ಕೆಂಪಡಿಕೆ ರಾಸೀ ಶ್ರಿಂಗೇರಿ

ಕೆಂಪಡಿಕೆ- ಸುಪಾರಿ ಎರಡೂ ಏರಿಕೆ- ಸೋಮವಾರ 06-12-2021 ರ ಧಾರಣೆ.

ಕರಾವಳಿಯಲ್ಲಿ ಅಡಿಕೆ ಖರೀದಿಯ ಪ್ರಮುಖ ಸಂಸ್ಥೆ ಕ್ಯಾಂಪ್ಕೋ ಇಂದು ಹಳೆ ಸುಪಾರಿ, ಡಬ್ಬಲ್ ಚೋಲ್ ಗಳಿಗೆ ಏಕಾಏಕಿ 10 ರೂ. ಏರಿಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟುಮಾಡಿದೆ.  ಖಾಸಗಿಯವರು ನಾವೂ ಸ್ಪರ್ಧೆಗೆ ಸಿದ್ದರಿದ್ದೇವೆ ಎಂದು ತೋರಿಸಿದ್ದಾರೆ. ಕ್ಯಾಂಪ್ಕೋ ಹೊಸ ಸುಪಾರಿ ಕ್ವಿಂಟಾಲಿಗೆ 43,500, ಖಾಸಗಿ 45,000, ಹಳೆ ಅಡಿಕೆ ಕ್ಯಾಂಪ್ಕೋ 42,500- ಡಬ್ಬಲ್ ಚೋಲ್ 43,000 ಖಾಸಗಿ 54,000 ದರದಲ್ಲಿ ಖರೀದಿ ನಡೆದಿದೆ. ಶಿರಸಿಯಲ್ಲಿ ಕೆಂಪಡಿಕೆ (ರಾಶಿ) ಮತ್ತೆ ಬೆಲೆ ಏರಿಕೆಯಾಗಿದೆ. ಬಹುಷಃ ಈ ವಾರ ಮತ್ತೆ…

Read more
ಬಟರ್ ಪ್ರೂಟ್ ಕಾಂಡ ಕೊರಕ ದುಂಬಿ ಕೊರೆದ ಭಾಗ

ಬಟರ್ ಫ್ರೂಟ್ ಮರಗಳು ಸಾಯುವುದಕ್ಕೆ ಕಾರಣ ಮತ್ತು ಪರಿಹಾರ.

ಬಟರ್ ಫ್ರೂಟ್ ಬೆಳೆ ಈಗ ಎಲ್ಲೆಂದರಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೆಳೆಯಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಈ ಬೆಳೆಯ ಬಗ್ಗೆ ಜನ ಉತ್ಸುಕರಾಗಿದ್ದಾರೆ. ಬಹಳಷ್ಟು ಜನ  ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಬಹಳಷ್ಟು ಜನ ಬೆಳೆಸಿದ ಸಸಿ/ ಫಲ ಕೊಡುತ್ತಿರುವ  ಮರ ಕಾಣು ಕಾಣುತ್ತಿದ್ದಂತೆ  ಸಾಯುತ್ತಿವೆ.  ಮರಗಳು ಸಾಯುವುದಕ್ಕೆ ಕಾರಣ ಕಾಂಡ ಕೊರಕ ಕೀಟ. ಇದನ್ನು ನಿಯಂತ್ರಿಸದೆ ಇದ್ದರೆ ಆಕಾಂಕ್ಷೆಯಲ್ಲಿ ಬೆಳೆದ ಬೆಳೆ ನಾಶವಾಗುತ್ತದೆ. ಇದರ ನಿಯಂತ್ರಣ ವಿಧಾನ ಹೀಗೆ. ಬಟರ್ ಫ್ರೂಟ್ (Avocado) ಸಸ್ಯ ಸ್ವಲ್ಪ…

Read more
ಬಿಲಿ ಚಾಲಿ ಸುಪಾರಿ ಅಡಿಕೆ

ಶುಕ್ರವಾರದ ಅಡಿಕೆ ಧಾರಣೆ-ದಿನಾಂಕ 03-12-2021

ಅಡಿಕೆ ಬೆಳೆಗಾರರಿಗೆ 2021 ವರ್ಷ ಅಂತಹ ನಿರಾಸೆಯನ್ನೆನೂ ಮಾಡಲಿಲ್ಲ.  ವರ್ಷದ ಹೆಚ್ಚಿನ ಸಮಯದಲ್ಲಿ ಉತ್ತಮ ಬೆಲೆ ಇತ್ತು.  ಕಳೆದ ವರ್ಷ ಮತ್ತು ಈ ವರ್ಷ ಅಡಿಕೆಗೆ ಬೇಡಿಕೆ ಎಷ್ಟು ಇದೆ ಎಂಬುದರ ಪೂರ್ಣ ಚಿತ್ರಣ ಸಿಕ್ಕಿದೆ. ಆಮದು ಮಾಡುತ್ತಾ ದೇಶದ ಅಡಿಕೆ ಬೆಳೆಗಾರರ ಮೇಲೆ ಕಲ್ಲು ಹೊತ್ತು ಹಾಕುತ್ತಾ ಈ ತನಕ ನಮ್ಮನ್ನು ಮೋಸವೇ ಮಾಡಲಾಗಿತ್ತು. ಇದೆಲ್ಲವೂ ಈಗ ಜನತೆಗೆ ಗೊತ್ತಾಗಿದೆ. ವರ್ಷದ ಕೊನೆ ತಿಂಗಳು, ಮೊದಲ ವಾರ ಶುಕ್ರವಾರ ಅಡಿಕೆ ಬೆಳೆಗಾರರ ಪಾಲಿಗೆ ಉತ್ತಮ ಧಾರಣೆ…

Read more
ರೈತರ ಹೊರಾಟ- PTI image

ರೈತ ಹೋರಾಟದಲ್ಲಿ ಸತ್ತವರಿಗೆ ಪರಿಹಾರವೇ ಇಲ್ಲವಂತೆ.

ಕೇಂದ್ರದ ಕೃಷಿ ಕಾಯಿದೆಯ ವಿರುದ್ದ ಹಗಲು ರಾತ್ರೆ ಎನ್ನದೆ  ಒಂದು ವರ್ಷಕ್ಕೂ ಹೆಚ್ಚಿನ ಕಾಲ ಧರಣಿ ಪ್ರತಿಭಟನೆ ಮಾಡಿದ ರೈತರ ಪೈಕಿಯಲ್ಲಿ ಸುಮಾರು 700 ಮಂದಿ ಸತ್ತಿದ್ದಾರೆ ಎಂಬುದಾಗಿ ಸುದ್ದಿಗಳಿತ್ತು. ಸತ್ತವರಿಗೆ ಪರಿಹಾರ ಕೊಡಬೇಕು ಎಂಬುದಾಗಿ ವಿರೋಧ ಪಕ್ಷಗಳು ಬೊಬ್ಬಿಟ್ಟರೂ ಪ್ರಯೋಜನ ಆಗಲಿಲ್ಲ. ಸತ್ತವರು ಬೀದಿ ನಾಯಿ ಸತ್ತಂತೆ ಆಯಿತಲ್ಲಾ ದುರ್ಗತಿ! ಈ ತನಕ ಭಾರತದ ಇತಿಹಾಸದಲ್ಲೇ ನಡೆದಿರದ ಸುಧೀರ್ಘ ರೈತ ಹೋರಾಟ ಜಯವನ್ನೇನೋ ಪಡೆಯಿತು. ಆದರೆ ರೈತರೆಂದು ಹೋರಾಟದಲ್ಲಿ ಭಾಗವಹಿಸಿದವರು ಸತ್ತರೆ ಅವರ ದಾಖಲೆಯೇ ಇಲ್ಲವೆಂದರೆ…

Read more
ಒಂದು ವರ್ಷ ದಾಟುತ್ತಿರುವ ಅಡಿಕೆ ಗಿಡ ಹೀಗೆ ಬೆಳೆದರೆ ಉತ್ತಮ ಫಸಲು ಗ್ಯಾರಂಟಿ.

ಅಡಿಕೆ ಬೆಳೆಯುವವರು ಗಮನಿಸಿ- ಉತ್ತಮ ಫಲ ಪಡೆಯಲು ಗಿಡ ಹೇಗೆ ಬೆಳೆಯ ಬೇಕು.

ಅಡಿಕೆಗೆ ಬೆಲೆ ಏರಿಕೆ ಆದಂತೆ ಬೆಳೆಯುವ ರೈತರೂ ಹೆಚ್ಚಾಗುತ್ತಾರೆ. ಭತ್ತ , ಜೋಳ, ಹತ್ತಿ, ತರಕಾರಿ ಬೆಳೆ ಬೆಳೆದು ಹೊಟ್ಟೆ ಬಟ್ಟೆಗೂ ಸಾಕಾಗದ ಸ್ಥಿತಿಯಲ್ಲಿ ಬದುಕು ಸಾಗಿಸುವುದಕ್ಕಿಂತ ಏನಾದರೂ ಹೆಚ್ಚುವರಿ ಆದಾಯ ಪಡೆಯಬಹುದೆಂಬ ಅಸೆ ಸಹಜ. ಆದರೆ ಕೆಲವರು ತಮ್ಮ ತೋಟದ ಅಡಿಕೆ ಗಿಡಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಸಲಹೆ ಕೇಳುವಾಗ, ಇಂತಹ ಸಸಿಗಳಿಂದ ಅಡಿಕೆ ಫಸಲು ಪಡೆಯಬಹುದೇ ಎಂಬ ಸಂಶಯವೂ ಬರುತ್ತದೆ. ಮುಖ್ಯವಾಗಿ ಅಡಿಕೆ ತೋಟ ಮಾಡುವ ವಿಧಾನ ಜಠಿಲ ಅಲ್ಲದಿದ್ದರೂ, ಕಾಲ ಕಾಲಕ್ಕೆ…

Read more
ಅಡಿಕೆ ಮಾರಾಟ

ಅಡಿಕೆಗೆ ದರ ಎರಿಕೆಯಾಗುತ್ತಿದೆ- ಬೆಳೆಗಾರರು ಎಚ್ಚರವಹಿಸಿ. 30-11- 2021ರಂದು ಧಾರಣೆ.

ಇಷ್ಟೊಂದು ಅಡಿಕೆ ಉತ್ಪಾದನೆ ಇದೆ. ಬೆಳೆ ಕಡಿಮೆ ಇದ್ದರೂ ಹೊಸ ತೋಟಗಳು ಹೆಚ್ಚಾಗಿ ಉತ್ಪಾದನೆ ಕಡಿಮೆ ಆಗಿಲ್ಲ. ಒಂದೇ ಒಂದು ಎಂದರೆ  ಅಡಿಕೆ ಆಮದು ಇಲ್ಲ ಎಂಬುದು. ಈ ಕಾರಣಕ್ಕೆ  ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದೆ. ನವೆಂಬರ್ ತಿಂಗಳು ಅಡಿಕೆ ಬೆಳೆಗಾರರಿಗೆ ಎಲ್ಲೂ ನಿರಾಸೆ ಕೊಡಲಿಲ್ಲ. ಚಾಲಿ ಅಡಿಕೆ, ಕೆಂಪಡಿಕೆ ಎರಡೂ ಏರಿಕೆಯ ಯಲ್ಲೇ ಮುಂದುವರಿದಿದೆ. ಕರಿಮೆಣಸು ಮೊದಲು ಏರಿಕೆಯ ಗತಿಯಲ್ಲಿ ಇತ್ತಾದರೂ ನಂತರ ಇಳಿಕೆ ಹಾದಿ ಹಿಡಿಯಿತು. ಕೊಬ್ಬರಿ ಸಹ ಒಮ್ಮೆ ಏರಿಕೆ ಆಗಿ ಸ್ವಲ್ಪ…

Read more
ಬಟರ್ ಫ್ರೂಟ್ ಸ್ಥಳೀಯ

ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು?– ಇಲ್ಲಿದೆ ಮಾಹಿತಿ.

ಒಂದು ಬೆಳೆಗೆ ಹೆಚ್ಚಿನ ಬೆಲೆ, ಬೇಡಿಕೆ ಇದೆ ಎಂದಾಕ್ಷಣ ಎಲ್ಲರೂ ಆ ಬೆಳೆ ಬೆಳೆಸಬೇಕು ಎಂದು ಉತ್ಸುಕರಾಗುತ್ತಾರೆ. ಅದಕ್ಕನುಗುಣವಾಗಿ ಪ್ರಚಾರಗಳೂ ಜನರನ್ನು  ಗೊಂದಲಕ್ಕೀಡು ಮಾಡುತ್ತವೆ. ಸಸ್ಯೋತ್ಪಾದಕರೂ ಹೆಚ್ಚಾಗುತ್ತಾರೆ. ಎಲ್ಲವೂ ಎಷ್ಟು ಉತ್ತಮವೋ ಅಷ್ಟೇ ಅಪಾಯಕಾರಿಯೂ ಅಗಿರುತ್ತದೆ. ಈ ಸಂದರ್ಭದಲ್ಲಿ ರೈತರಿಗೆ ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು ಎಂಬ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಯಾವುದೇ ಬೆಳೆ ಇರಲಿ. ಅದನ್ನು ಬೆಳೆಸುವ ಮುಂಚೆ ಅದರ ಪೂರ್ವಾಪರ ವನ್ನು ಕೂಲಂಕುಶವಾಗಿ ತಿಳಿದುಕೊಳ್ಳಬೇಕು. ಆ ಬೆಳೆಯ ಬಗ್ಗೆ ಸ್ಥಳೀಯವಾಗಿ…

Read more
ಬೆಂಗಳೂರು ಸ್ಥಳೀಯ ಬೆಣ್ಣೆ ಹಣ್ಣು

ಭಾರೀ ಮಹತ್ವ ಪಡೆಯುತ್ತಿರುವ ಬೆಣ್ಣೆ ಹಣ್ಣು ಬೇಸಾಯ.

ಒಂದು ಕಾಲದಲ್ಲಿ ವೆನಿಲ್ಲಾ ಎಂಬ ಬೆಳೆ ಎಲ್ಲರ ಗಮನಸೆಳಿದಿತ್ತು. ಅದು ಹಾಗೆಯೇ ಅಳಿಸಿಹೋಯಿತು. ಈಗ ಮತ್ತೊಂದು ಹಣ್ಣಿನ ಬೆಳೆ ಬಹುತೇಕ ಎಲ್ಲರ ಗಮನ ಸೆಳೆಯಲಾರಂಭಿಸಿದೆ. ಅದುವೇ ಕಿಲೋಗೆ 200 ರೂ. ತನಕ ಬೆಲೆ ಇರುವ ಬಟರ್ ಫ್ರೂಟ್ ಹಣ್ಣು. ಇದು ಮರ ಬೆಳೆ. ಮರಕ್ಕೆ 2-3 ಕ್ವಿಂಟಾಲಿಗೂ ಹೆಚ್ಚು ಇಳುವರಿ ಕೊಡಬಲ್ಲ ಜಗತ್ತಿನಾದ್ಯಂತ ಬೇಡಿಕೆ ಇರುವ ಹಣ್ಣು ಇದು. ಬೆಣ್ಣೆ ಹಣ್ಣು (AVOCADO OR BUTTER FRUIT) ಒಂದು ಮೈನರ್ ಫ್ರೂಟ್ ಆಗಿ ನಮ್ಮ ಸುತ್ತಮುತ್ತ ಶತಮಾನಗಳಿಂದಲೂ…

Read more
ಬೂದಿಯ ಮೂಲಕ ಕೀಟ ನಿಯಂತ್ರಣ

ಸಾವಯವ ಕೀಟ –ರೋಗ-ನಿಯಂತ್ರಣ ವಿಧಾನ.

ಸರ್ವ ರೋಗಕ್ಕೆ ಬೂದಿ ಮದ್ದು ಎಂಬುದನ್ನು ಎಲ್ಲರೂ ಕೇಳಿರಬಹುದು. ಬೂದಿ ಎಂದರೆ ಅದು ಮರವನ್ನು ಸುಟ್ಟಾಗ ಸಿಗುವ ವಸ್ತು, ಇದು ಕ್ಷಾರೀಯ. ಇದನ್ನು ಬೆಳೆಗಳ  ಮೇಲೆ ಚೆಲ್ಲಿದಾಗ ಅದು ಒಂದು ಪೊಟ್ಯಾಶಿಯಂ ಸತ್ವದ ಪೋಷಕವಾಗಿಯೂ ,  ಕೀಟ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಇದನ್ನು ಬಹುಸ್ತರದ ಸಾವಯವ ಕೀಟ –ರೋಗ-ನಿಯಂತ್ರ ಕ ಎಂಬುದಾಗಿ ಹಿರಿಯರು ಹೇಳುತ್ತಾ ಬಂದಿದ್ದಾರೆ. ದುರದೃಷ್ಟವೆಂದರೆ ಈಗ  ಅಡುಗೆ ಒಲೆಗೆ ಗ್ಯಾಸ್  ಬಂದಿದೆ. ಬಿಸಿ ನೀರ ಸ್ನಾನಕ್ಕೆ ಸೋಲಾರ್ ಬಂದಿದೆ. ಕಟ್ಟಿಗೆ ಸುಟ್ಟ ಬೂದಿ…

Read more
ರಾಸಿ ಅಡಿಕೆ ರಾಶಿ

ಈಗ ಚಾಲಿ – ಮುಂದೆ ಕೆಂಪು – ಅಡಿಕೆ ಮಾರುಕಟ್ಟೆ ಸ್ಥಿತಿ. 26/11/2021 ಶುಕ್ರವಾರದ ಧಾರಣೆ.

ಚಾಲಿ ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದ್ದು, ಇದರ ಮುನ್ಸೂಚನೆ ಶಿರಸಿ, ಸಿದ್ದಾಪುರ, ಸಾಗರ ಮಾರುಕಟ್ಟೆಯ ಮೂಲಕ ಕಾಣಿಸುತ್ತಿದೆ. ಇಲ್ಲಿನ ಅಡಿಕೆಗೆ ದರ ಹೆಚ್ಚಳವಾದರೆ ಸಧ್ಯವೇ ಉಳಿದೆದೆ ದರ ಏರುವುದು ಹಿಂದಿನಿಂದಲೂ ಬಂದ ವಾಡಿಕೆ. ಇಂದು ಶಿವಮೊಗ್ಗ, ಉತ್ತರಕನ್ನಡದ ಮಾರುಕಟ್ಟೆಯಲ್ಲಿ ಚಾಲಿ ಕ್ವಿಂಟಾಲಿಗೆ  51000 ರೂ.ತಲುಪಿದೆ. ಕರಾವಳಿಯಲ್ಲೂ ಸಧ್ಯವೇ 53,000 ದಾಟುವ ಮುನ್ಸೂಚನೆ ಕಾಣಿಸುತ್ತಿದೆ. ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಕೊರತೆ ಇದೆ. ಈ ವರ್ಷ ದರ ಏರಿಕೆಯಲ್ಲೇ ಇದ್ದ ಕಾರಣ ಹಾಗೆಯೇ ಅನಿಶ್ಚಿತತೆ ವಾತಾವರಣ ಇದ್ದ ಕಾರಣ  ಬಹುತೇಕ…

Read more
error: Content is protected !!