krushiabhivruddi

ರೋಗ ನಿರೋಧಕ ಅಡಿಕೆ ಮರ

ರೋಗ-ಕೀಟ ನಿರೋಧಕ ತಳಿಗಳು ನಿಮ್ಮ ಬಳಿಯಲ್ಲೇ ಇರಬಹುದು. ಹೇಗೆ ಹುಡುಕುವುದು?

ರೋಗ ನಿರೋಧಕ ಶಕ್ತಿ ಎಂಬುದು ಕೆಲವು ತಳಿಗಳ ವಂಶ ಗುಣ.  ಇದನ್ನು ಕೃಷಿ ವಿಜ್ಞಾನ ಅಧ್ಯಯನ ಮಾಡಿದವರೇ ಹುಡುಕಿ ಅಭಿವೃದ್ದಿಪಡಿಸಬೇಕಾಗಿಲ್ಲ. ಸಾಮಾನ್ಯ ರೈತರೂ ಅದನ್ನು ಅಭ್ಯಸಿಸಿ ತಮ್ಮ ಬಳಕೆಗಾದರೂ  ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಬೆಳಕು ಚೆಲ್ಲುವ ಒಂದು ಅಪರೂಪದ ಲೇಖನ ಇಲ್ಲಿದೆ. ಕೆಲವು ರೈತರ ಅಡಿಕೆ ತೋಟದಲ್ಲಿ ಪ್ರತೀ ವರ್ಷ ಕೊಳೆ ಬರುತ್ತದೆ. ಹಾಗೆಂದು ಎಲ್ಲಾ ಮರಗಳಿಗೂ ಕೊಳೆ ಬರುವುದಿಲ್ಲ.  ಹಾಗೆಯೇ ಕರಿಮೆಣಸು, ತೆಂಗು,  ಏಲಕ್ಕಿ, ನೆಲಕಡ್ಲೆ, ಹತ್ತಿ, ದಾಳಿಂಬೆ,  ಎಲ್ಲಾ ಕೃಷಿ, ತೋಟಗಾರಿಕೆ, ತರಕಾರಿ ,…

Read more
ಭವಿಷ್ಯದ ಅಡಿಕೆ ತೋಟ

ಅಡಿಕೆ ಬೆಳೆಯ ಭವಿಷ್ಯದ ಸ್ಥಿತಿ ಏನಾಗಬಹುದು?

ಅಡಿಕೆ ಬೆಳೆ ವಿಸ್ತರಣೆ ಆಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಅಡಿಕೆಗೆ ಬೆಲೆ ಇಲ್ಲದೆ ರೈತ ಕಂಗಾಲಾಗಬೇಕಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ. ಆದರೆ ಅಂತದ್ದೇನೂ ಆಗುವುದಿಲ್ಲ.ಅಡಿಕೆ ಬೆಳೆ ಪ್ರದೇಶ ಹೆಚ್ಚಾದರೂ ಅದಕ್ಕನುಗುಣವಾಗಿ ಉತ್ಪಾದನೆ ಹೆಚ್ಚಳವಾಗುವುದಿಲ್ಲ. ಯಾಕೆ ಗೊತ್ತೇ? ಹಿಂದೆ ಕರಾವಳಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಇದ್ದುದು ಕಣಿವೆಯಂತಹ ತಗ್ಗು ಭಾಗಗಳಲ್ಲಿ ಮಾತ್ರ. ಆಗ ಖುಷ್ಕಿ  ಭೂಮಿಯಲ್ಲಿ ಅಡಿಕೆ ಬೆಳೆದರೆ  ಜನ ಅದೆಲ್ಲಾ ಆಗುವ ಹೋಗವಂತದ್ದೇ ಎಂದು ಹೇಳುತ್ತಿದ್ದರು.  ಪರಿಸ್ಥಿತಿ ಬದಲಾವಣೆ ಆಯಿತು. ಒಂದೆಡೆ ಭತ್ತದ ಗದ್ದೆಗಳೂ ಅಡಿಕೆ…

Read more
ಕೆಂಪು ಮತ್ತು ಬಿಳಿ ಅಡಿಕೆ

ಚಾಲಿ ಹಿಂದೆ ಬರುವ ಸೂಚನೆ- ಕೆಂಪಡಿಕೆ ಏರಿಕೆಯ ಸರದಿ.

ಈ ವರ್ಷದ ಅಡಿಕೆ ಕೊಯಿಲು ಪ್ರಾರಂಭವಾಗಿದ್ದು, ಬಯಲು ಸೀಮೆಯಲ್ಲಿ ಒಂದು ಕೊಯಿಲು ಆಗಿದೆ. ಚೇಣಿ ಮಾಡುವವರ ಖರೀದಿಯ ಭರ ಮತ್ತು ದಿನದಿಂದ ದಿನಕ್ಕೆ ಏರುತ್ತಿರುವ ಕೆಂಪಡಿಕೆಯ ವಹಿವಾಟನ್ನು ನೋಡಿದರೆ  ಕೆಂಪು ಈ ಸಲ ಮತ್ತೆ ಮೇಲೇರುವ ಮುನ್ಸೂಚನೆ ಕಾಣಿಸುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ 45,000 ದಾಟಿದ್ದ ಕೆಂಪಡಿಕೆ ಧಾರಣೆ ಮತ್ತೆ ಕೊರೋನಾ, ಲಾಕ್ ಡೌನ್ ಕಾರಣದಿಂದ  ಮತ್ತೆ ಆ ಮಟ್ಟಕ್ಕೆ ಏರಲೇ ಇಲ್ಲ. ಈಗ ಮತ್ತೆ ಕೆಂಪಡಿಕೆಯ ಸರದಿ ಕಂಡು ಬರುತ್ತಿದೆ. ಚಾಲಿ ಧಾರಣೆ ಕರಾವಳಿಯಲ್ಲಿ 46,000…

Read more
ತರಹೇವಾರು ಸೌಂದರ್ಯದಕೀಟಗಳು

ಕೀಟಗಳ ಹಾವಳಿ ಹೆಚ್ಚುತ್ತಿರುವುದಕ್ಕೆ ಕಾರಣ ಏನು ಗೊತ್ತೇ?

ಪ್ರತೀಯೊಬ್ಬ ಕೃಷಿಕನೂ ತಪ್ಪದೇ ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರ ಇದು. ರೈತರು ಕೀಟಗಳ ವಿರುದ್ಧ ಹೋರಾಡಲು ಕೀಟನಾಶಕಗಳ ಮೊರೆ ಹೋಗಿದ್ದಾರೆ. ಕೀಟನಾಶಕ ತಯಾರಕರು ರೈತರ ನೆರವಿಗೆ ಇದ್ದಾರೆ. ಕೀಟಗಳು ಪ್ರಾಭಲ್ಯ ಸಾಧಿಸುತ್ತಿವೆ.  ಇದಕ್ಕೆಲ್ಲಾ ಕಾರಣ ಎನು ಎಂಬುದು ಇಲ್ಲಿ ಹೇಳಲಿಚ್ಚಿಸುವ  ಮಹತ್ವದ ವಿಚಾರ. ಕೀಟಗಳ ಸಂತತಿ ಹೆಚ್ಚುತ್ತಾ ಇದೆ. ಕೀಟನಾಶಕಗಳಿಗೆ ಅವು ನಿರೋಧಕ ಶಕ್ತಿ ಪಡೆಯುತ್ತಿವೆ. ಕೀಟಗಳ ನಿಯಂತ್ರಣಕ್ಕೆ ಕೀಟನಾಶಕಗಳೇ ಇಲ್ಲದಿದ್ದಾಗ ಈ ಕೀಟಗಳು ಎಲ್ಲಿದ್ದವು. ಇವು ಹೊಸತಾಗಿ ಸೃಷ್ಟಿಯಾದವುಗಳೇ ಎಂಬೆಲ್ಲಾ ಸಂದೇಹಗಳು ಬರಬಹುದು. ಕೀಟಗಳು ನಾವು ಬೆಳೆ…

Read more
ಆಫ್ರಿಕನ್ ದೈತ್ಯ ಬಸವನ ಹುಳ

ಆಫ್ರಿಕನ್ ಬಸವನ ಹುಳುವಿನ ಅಪಾಯ-ನಿಯಂತ್ರಣ.

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಆಫ್ರಿಕನ್ ಬಸವನ ಹುಳ Giant African Snail (Lissachatina fulica) ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರ ಹೊಲದಲ್ಲಿ, ಮನೆ, ಶೆಡ್ ಎಲ್ಲೆಂದರಲ್ಲಿ ಈ ಹುಳ ಹರಿದಾಡುವ ಸ್ಥಿತಿ ಉಂಟಾಗಿದೆ. ಹಿಡುದು ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತಲೇ ಇದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗದೆ ಕಂಗಾಲಾಗಿದ್ದಾರೆ ರೈತರು ಮತ್ತು ಇತರ ಜನ ಸಮುದಾಯ. ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತುಕೊಳ್ಳುತ್ತದೆ.ಹಗಲು ನಾಲ್ಕು- ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ,…

Read more
ಪರಿಶುದ್ಧ ತುಪ್ಪ

ಆನ್ ಲೈನ್ ಕೃಷಿ ಉತ್ಪನ್ನಗಳ ವ್ಯವಹಾರ- ಗ್ರಾಹಕರೇ ಎಚ್ಚರ!

ಇತ್ತೀಚಿನ ದಿನಗಳಲ್ಲಿ ಅಮಾಯಕ ರೈತರನ್ನು ಹಾಗೆಯೇ ಪೇಟೆ ಪಟ್ಟಣದ ಜನರನ್ನು  ಮೋಸ ಮಾಡಿ  ಹಣ ಸಂಪಾದನೆ ಮಾಡುವ ಹೈಟೆಕ್ ಆನ್ ಲೈನ್ ಕೃಷಿ ಉತ್ಪನ್ನ ಮಾರಾಟ ಜಾಲಗಳು ಹೆಚ್ಚುತ್ತಿದೆ.  ರೈತರು ಹಾಗೆಯೇ ಪೇಟೆ ಪಟ್ಟಣದ ಜನ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡದೆ ಕೊಳ್ಳಬೇಡಿ. ಈ ರೀತಿ ಕೊರೋನಾ ಮಹಾಮಾರಿ, ಹಾಗೆಯೇ ನೆರೆ, ಬರ ಮುಂತಾದ ಅವಘಡಗಳು ಮನುಕುಲದ ಬೆನ್ನು ಹತ್ತುತ್ತಿದ್ದರೂ ಇನ್ನೂ ಪರರನ್ನು ಸುಲಿಗೆ ಮಾಡಿ ಹಣ ಮಾಡಬೇಕೆಂಬಾಸೆ ಕೆಲವರಲ್ಲಿ.  ಎಲ್ಲಿ ಇಡುತ್ತಾರೋ ಹಣವನ್ನು ಗೊತ್ತಿಲ್ಲ.  ಇವೆಲ್ಲಾ…

Read more
10:26:26 ಗೊಬ್ಬರ

10:26:26 ಗೊಬ್ಬರ ಬಳಸುವವರು ಅಗತ್ಯವಾಗಿ ಗಮನಿಸಿ.

ಬಹಳ ಜನ  ರೈತರು ತಮ್ಮ ಬೆಳೆಗಳಿಗೆ 10:26:26 ರಸಗೊಬ್ಬರ ಬಳಸುತ್ತಿದ್ದು, ಅದನ್ನೊಂದೇ  ಬಳಕೆ ಮಾಡಿದರೆ ಏನಾಗುತ್ತದೆ ಎಂಬುದರ  ವಿಸ್ತೃತ ಮಾಹಿತಿ ಇಲ್ಲಿದೆ. ಅಡಿಕೆ ಬೆಳೆಗಾರರ ನೆಚ್ಚಿನ ಪೋಷಕಾಂಶಗಳ ಆಯ್ಕೆಯಲ್ಲಿ 10:26:26 ಎಂಬ ರಸಗೊಬ್ಬರವೂ ಒಂದು. ಸೊಸೈಟಿಗಳಲ್ಲಿ, ಗೊಬ್ಬರ ಮಾರಾಟದ ಅಂಗಡಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಸ್ತಾನು ಇರುವ ಗೊಬ್ಬರವೂ ಇದೇ. ಅಡಿಕೆ ಬೆಳೆಗಾರರು ಇರುವ ಪ್ರದೇಶಗಳಲ್ಲಿ ಇದರಷ್ಟು ಅಧಿಕ ಪ್ರಮಾಣದಲ್ಲಿ ಮಾರಾಟವಾಗುವ ರಸ ಗೊಬ್ಬರ ಬೇರೊಂದಿರಲಿಕ್ಕಿಲ್ಲ. ಈ ಗೊಬ್ಬರದ ಬಳಕೆಯಿಂದ ತೊಂದರೆ ಇಲ್ಲ. ಆದರೆ ಇದನ್ನೊಂದೇ ಬಳಕೆ ಮಾಡಿದರೆ …

Read more
ಉತ್ತಮ ಅಡಿಕೆ ಸಸಿಗಳು

ಅಡಿಕೆ ಬೆಳೆಗಾರರು ಸ್ವಲ್ಪ ಚಾಲಿ ಅಡಿಕೆ ತಳಿಗಳನ್ನೂ ಬೆಳೆಸಿ.

ಎಲ್ಲರೂ ಕೆಂಪಡಿಕೆಗೆ ಹೊಂದುವ ತಳಿಗಳನ್ನೇ ಬೆಳೆಸಿದರೆ ಒಂದಿಲ್ಲೊಂದು ದಿನ  ಕೆಂಪಡಿಕೆ ಮಾರುಕಟ್ಟೆ ಏನಾಗಬಹುದು  ಯೋಚಿಸಿ? ಅಂತಹ ಕಷ್ಟದ ದಿನ ಬಂದರೆ  ರೈತರಿಗೆ ಚಾಲಿ ನೆರವಿಗೆ ಬರಲೂಬಹುದು. ಎಲ್ಲಾ ಅಡಿಕೆ ಚಾಲಿಗೆ ಹೊಂದುವುದಿಲ್ಲ. ಇದಕ್ಕೆ ಕರಾವಳಿಯ ತಳಿಗಳೇ ಸೂಕ್ತ. ಕಳೆದ ವರ್ಷ ಅಡಿಕೆ ಗಿಡಗಳಿಗೆ ಬಂದ ಬೇಡಿಕೆಯನ್ನು ನೋಡಿ ಈ ವರ್ಷ  ನರ್ಸರಿಗಳು ಮಾಡಿದ ಸಸಿ  ಅಷ್ಟಿಷ್ಟಲ್ಲ. ಆದರೆ  ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ವರ್ಷ ಅಡಿಕೆ ಗಿಡ ಕೇಳುವವರಿಲ್ಲ.  ಹಾಗೆಂದು ಮಲೆನಾಡು, ಅರೆಮಲೆನಾಡು ಮುಂತಾದ ಕಡೆಯ ನರ್ಸರಿಗಳಲ್ಲಿ…

Read more
ಸೂಜಿ ಮೆಣಸಿನ ಇಳುವರಿ

ಅಧಿಕ ಲಾಭದ ಮಿಶ್ರ ಬೆಳೆ – ಸೂಜಿ ಮೆಣಸು

ಸೂಜಿ ಮೆಣಸಿನ ಬೆಳೆಯಲ್ಲೂ ಲಾಭವಿದೆಯೇ ಎಂದು ಹುಬ್ಬೇರಿಸಬೇಡಿ. ಇದಕ್ಕೆ ಒಣ ಮೆಣಸಿಗೆ ಕಿಲೋ 800 ರೂ. ತನಕ ಬೆಲೆ ಇದೆ. ಖರೀದಿ ಮಾಡುವವರೂ ಇದ್ದಾರೆ. ಮಲ್ಲಿಗೆ ಬೇಸಾಯಕ್ಕಿಂತ ಇದು ಸುಲಭ. ಮಲೆನಾಡಿನಲ್ಲಿ ಇದನ್ನು  ಬೆಳೆಸಿಯೇ ವರ್ಷಕ್ಕೆ 50,000 ಕ್ಕೂ ಮಿಕ್ಕಿ ಆದಾಯ ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಕಾಗೆ ಮೆಣಸು, ಜೀರಿಗೆ  ಮೆಣಸು, ಸೂಜಿ ಮೆಣಸು ಇದೆಲ್ಲಾ ಒಂದೇ. ಬಹುತೇಕ ಎಲ್ಲರ ತೋಟದಲ್ಲೂ  ಇದರ ಸಸಿ ಇದೆ. ಅದು ನೆಟ್ಟು ಬೆಳೆಸಿದ್ದಲ್ಲ. ಅದರಷ್ಟಕ್ಕೇ ಹುಟ್ಟಿದ್ದು. ಅನುಕೂಲ ಇದ್ದರೆ …

Read more
ವಿದ್ಯುತ್ ಸರಬರಾಜು ವ್ಯವಸ್ಥೆ

ಕೇಂದ್ರ ವಿದ್ಯುತ್ ಕಾಯಿದೆ – ರೈತರಿಗೆ ತೊಂದರೆ ಇದೆಯೇ?

ಸರಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ರೈತರಿಗೆ ವಿದ್ಯುತ್ ಉಚಿತವಾಗಿ ಸಿಗುವುದಿಲ್ಲ. ಅದನ್ನು ನಾವು ವಿರೋಧಿಸಬೇಕು. ಖಾಸಗೀಕರಣ ಹಾಗೆ ಹೀಗೆ ಎಂದೆಲ್ಲಾ ರೈತರ ಕಿವಿ ತುಂಬಿ ಅವರನ್ನೂ ತಮ್ಮ ಬೆಂಬಲಕ್ಕೆ ಸೇರಿಸಿಕೊಳ್ಳಲು ಹವಣಿಕೆ ನಡೆಯುತ್ತಿದೆ. ಸರಕಾರ ಹಂತ ಹಂತವಾಗಿ ಎಲ್ಲಾ ಸರಕಾರೀ ವ್ಯವಸ್ಥೆಗಳನ್ನು ಖಾಸಗೀಕರಣ ಮಾಡುವ ತಯಾರಿಯಲ್ಲಿದೆ. ನಮ್ಮ ಪ್ರತಿನಿಧಿಗಳು ಯೋಗ್ಯರೇ ಆಗಿದ್ದರೆ  ಇದರಿಂದ  ಸಾರ್ವಜನಿಕರಿಗೆ ಅನುಕೂಲವೇ ಆಗುವುದು. ಕೇಂದ್ರ ಸರಕಾರ ನಾಳೆ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯ Electricity Amendment Bill 2021…

Read more
error: Content is protected !!