ಅಡಿಕೆ ಮರದ ಸುಳಿ ಭಾಗಕ್ಕೆ ಹಾನಿ

ಅಡಿಕೆ ಮರಗಳು ಸಾಯುತ್ತಿವೆಯೇ? ಒಮ್ಮೆ ಸುಳಿ ಭಾಗವನ್ನು ಪರೀಕ್ಷಿಸಿರಿ.

ಅಡಿಕೆ ಮರದ ಸುಳಿ  ಏನೋ  ವ್ಯತ್ಯಾಸವಾದಂತೆ ಕಂಡರೆ,  ಕೆಂಪು ಮೂತಿ ಹುಳವೂ ಉಪಟಳ  ಇರಬಹುದು. ಮರದ ಸುಳಿ ಭಾಗ ಬಾಡಿದಂತೆ ಕಂಡರೆ, ಅಥವಾ ಕಾಂಡದಲ್ಲಿ  ಸುಳಿಭಾಗದಿಂದ ಪ್ರಾರಂಭಗೊಂಡು ರಸ ಇಳಿದಂತೆ ಕಂಡರೆ , ಸುಳಿ ಭಾಗ ಸ್ವಲ್ಪ ಹರಿದಂತೆ ಕಂಡರೆ ಮರ ಏರಿ ಸುಳಿ ಭಾಗವನ್ನು ಒಮ್ಮೆ ಪರಿಶೀಲಿಸಿರಿ. ಸುಳಿಯಲ್ಲಿ ಏನೋ ಆಗಿದೆ ಎಂಬುದು ಈ ಮೇಲಿನ ಲಕ್ಷಣಗಳು ಹೇಳುತ್ತವೆ. ಕಳೆದ ಎರಡು ವರ್ಷಗಳಿಂದ ಅಡಿಕೆ  ಮರಗಳು ಸುಳಿ ಕೊಳೆತು ಸಾಯುತ್ತಿವೆ. ರೈತರು ಅದನ್ನು ಕಡಿಯದೇ ಹಾಗೇ…

Read more
ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ.

ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೂತನ ಮುಖ್ಯ ಮಂತ್ರಿಗಳ ಕೊಡುಗೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರೇ  ರೈತರಿಗೆ ಕೊಡುವುದರಲ್ಲಿ ಎತ್ತಿದ  ಕೈಯಾದರೆ ಈಗಿನ ಹೊಸ ಮುಖ್ಯಮಂತ್ರಿಗಳಾಗಿ ಅಧಿಕಾರ  ಸ್ವೀಕರಿಸಿದ  ಬಸವರಾಜ ಬೊಮ್ಮಾಯಿಯವರೂ ಅವರಿಗಿಂತ ಏನೂ ಕಡಿಮೆ ಇಲ್ಲ. ಇಂದು (28-07-2021) ರಂದು ಕರ್ನಾಟಕದ ಮುಖ್ಯಮಂತ್ರಿ  ಸ್ಥಾನವನ್ನೇರಿದ  ಶ್ರೀ ಬಸವರಾಜ್ ಬೊಮ್ಮಾಯಿಯವರು  ರೈತರಿಗೆ ಏನು ಕೊಡುವುದು ಎಂದು ಯೋಚಿಸಿ ಹೊಸತಾಗಿ ಯಾರೂ ಕೊಡದೆ ಇರುವ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ರೂ.1000 ಕೋಟಿಯನ್ನು  ಮಿಸಲಿಟ್ಟು ಹೊಸ ದಾಖಲೆ ಮಾಡಿದ್ದಾರೆ. ಶ್ರೀಯುತ  ಎಸ್…

Read more
ಕರಿಮೆಣಸಿನ ರೋಗ ಲಕ್ಷಣ

ಕರಿಮೆಣಸು- ರೋಗದ ಪ್ರಾರಂಭಿಕ ಲಕ್ಷಣಗಳು ಮತ್ತು ಪರಿಹಾರ ಕ್ರಮಗಳು.

ಕಳೆದ ಕೆಲವು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು, ಕರಿಮೆಣಸಿನ ಬಳ್ಳಿಗೆ ಯಾವಾಗಲೂ ರೋಗ ಬರಬಹುದು. ಬಂದಿರಲೂ ಬಹುದು. ರೋಗದ ಮುನ್ಸೂಚನೆ ಪತ್ತೆ ತಿಳಿದಿದ್ದರೆ ಅದನ್ನು ಬದುಕಿಸಬಹುದು. ಮಳೆಗಾಲ ಮೆಣಸಿನ ಬಳ್ಳಿಗೆ ತೀವ್ರವಾದ ತೊಂದರೆಯನ್ನು ಉಂಟು ಮಾಡುತ್ತದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಮುಗಿಯುವ ತನಕ ಯಾವಾಗಳೂ ಬರಬಹುದಾದ ಬಳ್ಳಿ ಕೊಳೆ ರೋಗವನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಬಳ್ಳಿಯನ್ನು ಬದುಕಿಸಬಹುದು. ರೋಗ  ಪ್ರಾರಂಭವಾಗುವಾಗ ಬಳ್ಳಿ ಯಾವ ಲಕ್ಷಣಗಳನ್ನು ತೋರಿಸುತ್ತದೆ ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಿದ್ದರೆ ಮಾತ್ರ ನಿವಾರಣೆ ಮಾಡಲು ಸಾಧ್ಯ. ಬುಡ…

Read more
ಉತ್ತಮ ಚಾಲಿ ಅಡಿಕೆ

ಅಡಿಕೆಗೆ ಮತ್ತೆ ಬೆಲೆ ಏರಿಕೆ ಪ್ರಾರಂಭ- ಇಂದು ದೊಡ್ಡ ಜಂಪ್.

ಕಳೆದ ಮೂರು ನಾಲ್ಕು ದಿನಗಳಿಂದ ಬೆಳಗ್ಗೆ ಗೂಬೆ ಕೂಗಲು ಪ್ರಾರಂಭವಾಗಿದೆ. ಚಾಲಿ 43,000 ದಲ್ಲಿದ್ದ ಬೆಲೆ 45,000.ಕ್ಕೆ ಏರಿದೆ. ಮುನ್ಸೂಚನೆಗಳು ಅಡಿಕೆ ಧಾರಣೆಯನ್ನು ಮೇಲೆ ಒಯ್ಯುವ ಸಂಭವವಿದೆ. ಚಾಲಿ ಅಡಿಕೆಗೆ ಉತ್ತರ ಭಾರತದಿಂದ ಬೇಡಿಕೆ ಪ್ರಾರಂಭವಾಗಿದೆ ಎಂಬ ವದಂತಿ ಇದೆ. ಕೊರೋನಾ ಲಾಕ್ ಡೌನ್ ಸಮಯದಿಂದಲೂ ವ್ಯಾಪಾರಿಗಳಲ್ಲಿ  ದಾಸ್ತಾನು ಉಳಿದಿದೆ. ಆ ಕಾರಣದಿಂದ ಬೆಲೆ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ. ಚಾಲಿ ಅಡಿಕೆಗೆ ಜೂನ್ ತಿಂಗಳ ಕೊನೆಗೆ ಬೆಲೆ ಏರಿಕೆ ಪ್ರಾರಂಭವಾದುದು, ಜುಲೈ ಮೊದಲ…

Read more
coffee berri

ಕಾಫೀ ಬೆಳೆಗೆ ಬಾಧಿಸಿಗೆ ಕಪ್ಪು ಕೊಳೆ ರೋಗ.

ಕಾಫೀ ಬೆಳೆಗೆ ಎರಡನೇ ಅತೀ ದೊಡ್ಡ ನಷ್ಟ ತಂದೊಡ್ಡುವ ರೋಗ ಕಪ್ಪು ಕೊಳೆ.  ಇದನ್ನು  Black rot  disease ಎಂದು ಕರೆಯುತ್ತಾರೆ. ಮಳೆಗಾಗದಲ್ಲಿ ಯಾವಾಗಲೂ ಬರಬಹುದು. ಆದರೆ ಮುಂಗಾರು ಮಳೆ ಮಧ್ಯಭಾಗ ಮತ್ತು ಕೊನೆ ಭಾಗದಲ್ಲಿ ಇದರ ತೊಂದರೆ ಹೆಚ್ಚು. ಇದು ಅರೇಬಿಕಾ ಕಾಫಿಗೆ ಹೆಚ್ಚಾಗಿಯೂ ರೋಬಸ್ಟಾಕ್ಕೆ ಸ್ವಲ್ಪ ಕಡಿಮೆ. ಈ ರೋಗ ಬಂದರೆ 10-30% ಫಸಲು ಕಡಿಮೆಯಾಗುತ್ತದೆ.   ಆಷಾಢ ಕಳೆದು ಶ್ರಾವಣ ಬಂತೆಂದರೆ ಒಮ್ಮೊಮ್ಮೆ ಮಳೆ ಮತ್ತು ಬಿಸಿಲು ಇರುತ್ತದೆ.  ಆಗಲೇ  ಹೆಚ್ಚಾಗಿ ವಾಯುಭಾರ ಕುಸಿತವೇ…

Read more
ಫಲವತ್ತಾದ ಮಣ್ಣು

ಫಲವತ್ತತೆ ಕಳೆದುಕೊಳ್ಳುತ್ತಿರುವ ಕೃಷಿ ಭೂಮಿ- ಭವಿಷ್ಯದ ಆತಂಕ.

ನಮ್ಮ ದೇಶದ 50% ಕ್ಕೂ ಹೆಚ್ಚಿನ ಕೃಷಿ ಭೂಮಿ ಸಾರ ಕಳೆದುಕೊಂಡು  ಬರಡಾಗುತ್ತಿರುವುದು ಭಾರತ ಸರಕಾರದ ಅಧ್ಯಯನಗಳಿಂದ ತಿಳಿದು ಬಂದಿದೆ. ಅಧ್ಯಯನದ ವರದಿ ಇರಲಿ. ನಮಗೆಲ್ಲಾ ಈ ವಿಚಾರ ಗಮನಕ್ಕೆ ಬಂದಿರುವಂತದ್ದೇ. ನಮ್ಮ ಕೃಷಿ ಭೂಮಿಯಲ್ಲಿ ಬೆಳೆ ಏನೋ ಹಿಂದಿಗಿಂತ ಹೆಚ್ಚು ಬರಬಹುದು. ಆದರೆ ಖರ್ಚು ಮಾತ್ರ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ಇತರ  ಬೆಳೆ ನಿರ್ವಹಣೆ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಬೇರೆ ಏನೂ ಅಲ್ಲ. ಮಣ್ಣು ತನ್ನ ಸಾರವನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳುತ್ತಿದೆ. ಇದು ಗಂಭೀರ…

Read more
ತಾಜಾ ಸೊಪ್ಪು ತರಕಾರಿ ಮಾರುವವರು

ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳುವುದು ಹೀಗೆ.

ಯಾವುದೇ ಕೆಲಸ ಮಾಡಬೇಕಾರೂ ಅದು ನಮ್ಮ ಮೈಮೇಲೆ ಬರಬಹುದೇ ಎಂದು ಒಂದಲ್ಲ ಹತ್ತಾರು ಸಲ ಯೋಚಿಸಬೇಕು. ನಾವು ಕಾಲಹರಣಕ್ಕಾಗಿ ಮಾಡುವ ಕೆಲವು ಕೆಲಸಗಳು ನಮ್ಮ ವೃತ್ತಿಗೇ ತೊಂದರೆ ಕೊಡುವಂತಾಗಬಾರದು.ಕೃಷಿಕರು ಬೆಳೆಯುವ ಉತ್ಪನ್ನಗಳಿಗೆ ಅಪಪ್ರಚಾರ ಮಾಡಿ ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳಬಾರದು. ಕಳೆದ ಎರಡು ದಿನಗಳಿಂದ ನಾವೆಲ್ಲಾ ಚಾಚೂ ತಪ್ಪದೆ ವೀಕ್ಷಿಸುವ ವಾಟ್ಸ್ ಅಪ್, ಫ಼್ಹೇಸ್ ಬುಕ್ ಮುಂತಾದವುಗಳಲ್ಲಿ ಹರಿದಾಡುವ ಒಂದು ವೀಡಿಯೋ ಬಗ್ಗೆ ಇಲ್ಲಿ ಹೇಳಲಿಚ್ಚಿಸುತ್ತೆವೆ. ಇದು ಸೊಪ್ಪು ತರಕಾರಿಗಳನ್ನು ಬಾಡದಂತೆ ಹಚ್ಚ ಹಸುರಾಗಿ ಉಳಿಸಲು…

Read more
ತೆಂಗಿನಲ್ಲಿ 150 ಕಾಯಿಗೂ ಹೆಚ್ಚಿನ ಇಳುವರಿ

ತೆಂಗಿನಲ್ಲಿ 150 ಕ್ಕೂ ಹೆಚ್ಚು ಕಾಯಿ ಪಡೆಯಲು ಕೊಡಬೇಕಾದ ಗೊಬ್ಬರ.

ತೆಂಗಿನ ಮರಕ್ಕೆ ಈ ಪ್ರಮಾಣದಲ್ಲಿ ಗೊಬ್ಬರಗಳನ್ನು ಕೊಟ್ಟರೆ ಸರಾಸರಿ 150  ಕಾಯಿ ಇಳುವರಿ ಪಡೆಯಬಹುದು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ  ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. 100 ತೆಂಗಿನ ಮರ ಇದ್ದರೆ ಅದರಲ್ಲಿ ವಾರ್ಷಿಕ ಕನಿಷ್ಟ 10,000  ತೆಂಗಿನ ಕಾಯಿ ಆಗಬೇಕು. ಮನೆ ಹಿತ್ತಲಲ್ಲಿ ಎರಡು ಮರ ಇದ್ದರೆ ಆ ಕುಟುಂಬಕ್ಕೆ ವರ್ಷಕ್ಕೆ…

Read more
ಕಿಸಾನ್ ಸಮ್ಮಾನ್ ಫಲಾನುಭವಿ ರೈತ

ರೈತರಿಂದ ಕಿಸಾನ್ ಸಮ್ಮಾನ್ ನಿಧಿ ದುರುಪಯೋಗ- ಮರುಪಾವತಿಗೆ ಆದೇಶ.

ಭಾರತ ಸರಕಾರ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಾಗಿ ಕೊಡುತ್ತಿರುವ ವಾರ್ಷಿಕ 6000 ರೂ.ಗಳಿಗೂ ನಕಲಿ ರೈತರು ನುಸುಳಿದ್ದಾರಂತೆ. ಕೇಂದ್ರ ಕೃಷಿ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್ ಇವರು ಪಾರ್ಲಿಮೆಂಟ್ ಗೆ ನೀಡಿದ ಹೇಳಿಕೆಯಂತೆ, ನಮ್ಮ ದೇಶದಲ್ಲಿ ಅರ್ಹತೆ ಇಲ್ಲದ  ಸುಮಾರು 42 ಲಕ್ಷ  ಮಂದಿ, ಸುಮಾರು 3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರಂತೆ. ಸರಕಾರ ಇದೆಲ್ಲದರ ಲೆಕ್ಕ ತೆಗೆದಿದೆ. ಮತ್ತು ಅದನ್ನು ಪಾವಾಸು ಪಡೆಯಲು ಮುಂದಾಗಿದೆ. ಸರಕಾರಕ್ಕೆ ಜನ ಮೋಸ ಮಾಡುವುದೋ ಅಥವಾ ಸರಕಾರ…

Read more
ಹಣ್ಣು ನೊಣ ಬಾಧೆಯಿಂದ ಹಾಳಾಗುವ ಹಾಗಲಕಾಯಿ

ಹಾಗಲಕಾಯಿ- ಹೀರೆಕಾಯಿ ಹಾಳಾಗುವುದಕ್ಕೆ ಕಾರಣ ಏನು ಗೊತ್ತೇ?

ನಾವೆಲ್ಲಾ ಬೆಳೆಸುವ ಹೀರೆಕಾಯಿ, ಹಾಗಲಕಾಯಿ, ಪಡುವಲ ಕಾಯಿ ಮುಳ್ಳು ಸೌತೆ ಹಾಳಾಗುವುದಕ್ಕೆ ಕಾರಣ ಒಂದು ನೊಣ. ಈ ನೊಣದ ಸಂತತಿ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಳವಾಗಿದ್ದು, ಯಾವುದೇ ಬೆಳೆಯನ್ನು ಬಿಡದ ಸ್ಥಿತಿ ಬಂದಿದೆ. ಹಿಂದೆ ಕೆಲವು ಸಿಹಿ ಹಣ್ಣು , ತರಕಾರಿಗಳಿಗೆ ಮಾತ್ರ ಇದ್ದ ಇದರ ಕಾಟ ಈಗ ಬಹುತೇಕ ಎಲ್ಲಾ  ತರಕಾರಿಗಳಿಗೂ ಬಂದಿದೆ. ತೊಂಡೆಯನ್ನೂ ಬಿಡುತ್ತಿಲ್ಲ. ಪಪ್ಪಾಯಿಯನ್ನೂ ಬಿಡುತ್ತಿಲ್ಲ.  ಇವುಗಳ ನಿಯಂತ್ರಣ ಒಂದು ಸಾಹಸವೇ ಆಗಿದೆ. ಹಣ್ಣು ನೊಣ Drosophila melanogaster  ಎಂದು ಕರೆಯಲ್ಪಡುವ  ಒಂದು…

Read more
error: Content is protected !!