಗಿಂತ ಹೆಚ್ಚು ಬರಬಹುದು. ಆದರೆ ಖರ್ಚು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತರ ಬೆಳೆ ನಿರ್ವಹಣೆ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಬೇರೆ ಏನೂ ಅಲ್ಲ. ಮಣ್ಣು ತನ್ನ ಸಾರವನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳುತ್ತಿದೆ. ಇದು ಗಂಭೀರ…
