ಅನನಾಸು ಹಣ್ಣು

ಸಾವಯವ ಅನನಾಸು ಬೆಳೆ- ಸುಲಭ. ಹೇಗೆ?

ಸಾವಯವ ಅನನಾಸು ಬೆಳೆ ಏನೂ ಕಷ್ಟದ್ದಲ್ಲ. ಇದು  ಬರಸಹಿಷ್ಣು ಸಸ್ಯ. ಆದುದರಿಂದ ಇದನ್ನು ನೀರು ಗೊಬ್ಬರ ಇಲ್ಲದೆ ಸಾವಯವ ವಿಧಾನದಲ್ಲೇ ಬೆಳೆಯಬಹುದು.  ಆದರೆ ಕೆಲವು ಜನ ಇದಕ್ಕೆ ಒಂದಷ್ಟು ರಾಸಾಯನಿಕ ಬಳಕೆ ಮಾಡುತ್ತಾರೆ, ಕಾರಣ ಇಷ್ಟೇ  ಗ್ರಾಹಕರಿಗೆ ನೋಟ ಚೆನ್ನಾಗಿರುವ, ದೊಡ್ದದಾದ ಹಣ್ಣು ಬೇಕು. ಗ್ರಾಹಕರ ಓಲೈಕೆಗಾಗಿ ಬೆಳೆಗಾರರು ರಾಸಾಯನಿಕ ಬಳಸುತ್ತಾರೆ. ಇದನ್ನು ಬಳಸದೆ ಬೆಳೆಯಲು ಯಾವುದೇ ಕಷ್ಟ ಇಲ್ಲ. ಅನನಾಸು ಬೆಳೆಗೆ ಪ್ರಮುಖವಾಗಿ ಬೇಕಾಗುವುದು, ಉತ್ತಮ ಬೆಳಕು. ನೀರು ಹೆಚ್ಚು ಬೇಡ. ಇಬ್ಬನಿಯ ನೀರಿನಲ್ಲೂ ಬದುಕುತ್ತದೆ. ಇದರ…

Read more

ಬೆಳೆಗಳಿಗೆ ಸುಣ್ಣ ಯಾಕೆ ಕೊಡಬೇಕು ಗೊತ್ತೇ?

ಬೆಳೆ ಬೆಳೆಸುವ ಮಣ್ಣಿಗೆ ಸುಣ್ಣ ಹಾಕುವುದು ಹಸಿರು ಕ್ರಾಂತಿಯ ತರುವಾಯ ಬಂದ ಪದ್ಧತಿ. ಮಣ್ಣಿಗೆ ಸುಣ್ಣ ಹಾಕಿದಾಗ ಮಣ್ಣಿನ ಸ್ಥಿತಿಗತಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅಲ್ಲಿ ಬೆಳೆಯುವ ಸಸ್ಯಗಳಿಗೆ ಮಣ್ಣಿನ ಮೂಲಕ  ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಸಹಕರಿಸುತ್ತದೆ. ಸಸ್ಯಗಳಿಗೆ ಬರೇ ಸಾರಜಕನ, ರಂಜಕ ಮತ್ತು ಪೊಟ್ಯಾಶ್ ಎಂಬ ಮೂರು ಮುಖ್ಯ ಪೋಷಕಗಳು ಬೇಕು. ಅದರ ಜೊತೆಗೆ ದ್ವಿತೀಯ ಮಧ್ಯಮ ಪೋಷಕಗಳಾದ ಕ್ಯಾಲ್ಸಿಯಂ ಗಂಧಕ, ಮತ್ತು ಮೆಗ್ನೀಶಿಯಂ ಸಹ ಅಗತ್ಯವಾಗಿ ಬೇಕಾಗುತ್ತದೆ. ಇವು ಮುಖ್ಯ ಪೋಷಕಗಳಷ್ಟು ಪ್ರಮಾಣದಲ್ಲಿ…

Read more
ನೆಲಕ್ಕೆ ಸುಣ್ಣ ಎರಚುವುದು

ಹೊಲಕ್ಕೆ ಸುಣ್ಣ ಹಾಕುವ ಕ್ರಮ ಮತ್ತು ಅದರ ಫಲ.

ಸಸ್ಯ ಬೆಳವಣಿಗೆಗೆ ಸಹಾಯಕವಾಗುವ ದ್ವಿತೀಯ ಪೋಷಕಗಳಲ್ಲಿ  ಸುಣ್ಣ ಒಂದನ್ನೇ ಕೊಟ್ಟರೆ ಸಾಲದು. ವರ್ಷಂಪ್ರತೀ ನಷ್ಟವಾಗುವ ಸುಣ್ಣ ಮತ್ತು ಮೆಗ್ನೀಶಿಯಂ ಎರಡನ್ನೂ ಕೊಡಬೇಕು. ಆಗಲೇ ಅದರ ಪೂರ್ಣ ಪ್ರಯೋಜನ. ಈ ಎರಡೂ ಪೋಷಕಗಳೂ ಮಳೆಗೆ ಕೊಚ್ಚಿಕೊಂಡು ಮತ್ತು ಬೆಳೆ ಬೆಳೆದಾಗ ಪಡೆಯುವ ಫಸಲು ಮತ್ತು ಉದುರಿದ ಎಲೆಗಳಿಂದ  ನಷ್ಟವಾಗುವ ಪೋಷಕಗಳು. ಸುಣ್ಣವನ್ನು ಮಣ್ಣಿಗೆ ಕೊಡುವುದರಿಂದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮೂರೂ   ಪರಿಣಾಮಗಳೂ ಉನ್ನತ ಮಟ್ಟಕ್ಕೆ ಏರಿ ಮಣ್ಣಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಮಣ್ಣು ಗುಳಿಗೆಯಾಕಾರಕ್ಕೆ ಪರಿವರ್ತನೆಯಾಗುತ್ತದೆ. ಪೋಷಕಗಳು ಲಭ್ಯ…

Read more
areca nut plants

ಅಡಿಕೆಗಿಡ ನೆಡುವಾಗ ಟ್ರೆಂಚ್ ಪದ್ದತಿ ಬೇಡ- ಗಿಡ ಸೊರಗುತ್ತದೆ.

ಅಡಿಕೆ, ಮುಂತಾದ ಸಸ್ಯಗಳಿಗೆ ತಂತು ( Fiber roots) ಬೇರು ಮಾತ್ರ ಇರುತ್ತದೆ. ಈ ತಂತು ಬೇರುಗಳಲ್ಲಿ  ಮತ್ತೆ ಕವಲುಗಳು ಒಡೆದು ಬೇರು ವ್ಯೂಹ ರಚನೆಯಾಗುತ್ತದೆ. ಈ ಬೇರುಗಳು ತುಂಬಾ ಮೃದುವಾಗಿರುತ್ತವೆ. ಹೆಚ್ಚಿನ ತೇವ, ಅಧಿಕ ಬಿಸಿಯನ್ನು ತಡೆದುಕೊಳ್ಳಲಾರವು. ಆದ ಕಾರಣ ನಾವು ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ಸಸಿ ನೆಟ್ಟರೆ ಅದರ ಬೇರುಗಳಿಗೆ ತೊಂದರೆಯಾಗಿ ಬೆಳವಣಿಗೆಗೆ ಅನನುಕೂಲವಾಗುತ್ತದೆ. ಸಸ್ಯಗಳ ಬೆಳವಣಿಗೆಗೆ ಬೇರುಗಳೇ ಸರ್ವಾಧಾರ. ಬೇರುಗಳ ರಕ್ಷಣೆ ಮತ್ತು ಅವುಗಳ ಪ್ರಸರಣಕ್ಕೆ ಎಷ್ಟು ಅನುಕೂಲ ಮಾಡಿಕೊಡುತ್ತೇವೆಯೋ ಅಷ್ಟು ಆ…

Read more
ಬಾಳೆ ಎಲೆ ವೈರಾಣು ರೋಗ ಚಿನ್ಹೆ- Virus diseae symptom

ಬಾಳೆಯ ಎಲೆ ಹೀಗೆ ಆದರೆ ಅದು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ..

ಬಾಳೆ ಹಾಗೆಯೇ ಇನ್ನೂ ಕೆಲವು ಬೆಳೆಗಳಲ್ಲಿ ವೈರಾಣು ರೋಗ ಬಂದಿತೆಂದರೆ ಅದನ್ನು ಉಳಿಸಿದರೆ ಬೇರೆ ಬಾಳೆಗೆ ಹರಡುತ್ತದೆ. ಇದನ್ನು  ಮುಂಚಿತವಾಗಿ ಗುರುತಿಸಿ ಅದನ್ನು ನಾಶ ಮಾಡುವುದರಲ್ಲೇ ಇರುವುದು ಬಾಳೆಯ ರೋಗ ಮುಕ್ತ ಬೇಸಾಯ ಕ್ರಮ. ನೀವು ನೆಟ್ಟ ಬಾಳೆಯ ಎಲೆಗಳು  ಸಹಜವಾಗಿ ಇರದೆ ಎಲೆಗಳ ಮೂಡುವಿಕೆ ಗುಚ್ಚದ ತರಹ ಆಗಿ, ಯಾವುದೂ ಪೂರ್ಣವಾಗಿ ಬಿಡಿಸಿಕೊಳ್ಳದಿದ್ದರೆ ಅದು ನಂಜಾಣು ರೋಗ. ಕೆಲವು ಎಲೆಗಳು ಸಹಜವಾಗಿ ಬಂದು ನಂತರ ಬರುವ ಎಲೆಗಳು ಶಕ್ತಿ ಕಳೆದುಕೊಂಡು ಹಳದಿಯಾಗಿ ಮೂಡಿತೆಂದರೆ ಅದು ಸಹ…

Read more
Farmer is always un happy

ರೈತರ ನೆಮ್ಮದಿ ಕೆಡಿಸುತ್ತಿರುವ ಭೂ ವ್ಯಾಜ್ಯಗಳು.

100 ಜನರಲ್ಲಿ 50%  ಜನ ಭೂಮಿಗೆ ಸಂಬಂಧಿಸಿದ ತಕರಾರುಗಳನ್ನು ಹಿಡಿದುಕೊಂಡು ನ್ಯಾಯಪಡೆಯಲು ಜೀವಮಾನವನ್ನೇ ಸವೆಸುತ್ತಾರೆ. 100 ಕ್ಕೆ  99 ಜನ ನೆರೆ ಹೊರೆಯ ಕೃಷಿಕ ಸಹೋದ್ಯೋಗಿಗಳ ಜೊತೆಯಲ್ಲಿ ಮುಸುಕಿನ ಗುದ್ದಾಟದಲ್ಲಿರುತ್ತಾರೆ. ಭಾರತದ ಕೋರ್ಟು ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ವಕೀಲರುಗಳು ಬದುಕುವುದೇ ಭೂ ವ್ಯಾಜ್ಯಗಳಲ್ಲಿ. ಇಂಥಹ ಭೂ ಕಾಯಿದೆ ಜನಸ್ನೇಹಿಯೇ ? ಇದರ ಜನಸ್ನೇಹೀ ತಿದ್ದುಪಡಿಗೆ ರೈತರು ಸರಕಾರವನ್ನು  ಒತ್ತಾಯಪಡಿಸಬೇಕಾಗಿದೆ.  ಹೆಣ್ಣು , ಹೊನ್ನು, ಮಣ್ಣು ಈ ಮೂರೂ ಮನುಕುಲವನ್ನು ಹಾಳು ಮಾಡುವುದು ನಿಶ್ಚಯ. ಇದರಲ್ಲಿ ಎರಡಕ್ಕೆ ಸ್ವಲ್ಪ…

Read more

ಡ್ರೋನುಗಳ ಹಾರಾಟಕ್ಕೆ ಅನುಮತಿಯೇ ಇಲ್ಲ – ಗೊತ್ತೇ?

ಬಹಳ ಜನ ಅದರಲ್ಲೂ ಕೃಷಿಗೆ ಪ್ರವೇಶಿಸುವ ಹೊಸ ತಲೆಮಾರು  ಅಡಿಕೆ ಮುಂತಾದ ಬೆಳೆಗಳಿಗೆ ಸಿಂಪರಣೆ ಎಂಬ ಪರಿಶ್ರಮದ ಕೆಲಸಕ್ಕೆ ಆತೀ ಆಧುನಿಕ ವ್ಯವಸ್ಥೆಯಾದ ಡ್ರೋನುಗಳನ್ನು ಬಳಸುವ ಬಗ್ಗೆ ಮಾತಾಡುತ್ತಾರೆ.  ಕೆಲವರು ಅದನ್ನು ತಯಾರಿಸಿ ಶ್ಲಾಘ್ಹನೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರೋನು ಬಳಸಿ ಸಿಂಪರಣೆ ಮಾಡುವಂತಿಲ್ಲ. ಡ್ರೋನು ಹಾರಾಟಕ್ಕೆ ಅನುಮತಿಯೂ ಬೇಕು. The Union Government has clarified that drone-spraying is illegal. “As per the provisions of Insecticides Act 1968, aerial application of pesticides need…

Read more
ಹೈಬ್ರೀಡ್ ಮರದ ಕಾಯಿ ಗೊಂಚಲು

ತೆಂಗಿನ ಹೈಬ್ರೀಡ್ ತಳಿಗಳು – ನಿಮಗೆ ಇದು ತಿಳಿದಿರಲಿ.

ಒಂದು ತಳಿಯ ಅಧಿಕ ಉತ್ಪಾದನೆಗೆ , ಅಥವಾ ತಳಿ ಉನ್ನತೀಕರಣಕ್ಕೆ  ಮತ್ತೊಂದು ತಳಿ ಮೂಲದಿಂದ ಕ್ರಾಸಿಂಗ್ ಮಾಡಿ ಪಡೆಯುವ ಹೊಸ ತಲೆಮಾರಿನ ತಳಿಗೆ ಹೈಬ್ರೀಡ್ ತಳಿ ಎನ್ನುತ್ತಾರೆ. ಇದು ಯಾವುದೋ ಅಧಿಕ ಇಳುವರಿ ಕೊಡುವ ಯಾರದೋ ಹಿತ್ತಲಲ್ಲಿರುವ ಮರದಿಂದ ಆಯ್ಕೆ ಮಾಡಿದ ಬೀಜ ಆಗಿರುವುದಿಲ್ಲ. ಗುರುತು ಪಡಿಸಿದ ಮರದ ಹೆಣ್ಣು ಹೂವಿಗೆ ಆಯ್ಕೆ ಮಾಡಿದ ಮರದ ಗಂಡು ಹೂವಿನ ಪರಾಗವನ್ನು ಕೈಯಿಂದ ( ಕೃತಕ) ಪರಾಗಸ್ಪರ್ಶ ಮಾಡಿ, ಅದರಲ್ಲಿ ಕಾಯಿ ಕಚ್ಚಿದ ಬೀಜವನ್ನು  ಅಭ್ಯಸಿಸಿ ಬಿಡುಗಡೆ ಮಾಡಿದ …

Read more

ರಂಜಕ ಗೊಬ್ಬರವನ್ನು ಹೀಗೆ ಕೊಟ್ಟರೆ ಉತ್ತಮ.

ರಂಜಕ ಎಂಬುದು ಚಲಿಸುವ ಪೋಷಕವಲ್ಲ. ಕೆಲವು ನೀರಿನಲ್ಲಿ ಕರಗುತ್ತದೆ. ಇನ್ನು ಕೆಲವು  ಕರಗುವುದಿಲ್ಲ. ಹೊಲದ ಮಣ್ಣಿನ ಗುಣ ಹೇಗಿದೆ ಎಂಬುದರ ಮೇಲೆ ಅದಕ್ಕೆ ಹೊಂದುವ ರಂಜಕ ಗೊಬ್ಬರವನ್ನು ಕೊಡಬೇಕು. ಹಾಗೆಯೇ ಕೊಟ್ಟ ರಂಜಕವು ಬೆಳೆಗೆ ಲಭ್ಯವಾಗುವ ಸ್ಥಿತಿಯನ್ನು ಉಂಟುಮಾಡಬೇಕು. ಬಹಳಷ್ಟು  ರೈತರು ರಂಜಕ ಪೋಷಕದ ಬಳಕೆಯನ್ನು ಕಡಿಮೆ ಮಾಡುವುದಿಲ್ಲ. ಡಿಎಪಿ ಹಾಕಿದ್ದೇನೆ ಎನ್ನುತ್ತಾರೆ. ಆದರ ಬಹಳಷ್ಟು ರೈತರ ಹೊಲದ ಮಣ್ಣು ಪರೀಕ್ಷೆಯಲ್ಲಿ ರಂಜಕ ಪೋಷಕದ ಕೊರತೆ ಕಂಡು ಬರುತ್ತದೆ. ಇದಕ್ಕೆ ಕಾರಣ ಬಳಕೆ ಕ್ರಮ ಸರಿಯಿಲ್ಲದಿರುವಿಕೆ. ಹೇಗೆ…

Read more
ರಾಸಾಯನಿಕ + ಸಾವಯವ ಎರಡು ಬಳಸಿ ಇಳುವರಿ

ರಾಸಾಯನಿಕ + ಸಾವಯವ = ಇಳುವರಿ ಉತ್ತಮ.

ನಾನು ರಾಸಾಯನಿಕ ಬಿಟ್ಟು ಬೇರೆ ಬಳಸುವುದೇ ಇಲ್ಲ. ನಾನು ಗೊಬ್ಬರಕ್ಕಾಗಿ ಹಸು ಸಾಕುವುದೇ ಇಲ್ಲ. ಕಡಿಮೆ ಖರ್ಚಿನಲ್ಲಿ ಗೊಬ್ಬರ ಆಗುತ್ತದೆ. ನನಗೆ ಇಳುವರಿಗೆ ಯಾವ ತೊಂದರೆಯೂ ಆಗಿಲ್ಲ ಎಂಬ ತರ್ಕ ಮಾಡುವ ರೈತರು ಒಂದಲ್ಲ ಒಂದು ದಿನ ತಮ್ಮ ಈ ಮನೋಭಾವನೆಯನ್ನು ಬದಲಿಸುತ್ತಾರೆ. ಈ ರಾಸಾಯನಿಕ ಗೊಬ್ಬರಗಳು ಮಣ್ಣಿನ ಧಕ್ಕೆ ಸಹನೆ ಇರುವಷ್ಟು ಸಮಯ ಮಾತ್ರ ಪ್ರಯೋಜನಕಾರಿ. ನಂತರ ಅದು ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣಿನ ರಚನೆ ಉತ್ತಮವಾಗಿ ರಸಗೊಬ್ಬರ…

Read more
error: Content is protected !!