ಬಟರ್ ಪ್ರೂಟ್ ನ ವಿಶೇಷ ತಳಿ ಹಾಸ್

ಬಟರ್ ಪ್ರೂಟ್ ನಲ್ಲಿ ಅಧಿಕ ಇಳುವರಿಯ ವಿಶೇಷ ತಳಿಗಳು.

ಬೆಣ್ಣೆ ಹಣ್ಣು, ಬಟರ್ ಪ್ರೂಟ್ ಅಥವಾ ಅವೆಕಾಡೋ (Avocado)ಈಗ ಭಾರೀ ಪ್ರಚಲಿತದಲ್ಲಿರುವ ಹಣ್ಣಿನ ಬೆಳೆಯಾಗಿದೆ. ತಾಜಾ ಹಣ್ಣಿಗಾಗಿ, ಸಂಸ್ಕರಣೆ ಉದ್ದೇಶಕ್ಕೆ ಚೆನ್ನಾಗಿ ಹೊಂದಿಕೆಯಾಗುವುದರಿಂದ  ಈ ಹಣ್ಣಿಗೆ ಪ್ರಾಮುಖ್ಯ ಸ್ಥಾನ ಬಂದಿದೆ. ಇದರ ಆರೋಗ್ಯ ಗುಣ ಮತ್ತು ಬೇಡಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವೂ ಲಭ್ಯ. ಇತ್ತೀಚೆಗೆ 2015 ರ ತರುವಾಯ ಈ ಹಣ್ಣಿಗೆ ಭಾರೀ ಜನಪ್ರಿಯತೆ ದೊರಕಿತು. ತಳಿ ಹುಡುಕಾಟ, ತಳಿ ಅಭಿವೃದ್ದಿ ಸಸ್ಯೋತ್ಪಾದನೆ ಅವಕಾಡೋ ಹಣ್ಣನ್ನು ಪ್ರಮುಖ ಹಣ್ಣಿನ ಬೆಳೆಗಳ ಸ್ಥಾನದಲ್ಲಿ ತಂದು ನಿಲ್ಲಿಸಿದವು.ಹಾಸ್ ಎಂಬ ವಿಶೇಷ…

Read more
ಅಡಿಕೆ ಮಾರುಕಟ್ಟೆ ಅಂಗಳ

ಅಡಿಕೆ ಧಾರಣೆ ಸ್ಥಿರ. ಬೆಳೆಗಾರರಿಗೆ ನೆಮ್ಮದಿ- ಸೋಮವಾರ ದಿನಾಂಕ 27-12-2021.

2021 ನೇ ಇಸವಿಯಲ್ಲಿ ಅಡಿಕೆ ಧಾರಣೆ ಬೆಳೆಗಾರರಿಗೆ ಹೊಸ ಉತ್ಸಾಹವನ್ನು ಕೊಟ್ಟಿದೆ. ಸಾಕಷ್ಟು ಹೊಸ ತೋಟಗಳು ತಲೆ ಎತ್ತಿವೆ. ಬಹಳಷ್ಟು ಬೆಳೆಗಾರರು ಬೀಜಕ್ಕಾಗಿಯೇ ಅಡಿಕೆ ಮಾರಾಟ ಮಾಡಿ ಲಾಭಮಾಡಿಕೊಂಡಿದ್ದಾರೆ.  ಅಡಿಕೆ ಧಾರಣೆಯೂ ಉತ್ತಮವಾಗಿತ್ತು. ಬೀಜದ ಅಡಿಕೆಗೂ 7-8 10 ರೂ ತನಕ ಇತ್ತು. ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ತೃಪ್ತಿಯ ಧಾರಣೆಯನ್ನು ಕಂಡು ವರ್ಷ ಇದು  ಎಂದರೆ ತಪ್ಪಾಗಲಾರದು. ಹೊಸ ವರ್ಷ 2022 ಸಹ ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ವರ್ಷವಾಗೇ ಇರಲಿದೆ. ಯಾಕೋ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ…

Read more
ರೈತ ಶಕ್ತಿ ದೇಶದಲ್ಲಿ ಸೈನಿಕ ಶಕ್ತಿಗಿಂತಲೂ ಮಿಗಿಲಾದುದು

ರೈತರಾಗಿ ಹುಟ್ಟಿದ್ದೇ ಪುಣ್ಯ. ಒಕ್ಕಲುತನ ಕೀಳಲ್ಲ.

ಒಕ್ಕಲುತನ ಮಾಡುತ್ತಾ ಜಗತ್ತಿನಲ್ಲಿ  ಎಲ್ಲರಿಗೂ ಅನ್ನ ಕೊಡುತ್ತಾ ಬಂದವರು ರೈತರು. ಎಲ್ಲರೂ ಜೀವಮಾನ ಪರ್ಯಂತ  ಬೇರೆಯವರ ಋಣದಲ್ಲಿದ್ದರೆ ಅದು ರೈತರಲ್ಲಿ. ರೈತರೆಂದರೆ  ನಿತ್ಯ ಸ್ಮರಣೀಯರು. ಅದರೂ ಇಂದು ನಮಗಾಗಿ ವಿಶೇಷ ದಿನ. ಡಿಸೆಂಬರ್  23   ಇದು ಜಾಗತಿಕ ರೈತರ ದಿನ. ಅಥವಾ ಕಿಸಾನ್ ದಿವಸ್. ಈ ದಿನ ನಮ್ಮ ದೇಶದ ಮಾಜೀ ಪ್ರಧಾನಿ ಛೌಧುರಿ ಚರಣ್ ಸಿಂಗ್ ಇವರ ಜನ್ಮ ದಿನ. ಚೌಧುರಿ ಚರಣ್ ಸಿಂಗ್ ಇವರು ರೈತರ ಮುಖಂಡರು.  ಸರಳ ಮನುಷ್ಯ.  ಇವರು ಜೈ ಜವಾನ್ …

Read more
ಕೆಂಪು ಅಡಿಕೆ

ಚಾಲಿ ದರ ಹಿಂದೆ- ಕೆಂಪು ಸ್ಥಿರ: ದಿನಾಂಕ:21-12-2021 ರ ಧಾರಣೆ.

ಹೊಸ ಚಾಲಿ ಮಾರುಕಟ್ಟೆಗೆ   ಬರಲಾರಂಭಿಸಿದೆ. ಚಾಲಿಯ ಗುಣ ಮಟ್ಟದ ಮೇಲೆ ಬೆಳೆಗಾರರಿಗೆ ಹೆಚ್ಚು ಖಾತ್ರಿ ಇಲ್ಲದ ಕಾರಣ ಬಿದ್ದ ಒದ್ದೆಯಾದ ಅಡಿಕೆಯನ್ನು ಹೇಗೂ ದರ ಒಳ್ಳೆಯದಿದೆಯಲ್ಲಾ ಎಂದು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಚಾಲಿಗೆ ಖಾಸಗಿ ವ್ಯಾಪಾರಸ್ಥರಲ್ಲಿ ದರ ಕಡಿಮೆ, ಸಹಕಾರಿಗಳಲ್ಲಿ ಸ್ಥಿರವಾಗಿಯೂ ಇದೆ. ನಾಳೆ ನಾಡಿದ್ದಿನಲ್ಲಿ ಸಾಂಸ್ಥಿಕ ಖರೀದಿದಾರರೂ ಸ್ವಲ್ಪ ದರ ಇಳಿಸುವ ಮುನ್ಸೂಚನೆ ಇದೆ. ಕೆಂಪು ಅಡಿಕೆ ಬೆಳೆಗಾರರಲ್ಲಿ ದೊಡ್ಡ ಬೆಳೆಗಾರರು ಮತ್ತು ಚೇಣಿಯವರು ಮಾರಾಟಕ್ಕೆ  ದರ ಯಾವಾಗ ಏರುತ್ತದೆ ಎಂದು ಕಾಯುತ್ತಿದ್ದಾರೆ. ಈ…

Read more

ಸಾವಯವ ಇಂಗಾಲ- ಇದು ಇದ್ದರೆ ಮಣ್ಣಿಗೆ ಬೇರೆ ಹೆಚ್ಚೇನೂ ಬೇಡ.

ಮಣ್ಣು ವಿಜ್ಞಾನಿಗಳು ಮಣ್ಣು ನೋಡಿ ಮೊದಲು ಹೇಳುವುದು ಈ ಮಣ್ಣಿನಲ್ಲಿ ಸಾವಯವ ಇಂಗಾಲ ಎಷ್ಟು ಇದೆ ಎಂಬುದನ್ನು. ಇದನ್ನು ಅನುಸರಿಸಿ ನಂತರದ ಸಲಹೆಗಳು. ಮಣ್ಣು ಯಾವ ಪೋಷಕಾಂಶ  ಹಾಕಿದರೂ ಅದು ಸಸ್ಯ ಸ್ವೀಕರಿಸಬೇಕಾದರೆ ಆದರಲ್ಲಿ ಇಂಗಾಲದ ಅಂಶ ಹೆಚ್ಚಿನ ಪ್ರಮಾಣದಲ್ಲಿ  ಇರಬೇಕು. ಈಗ ನಮ್ಮ ಸುತ್ತಮುತ್ತ ಮಾರಾಟವಾಗುತ್ತಿರುವ ವಿವಿಧ ಹೆಸರಿನ ಜೈವಿಕ ಗೊಬ್ಬರಗಳೂ ಕೆಲಸ ಮಾಡಿ ನಮಗೆ ತೃಪ್ತಿಕರ ಫಲಿತಾಂಶ ಕೊಡಬೇಕಿದ್ದರೆ ಮಣ್ಣಿನಲ್ಲಿ  ಕಾರ್ಬನ್ ( ಇಂಗಾಲ) ಅಂಶ ಹೇರಳವಾಗಿ ಇರಬೇಕು. ಹೀಗಿರುವಾಗ ನಾವು ಗೊಬ್ಬರ ಹಾಕುವುದಕ್ಕಿಂತ…

Read more
good yielded plant

ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ ಸೂಕ್ತ ವಿಧಾನ.

ಈಗ ಎಲ್ಲರೂ ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ (ಬೀಜದ ಅಡಿಕೆ) ಅವಸರದಲ್ಲಿದ್ದಾರೆ. ಉತ್ತಮ ಇಳುವರಿ ಕೊಡುವ ತಳಿ ಬೇಕು ಎಂಬುದು ಎಲ್ಲರ ಆಕಾಂಕ್ಷೆ . ಬೀಜದ ಅಡಿಕೆ ಹುಡುಕಾಟದ ಭರದಲ್ಲಿ ತಮ್ಮ ಕಾಲ ಬುಡದಲ್ಲೇ ಇರುವ  ಉತ್ಕೃಷ್ಟ ತಳಿಯ ಅಡಿಕೆಯನ್ನು ಗಮನಿಸುವುದೇ ಇಲ್ಲ.  ನಿಜವಾಗಿ ಹೇಳಬೇಕೆಂದರೆ ಅವರವರ ಹೊಲದಲ್ಲಿ  ಅಥವಾ ಅವರ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ತಳಿಗಳೇ  ಉತ್ಕೃಷ್ಟ ತಳಿಯಾಗಿರುತ್ತದೆ. ಯಾವುದೇ ಬೆಳೆಯಲ್ಲಿ ಬೀಜದ ಆಯ್ಕೆ ಎಂಬುದು ಪ್ರಾಮುಖ್ಯ ಘಟ್ಟ. ಬೀಜದ ಗುಣದಲ್ಲೇ…

Read more
ಅಡಿಕೆ ಬೆಳೆಯಲ್ಲಿ ಹೆಚ್ಚಳವಾಗುತ್ತಿರುವ ಸಮಸ್ಯೆ

ಅಡಿಕೆ ಬೆಳೆಯಲ್ಲಿ ಈ ಸಮಸ್ಯೆ ಬಾರೀ ಹೆಚ್ಚಳವಾಗಲು ಕಾರಣ.

ಇತ್ತೀಚೆಗೆ ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಎಲ್ಲರೂ ಇದಕ್ಕೆ ಏನು ಪರಿಹಾರ ಎಂದು ಕೇಳುವವರು. ಆದರೆ ಯಾಕಾಗಿ ಈ  ಸಮಸ್ಯೆ ಹೆಚ್ಚಾಯಿತು ಎಂದು ಯಾರೂ ಹೇಳುತ್ತಿಲ್ಲ.ಇದು ಹೊಸ ಸಮಸ್ಯೆ ಅಲ್ಲ. ಅಡಿಕೆ ಬೆಳೆ ಪ್ರಾರಂಭವಾದಾಗಿನಿಂದಲೂ ಇದ್ದುದೇ. ಆದರೆ ಈಗ ಅದು ಮಿತಿ ಮೀರಿ ಹೆಚ್ಚಳವಾಗುತ್ತಿದೆ.ಎಲ್ಲಾ ಕಡೆಯಲ್ಲೂ ಇದು ಅಡಿಕೆ ಬೆಳೆಯನ್ನು ಪೀಡಿಸುತ್ತಿದೆ. ಅಡಿಕೆ ಮರ/ ಸಸಿಗಳ ಎಲೆಯನ್ನು ಹಾಳು ಮಾಡುವ ಒಂದು ರೀತಿಯ ತಿಗಣೆ ಇತ್ತೀಚಿನ ವರ್ಷಗಳಲ್ಲಿ  ಭಾರೀ ಸಮಸ್ಯೆ ಉಂಟು ಮಾಡುತ್ತಿದೆ….

Read more
ಅಡಿಕೆ ಬೇಯಿಸಿದ ರಾಸಿ

ಅಡಿಕೆಗೆ 2022 ಕ್ಕೆ ದಾಖಲೆಯ ಬೆಲೆ ಬರಲಿದೆ -ಅಡಿಕೆ ಧಾರಣೆ ದಿನಾಂಕ.16-12-2021.

ಹೊಸ ವರ್ಷ 2022 ಕ್ಕೆ ಅಡಿಕೆ ಧಾರಣೆ ಐತಿಹಾಸಿಕ ದಾಖಲೆಯನ್ನು ನಿರ್ಮಿಸುತ್ತದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಈಗಾಗಲೇ ಹೊಸ ಚಾಲಿಗೆ ರೂ.465 ದಾಟಿದೆ. ಹಳೆ ಚಾಲಿ 540-545 ಕ್ಕೆ ಮುಟ್ಟಿದೆ. ಕೆಂಪು ರಾಶಿ ಸರಾಸರಿ 47,000 ದ ಗಡಿ ದಾಟಿದೆ. ಈ ವರ್ಷದ ಕೊನೆ ಒಳಗೆ ಹೊಸ ಚಾಲಿ ದರ  47500 ದಾಟುವ ಎಲ್ಲಾ ಸಾಧ್ಯತೆಗಳಿದ್ದು, ಹಳೆ ಚಾಲಿ 55,000 ಮುಟ್ಟುವ ನಿರೀಕ್ಷೆ ಇದೆ. ಹೊಸ ವರ್ಷದಲ್ಲಿ ಕೆಂಪಡಿಕೆ ದರ ಮೇಲೇರಲಿದೆ. ಚಾಲಿಯೂ 50000 ಗಡಿ…

Read more
ಕೆಂಪು ಅಡಿಕೆ ಧಾರಣೆ

ಡಿಸೆಂಬರ್ ಎರಡನೇ ಶುಕ್ರವಾರ-10-12-2021.ಅಡಿಕೆ ಧಾರಣೆ.

ಅಡಿಕೆ ಬೆಳೆಗಾರರು  ಹೆಚ್ಚಾಗಿ  ವಾರದ ಮೊದಲ ದಿನ ಸೋಮವಾರದ ಧಾರಣೆ ಹೇಗಿರುತ್ತದೆ ಮತ್ತೆ ಶುಕ್ರವಾರದ ಧಾರಣೆ ಹೇಗಿರುತ್ತದೆ ಎಂದು ಗಮನಿಸಿ ಏರಿಳಿತವನ್ನು ಲೆಕ್ಕಾಚಾರ ಹಾಕುತ್ತಾರೆ. ಸೋಮವಾರ ಏರಿಕೆಯಾದರೆ ಇಡೀ ವಾರ  ಹಾಗೆಯೇ ಮುಂದುವರಿಯುತ್ತದೆ. ಶುಕ್ರವಾರದ ದರ ಮುಂದಿನ ವಾರದ ದರವನ್ನು ಅಂದಾಜು ಮಾಡಲು ಸಹಾಯಕ. ಇಂದು ದಿನಾಂಕ 10-12-2021 ಶುಕ್ರವಾರ ದರ ಇಳಿಕೆಯಾಗದೆ ಸ್ವಲ್ಪ ಏರಿಕೆಯೇ ಆದ ಕಾರಣ ಮುಂದಿನ ವಾರವೂ ಹೀಗೆ ಮುಂದುವರಿಯಬಹುದು, ಇಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಚಾಲಿ ಹೊಸತು 43,500-45200 ತನಕ, ಹಳೆ…

Read more
ಗೋಬರ್ ಗ್ಯಾಸ್ ಸ್ಥಾವರ

ಗೋಬರ್ ಗ್ಯಾಸ್ ಸ್ಲರಿಯಲ್ಲಿ ಸತ್ವ ಇದೆ.

ಸಗಣಿಯನ್ನು ಹಾಗೆಯೇ ಬೆಳೆಗಳಿಗೆ ಹಾಕುವುದಕ್ಕಿಂತ ಅದನ್ನು ದ್ರವೀಕರಿಸಿ ಕೊಡುವುದರಿಂದ ಅದರ ಪೂರ್ಣ ಸತ್ವಗಳು  ಬೆಳೆಗಳಿಗೆ  ದೊರೆಯುತ್ತದೆ. ಅನಿಲ ಉತ್ಪಾದನೆ ಅಗುವಾಗ ಸಗಣಿಯ ಸಾರ ಕಡಿಮೆಯಾಗುತ್ತದೆ ಎಂಬುದು ನಿಜವಲ್ಲ. ಅನಿಲ ಉತ್ಪಾದನೆಗೆ ಬೇಕಾಗುವ ಅಂಶವೇ ಬೇರೆ. ಬೆಳೆಗಳಿಗೆ ಬೇಕಾಗುವುವಂತದ್ದು ಅದರಲ್ಲೇ ಉಳಿಯುತ್ತದೆ.ಪ್ರತೀಯೊಬ್ಬ ಗೋಬರ್ ಗ್ಯಾಸ್ ಸ್ಲರಿ ಬಳಕೆದಾರ ತಿಳಿಯಬೇಕಾದ  ಮಾಹಿತಿ ಇಲ್ಲಿದೆ. ಹಳ್ಳಿಯಲ್ಲಿ ಕೃಷಿಕರ ಮನೆಯಲ್ಲಿ ಬಯೋಗ್ಯಾಸ್ ಅಥವಾ ಗೋಬರ್ ಗ್ಯಾಸ್ ಇದ್ದರೆ ಸಿದ್ದ ಗೊಬ್ಬರ ಇದ್ದಂತೆ. ಒಂದೆರಡು ದನ ಇದ್ದವರೂ ಗೋಬರ್ ಗ್ಯಾಸ್ ಮಾಡಿಕೊಳ್ಳಬಹುದು. ಹೆಚ್ಚು ದನ…

Read more
error: Content is protected !!