ಕೊಕ್ಕೋ ಭರವಸೆಯ ಹೈಬ್ರೀಡ್ ತಳಿಗಳು

ಕೊಕ್ಕೋ ದ ಭರವಸೆಯ ಹೈಬ್ರೀಡ್ ತಳಿಗಳು.

ಅಧಿಕ ಇಳುವರಿ ನೀಡಬಲ್ಲ ಗುಣದ ಕೊಕ್ಕೋ ತಳಿ ಪಡೆಯಲು ಸಂಶೋಧಕರ ಶ್ರಮಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.  ಅದರ ಫಲವೇ ಹೈಬ್ರೀಡ್ ಕೊಕ್ಕೋ ತಳಿಗಳು. ಹೊಸತಾಗಿ ಕೊಕ್ಕೊ ಬೆಳೆಸುವವರು ಇಂತಹ ಉತ್ತಮ ತಳಿ ಬೆಳೆಸುವುದು ಲಾಭದಾಯಕ. ಸಿ ಪಿ ಸಿ ಆರ್ ಐ ಕೇಂದ್ರ ವಿಟ್ಲದಲ್ಲಿ ಉತ್ತಮ ಇಳುವರಿ ಮತ್ತು ನೀರಿನ ಕೊರತೆ, ವಿವಿಧ ಹವಾಗುಣಕ್ಕನುಗುಣಕ್ಕೆ ಹೊಂದಿಕೆಯಾಗುವಂತೆ ಸುಮಾರು 5 ಸಂಕರ ತಳಿಗಳೂ ಕೊಕ್ಕೋದಲ್ಲಿ ಅಭಿವೃದ್ದಿಯಾಗಿದೆ. ಜೊತೆಗೆ ಇನ್ನೂ 2 ತಳಿಗಳು ಭರವಸೆಯ ತಳಿಗಳಾಗಿ ಕೆಲವೇ ಸಮಯದಲ್ಲಿ  ಬಿಡುಗಡೆಯಾಗುವ ಹಂತದಲ್ಲಿವೆ….

Read more
ಸಾಗುವಾನಿ ಮರದ ಬುಡದಲ್ಲಿ ಒಣ ಸೊಪ್ಪು

ಸಾಗುವಾನಿ ಮರದ ಬುಡದ ಮಣ್ಣು ಬಂಗಾರ.

ನಿಮ್ಮಲ್ಲಿ ಸಾಗುವಾನಿ ಮರ ಇದೆಯೇ , ಅದರ ಬುಡದಲ್ಲಿ ಬಿದ್ದ ತರಗೆಲೆಯ ಅಡಿಯ ಮಣ್ಣನ್ನು ಒಮ್ಮೆ ಗಮನ ಇಟ್ಟು ನೋಡಿ. ಇದು ಫಲವತ್ತಾದ ರಸಸಾರ ತಟಸ್ಥ ಇರುವ ಮೆಕ್ಕಲು ಮಣ್ಣಾಗಿರುತ್ತದೆ. ಸಾಗುವಾನಿ ಮರದ ಎಲೆಗಳು ಮಣ್ಣನ್ನು ಫಲವತ್ತಾಗಿಸುತ್ತದೆ, ಹಾಗೆಯೇ ಮಣ್ಣಿನ pH  ಅನ್ನು ಸರಿಮಾಡಿಕೊಡುತ್ತದೆ. ಸಾಗುವಾನಿ ಮರದ ಬುಡದಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ಇರುತ್ತವೆ ಎಂಬುದಾಗಿ ಕೇರಳದ ಅರಣ್ಯ ಸಂಶೊಧಾನ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ಇದರ ಎಲೆಯ ಗಾತ್ರ, ಅದರ ತೂಕ, ಅದು ಕರಗುವ ವೇಗ…

Read more
ಸಂಪಧ್ಭರಿತ ಕಾಂಪೋಸ್ಟ್ ಗೊಬ್ಬರ ಹೇಗೆ ತಯಾರಿಸುವುದು

ಸಂಪಧ್ಭರಿತ ಕಾಂಪೋಸ್ಟ್ ಗೊಬ್ಬರ ಹೇಗೆ ತಯಾರಿಸುವುದು?

ಸಾವಯವ ಗೊಬ್ಬರದ ಪ್ರಮುಖ ಮೂಲ ಕಾಂಪೋಸ್ಟ್. ಬಹುತೇಕ ಎಲ್ಲಾ ಕೃಷಿಕರೂ ಸಾವಯವ ಗೊಬ್ಬರ ತಯಾರಿಸುತ್ತಾರೆ. ಆದರೆ ಹೆಚ್ಚಿನವರು ವೈಜ್ಞಾನಿಕವಾಗಿ ಹೇಗೆ ತಯಾರಿಸಬೇಕೋ ಹಾಗೆ ತಯಾರಿಸದ ಕಾರಣ ಅದರ ಬಳಕೆಯಿಂದ ಸರಿಯಾದ ಫಲವನ್ನು ಪಡೆಯುತ್ತಿಲ್ಲ.  ವೈಜ್ಞಾನಿಕವಾಗಿ  ತಯಾರಿಸಿದ ಕಾಂಪೋಸ್ಟ್ ಗೊಬ್ಬರ ಎರೆಹುಳು ಗೊಬ್ಬರದಷ್ಟೇ ಸತ್ವವನ್ನು ಒಳಗೊಂಡಿರುತ್ತದೆ ಹಾಗೆಯೇ  ಕೊಂಡು ತರುವ ಚೀಲದಲ್ಲಿ ತುಂಬಿದ ಸಾವಯವ ಗೊಬ್ಬರಕ್ಕಿಂತ  ಅದೆಷ್ಟೋ ಪಾಲು  ಫಲಿತಾಂಶವನ್ನು  ಕೊಡುತ್ತದೆ. ಇದನ್ನು ಮಾಡುವುದಕ್ಕೆ ಕಷ್ಟ ಏನೂ ಇಲ್ಲ. ಬರೇ ಸರಳ.ಆದರೆ ನಾವು ಅಜ್ಜ ನೆಟ್ಟ ಆಲದ ಮರಕ್ಕೆ…

Read more
ಕಳೆನಾಶಕಗಳಿಂದ ಫಲವತ್ತತೆ ಕ್ಷೀಣಿಸುತ್ತದೆ. ಹೇಗೆ?

ಕಳೆನಾಶಕಗಳಿಂದ ಫಲವತ್ತತೆ ಕ್ಷೀಣಿಸುತ್ತದೆ. ಹೇಗೆ?

ನಮ್ಮ ಹೊಲಗಳ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಜನ ಸಾವಯವ ಗೊಬ್ಬರ ಕಡಿಮೆಯಾಗಿ ಹೀಗಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇದು ಸ್ವಲ್ಪ ಮಟ್ಟಿಗೆ  ಸರಿಯಾದರೂ ಅದರ ಜೊತೆಗೆ ಇನ್ನೂ ಒಂದು ಕಾರಣ ಇದೆ. ಅದು ಕಳೆನಾಶಕಗಳ ಬಳಕೆ. ಕಳೆನಾಶಕಗಳನ್ನು ಬಳಸಿದಲ್ಲಿ ಮಣ್ಣಿನ ರಚನೆ ಹಾಳಾಗುತ್ತದೆ. ಅದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಕಳೆ ನಾಶಕ ಇದು ತೋಟವನ್ನು ಚೊಕ್ಕವಾಗಿರಿಸುತ್ತದೆ. ಒಡಾಡುವುದಕ್ಕೆ, ಸುಲಭ ಎಂಬುದು ನಮ್ಮ  ಅಭಿಪ್ರಾಯ. ಕಳೆಗಳು ಬೆಳೆಗೆ ಪೂರೈಸಿದ ಪೋಷಕಗಳನ್ನು ಬೇಗ ಕಬಳಿಸುತ್ತದೆ,…

Read more
ಸುಣ್ಣ ಹೆಚ್ಚಾದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣಕ್ಕೆ ಸುಣ್ಣ ಹೆಚ್ಚಾದರೆ ಏನಾಗುತ್ತದೆ?

ಬೋರ್ಡೋ ದ್ರಾವಣ ತಯಾರಿಸಲು ಬಳಸುವ ಮೂಲವಸ್ತುಗಳೆಂದರೆ  ಮೈಲುತುತ್ತೆ ಮತ್ತು ಸುಣ್ಣ. ಇವೆರಡರ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಕರೆಯುತ್ತಾರೆ. ಇಲ್ಲಿ ಸಮಪಾಕ ಎಂಬ ಒಂದು ತತ್ವ ಇದೆ. ಇದನ್ನು ಪಾಲಿಸದಿದ್ದರೆ  ಅದು ಸರಿಯಾದ ಮಿಶ್ರಣ ಆಗಲಾರದು. ಇದನ್ನು ಪ್ರತೀಯೊಬ್ಬ ರೈತರೂ ತಿಳಿದಿರಬೇಕು. ಅಡಿಕೆ ಮರದ ಕೊಳೆ ರೋಗ ನಿಯಂತ್ರಣಕ್ಕೆ ಹಾಗೆಯೇ ಇನ್ನಿತರ ಬೆಳೆಗಳ ಕೊಳೆ ರೋಗದ ಶಿಲೀಂದ್ರಗಳನ್ನು ತಡೆಯಲು ಶಿಫಾರಿತ ಪ್ರಮಾಣದ ಬೋರ್ಡೋ ದ್ರಾವಣ ಎಂದರೆ ಶೇ. 1 . ಅಂದರೆ 1 ಕಿಲೋ ಮೈಲು…

Read more
ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪಡಿಸಿದರೆ ಈ ರೀತಿ ಲೇಪನ ಆಗಿ ಉತ್ತಮ ರಕ್ಷಣೆ ಸಿಗುತ್ತದೆ.

ಮಳೆಗಾಲಕ್ಕೆ ಮುಂಚೆ ಔಷಧಿ  ಸಿಂಪರಣೆಯಿಂದ ಪ್ರಯೋಜನ ಏನು?

ಅಡಿಕೆ ಬೆಳೆಗಾರರು ಮಳೆಗಾಲ ಪ್ರಾರಂಭವಾದ ನಂತರ ಕೊಳೆ ಔಷಧಿ ಸಿಂಪಡಿಸಿದರೆ ಸಾಕು ಎಂದು  ಭಾವಿಸಿದ್ದರೆ ಅದು ತಪ್ಪು. ಮಳೆ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದ ತಕ್ಷಣ ಕೊಳೆ ಔಷಧಿ ಸಿಂಪರಣೆ ಮಾಡಿದರೆ ತುಂಬಾ ಪ್ರಯೋಜನ ಇದೆ.ಕೊಳೆ ರೋಗ ಬಾರದಂತೆ ರಕ್ಷಣೆ (preventive) ನೀಡುವ ಎಲ್ಲಾ ಔಷಧಿಗಳೂ ರೋಗ ಬರುವ ಮುಂಚೆ ಬಳಕೆ ಮಾಡಿದರೆ ಮಾತ್ರ ಫಲಪ್ರದವಾಗಿರುತ್ತವೆ. ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಸರಿಯಾಗಿ ಮಳೆ ಬಂದು ತಂಪಾದ ನಂತರ ಕೊಳೆ ರೋಗ ಬಾರದಂತೆ ತಡೆಯುವ ಬೋರ್ಡೋ ದ್ರಾವಣ ಅಥವಾ ಇನ್ಯಾವುದೋ…

Read more
ಬಾಳೆಯ ಈ ಶಿಲೀಂದ್ರ ರೋಗಕ್ಕೆ ಏನು ಪರಿಹಾರ ?

ಬಾಳೆಯ ಈ ಶಿಲೀಂದ್ರರೋಗಕ್ಕೆ ಏನು ಪರಿಹಾರ ?

ಮಳೆಗಾಲ ಪ್ರಾರಂಭವಾಗಿ ಮುಗಿಯುವ ಸಮಯಕ್ಕೆ ಬಾಳೆ ಬೆಳೆಯಲ್ಲಿ ಎಲೆ  ಹಳದಿಯಾಗುವ ಸಮಸ್ಯೆ ಎಲ್ಲೆಡೆಯೂ ಕಾಣಿಸುತ್ತದೆ. ಇದನ್ನು ಉಪಚರಿಸದೇ ಬಿಟ್ಟರೆ  ಗಿಡ ಬಾರೀ ಸೊರಗುತ್ತದೆ. ಗೊನೆಯೂ ಚೆನ್ನಾಗಿ ಬರುವುದಿಲ್ಲ. ಮಿತಿ ಮೀರಿದರೆ ಬಾಳೆ ಸಾಯುವುದೂ ಇದೆ. ಇದಕ್ಕೆ ಏನು ಉಪಚಾರ ಮಾಡಬೇಕು. ಯಾವ ಮುನ್ನೆಚ್ಚರಿಕೆ ಅಗತ್ಯ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಎಲೆಗೆ ಬರುವ  ಎರಡು ಪ್ರಮುಖ ರೋಗಗಳೆಂದರೆ  ಎಲೆ ಹಳದಿಯಾಗಿ ಒಣಗುವುದು ಮತ್ತು ಎಲೆಗಳು ಗುಚ್ಚವಾಗುತ್ತಾ ಬಂದು ಸಸ್ಯ ಸತ್ತು ಹೋಗುವುದು. ಮೊದಲನೆಯ ಸಮಸ್ಯೆಗೆ…

Read more
ಕುಂಟು ನೇರಳೆ-ಹೂವು

ಎಲ್ಲಿ ಹೋದವೋ ಕುಂಟುನೇರಳೆ-ಕುಂಟಾಲ ಮರಗಳು!

ಕುಂಟು ನೇರಳೆ , ಕುಂಟಾಲ ಎಂಬ ಕಾಡು ಸಸ್ಯ ಒಂದು ಕಾಲದಲ್ಲಿ ಎಲ್ಲಾ ಕಡೆಯಲ್ಲೂ  ಕಾಣಸಿಗುತ್ತಿದ್ದ ಸಸ್ಯವಾಗಿತ್ತು. ಈಗ ಅದು ಭಾರೀ ಕ್ಷೀಣಗೊಳುತ್ತಿದ್ದು, ಪರಿಸರದ ಅಸಮತೋಲನಕ್ಕೆ ಇದೂ ಒಂದು ಕಾರಣವಾಗಿದೆ. ಈ ಸಸ್ಯವನ್ನು ಅವಲಂಭಿಸಿ ಬದುಕುವ ಒಂದಷ್ಟು ಜೀವಿಗಳು ಆಹಾರವಿಲ್ಲದೆ ಬೇರೆ ಬೆಳೆ ಆಶ್ರಯಿಸುವಂತಾಗಿದೆ. ಕುಂಟು ನೇರಳೆ, ಅಥವಾ ಕುಂಟಾಲ ಇದು ನೇರಳೆ ಜಾತಿಯ ಸಸ್ಯವಾಗಿದ್ದು, ಹಿಂದೆ ಎಲ್ಲಾ ಕಡೆ ಇದರ ಸಸ್ಯಗಳು, ಮರಗಳು ಇದ್ದವು.ಇದರ ವೈಜ್ಞಾನಿಕ ಹೆಸರು Syzygium caryophyllatum  , ಹೆಚ್ಚು ಎತ್ತರಕ್ಕೆ ಬೆಳೆಯದ…

Read more
ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ

ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ?

ಅಡುಗೆ ಮಾಡಿದ ಪದಾರ್ಥ  ಹಳಸಲು ಆಗುವುದು ಗೊತ್ತು. ಇನ್ನು ಮಣ್ಣು ಹಳಸುವುದು ಇದು ಯಾವುದಪ್ಪಾ ಹೊಸ ವಿಷಯ?  ಇದೇನೂ ಹೊಸ ವಿಷಯವಲ್ಲ. ನಮ್ಮ ಹಿರಿಯರಿಗೆ ಇದು ಗೊತ್ತಿತ್ತು. ನಮಗೆ ಮಾತ್ರ ಇದು ಗೊತ್ತಿಲ್ಲ. ಹಳಸುಮಣ್ಣು  ಒಂದು ರೀತಿಯಲ್ಲಿ ಸಸ್ಯ ಬೆಳವಣಿಗೆಗೆ ವಿಷ ಎಂತಲೇ ಹೇಳಬಹುದು. ಬಹುತೇಕ ಜನ ಇಂತಹ ಹಾಕಿ ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಬಹಳಷ್ಟು ಜನ ರೈತರು ಹೀಗೆ ಮಾಡಿಕೊಂಡು ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಏನಿದು ಮಣ್ಣು ಹಳಸುವುದು ನೋಡೋಣ. ಮಣ್ಣು ಯಾವಾಗಲೂ ಹಿತಮಿತ ತೇವಾಂಶದಿಂದ…

Read more
ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

 ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

ಭೆಳೆ ಸಂರಕ್ಷಣೆಗೆ ಔಷಧಿ ಸಿಂಪರಣೆ ಅನಿವಾರ್ಯ.ರೈತರು ಅವರವರು ಬೆಳೆಸುವ ಬೆಳೆಗೆ ಕೀಟಕ್ಕೆ ಕೀಟನಾಶಕವನ್ನೂ ರೋಗಕ್ಕೆ ರೋಗನಾಶವನ್ನೂ ಸಿಂಪರಣೆ ಮಾಡುತ್ತಾರೆ. ಆದರೆ ಹೆಚ್ಚಿನವರು ಸಿಂಪರಣೆ ವಿಚಾರದಲ್ಲಿ  ಸ್ವಲ್ಪ ಅಜಾಗರೂಕತೆ ಅಥವಾ ಅನಾವ್ಯಯವನ್ನು ಮಾಡುತ್ತಾರೆ.  ಸಮರ್ಪಕ  ಸಿಂಪರಣಾ ವಿಧಾನವನ್ನು ಪಾಲಿಸಿದರೆ ಖರ್ಚೂ ಉಳಿತಾಯ. ಪರಿಸರಕ್ಕೂ ಕಡಿಮೆ. ಸುಮಾರು ವರ್ಷಕ್ಕೆ ಹಿಂದೆ ಒಮ್ಮೆ ಉಡುಪಿಯ ಮಲ್ಲಿಗೆ ಬೆಳೆಯುವ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಮಲ್ಲಿಗೆ ಬೆಳೆಯುವ ಕೆಲವರು ಔಷಧಿ ಸಿಂಪಡಿಸುವ ಕ್ರಮವನ್ನು ಕೇಳಿದಾಗ ಆಶ್ಚರ್ಯವಾಯಿತು. ಅಂಗಡಿಯವರು ಕೊಟ್ಟ ಕೀಟನಾಶಕ ಅಥವಾ ರೋಗನಾಶಕವನ್ನು ತಂದು…

Read more
error: Content is protected !!