ಕೆಂಪು ಬಣ್ಣದ ಗುಲಾಬಿ ತಳಿ

ಗುಲಾಬಿ ಬೆಳೆ – ನಿತ್ಯ ಆದಾಯ ಕೊಡಬಲ್ಲ ಬೆಳೆ.

ಸಾಮಾನ್ಯವಾಗಿ ಹೂವುಗಳನ್ನು ಇಷ್ಟಪಡದ ವ್ಯಕ್ತಿಗಳೇ ಇಲ್ಲಾ ಅನ್ನಬಹುದು. ಮನುಷ್ಯರ ಮನಸ್ಸನ್ನು ಹೂವಿಗೆ ಹೋಲಿಸಲಾಗುತ್ತದೆ ಅದರಲ್ಲೂ ಗುಲಾಬಿ ಹೂವಿಗೆ ಕೊಡುವಷ್ಷು ಮಹತ್ವ ಬೇರೊಂದಕ್ಕಿಲ್ಲ. ಅದೆಷ್ಟೇ  ಹೂವುಗಳು ಒಂದೇ ಕಡೆಗೆ ಬೆಳೆದಿದ್ದರೂ ನಮ್ಮನ್ನು ಆಕರ್ಷಿಸುವುದು ಗುಲಾಬಿಯೇ. ಗುಲಾಬಿಯಲ್ಲಿ ಹಲವಾರು ಬಣ್ಣದ ಹೂವುಗಳಿವೆ ಕೆಂಪು, ಹಳದಿ, ಕೇಸರಿ, ಬಿಳಿ ಹೀಗೆ ಹಲವಾರು ಬಣ್ಣಗಳಿಂದ ಈ ಹೂವು ಕಣ್ಮನ ಸೆಳೆಯುತ್ತದೆ.  ಗುಲಾಬಿ ಹೂ ಪೂಜೆ ಮತ್ತು ಅಲಂಕಾರಕ್ಕೆ ಅಷ್ಷೇ ಅಲ್ಲ ,ಈ ಹೂವನ್ನು ಪ್ರೀತಿಯ ಸಂಕೇತ ಎಂದು ಹೇಳುತ್ತಾರೆ. ಹಾಗಾಗಿ ಪ್ರೇಮಿಗಳ ದಿನದಂದು…

Read more
ಸಾವಯವ ಗೊಬ್ಬರ -Organic manure

ಸಾವಯವ ಗೊಬ್ಬರದ ಜೊತೆಗೆ ರಸ ಗೊಬ್ಬರ-ಫಲಿತಾಂಶ.

ನಮ್ಮಲ್ಲಿ ರೈತರಿಗೆ ಅತೀ ದೊಡ್ಡ ಸಂದೇಹವಾಗಿ ಕಾಡುತ್ತಿರುವುದು, ಸಾವಯವ ಗೊಬ್ಬರ ಬಳಸಿದಾಗ ರಸ ಗೊಬ್ಬರ ಬಳಸಿದರೆ ಮಣ್ಣು ಹಾಳಾದೀತೇ? ಮಣ್ಣಿನಲ್ಲಿ ಎರೆಹುಳು ಸಾಯಬಹುದೇ ಎಂಬಿತ್ಯಾದಿಗಳು.  ಅದಕ್ಕೆ ಪೂರಕವಾಗಿ ಕೆಲವು ಕೆಲವು ಪಂಥಗಳು ಜನರ ಸಂದೇಹಗಳಿಗೆ ತುಪ್ಪ ಸುರಿದು ಹೆಚ್ಚು ಪ್ರಖರವಾಗಿ ಉರಿಯುವಂತೆ ಮಾಡುತ್ತಿವೆ.  ವಾಸ್ತವಿಕವಾಗಿ ಸಾವಯವ  ಗೊಬ್ಬರ ಅಥವಾ ಸಾವಯವ ತ್ಯಾಜ್ಯಗಳ ಜೊತೆಗೆ ರಸ ಗೊಬ್ಬರ  ಬಳಸಿದರೆ ಏನಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಯಾವುದೇ ರಸ ಗೊಬ್ಬರ ಇರಬಹುದು. ಅದು ಸಸ್ಯಗಳಿಗೆ ಲಭ್ಯವಾಗಬೇಕಾದರೆ ಮಣ್ಣಿನಲ್ಲಿ ಇರುವ…

Read more
ಜೀವಾಮೃತ ಸಾರ

“ಜೀವಾಮೃತ” ಇದರಲ್ಲಿ ಏನಿರುತ್ತದೆ ಗೊತ್ತೇ?

ಜೀವಾಮೃತ ಎಂಬುದು  ಸುಮಾರು 10-15 ವರ್ಷಗಳಿಂದೀಚೆಗೆ ನಮಗೆ ಪರಿಚಯವಾದ  ಹೆಸರು. ಅದಕ್ಕೂ ಮುಂಚೆ ಒಬ್ಬರು ಇಂಥಹ ತಯಾರಿಕೆಯನ್ನು ಅಮೃತ ಪಾನಿ ಎಂದು ಕರೆದಿದ್ದರು. ಈಗ ಮತ್ತೆ ಗೋ ಕೃಪಾಮೃತ ಎಂಬ  ಉತ್ಪನ್ನ ಹೆಚ್ಚು ಸುದ್ದಿಯಲ್ಲಿದೆ. ಇವೆಲ್ಲವೂ ಜೈವಿಕವಾಗಿ ಮಣ್ಣನ್ನು ಶ್ರೀಮಂತಗೊಳಿಸಲು ಇರುವ ಬೆಳೆ ಪೋಷಕಗಳು. ಇದರಲ್ಲಿ ಏನು ಇದೆ ಎನ್ನುದಕ್ಕಿಂತ ಇದನ್ನು ಬಳಕೆ ಮಾಡಿದರೆ ಹಾನೀ ಏನೂ ಇಲ್ಲ ಎಂಬುದಂತೂ ಸತ್ಯವಾದದ್ದು. ಕೃಷಿ ಮಾಡುವ ಮಣ್ಣು ಜೈವಿಕವಾಗಿ ಸಂಪಧ್ಭರಿತವಾಗಿದ್ದರೆ  ಎಲ್ಲಾ ಕೃಷಿಯೂ ಸರಾಗ. ಯಾವುದೇ ಮಣ್ಣು ಜೈವಿಕತೆಯಿಂದ…

Read more
ಹಳ್ಳಿಯ ರೈತನಿಗೆ ಕೈ ಹಿಡಿದೀತೇ ನೇರ ಮಾರುಕಟ್ಟೆಯ ಪ್ರಯೋಜನ?

ಹಳ್ಳಿಯ ರೈತನಿಗೆ ಕೈ ಹಿಡಿದೀತೇ ನೇರ ಮಾರುಕಟ್ಟೆಯ ಪ್ರಯೋಜನ?

ಇದು ಟೀಕೆ ಅಲ್ಲ. ಅನಿಸಿಕೆ ಅಷ್ಟೇ. ರೈತರಿಗೆ ಅನುಕೂಲವಾಗುವುದಾದರೆ ಎಲ್ಲವೂ ಸ್ವಾಗತಾರ್ಹ.  ಒಮ್ಮೆ ನಮ್ಮ ಹಳ್ಳಿಯ ರೈತನ ಚಿತ್ರಣವನ್ನು ಯೋಚಿಸಿಕೊಳ್ಳಿ. ದೇಶದಲ್ಲಿ 70% ಕ್ಕೂ ಹೆಚ್ಚಿನವರು ಸಣ್ಣ ಮತ್ತು ಅತೀ ಸಣ್ಣ  ರೈತರು. ಹಾಗೆಯೇ ಇಷ್ಟೂ ಜನ ರೈತರೂ ಕಡಿಮೆ ವಿಧ್ಯಾವಂತರು. ಇವರಿಗೆ ನೇರ ಮಾರುಕಟ್ಟೆಯ ಅವಕಾಶವನ್ನು ಎಷ್ಟು ಜೀರ್ಣಿಸಿಕೊಳ್ಳಲು ಆದೀತೋ ಗೊತ್ತಿಲ್ಲ. ಆದರೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತದೆ ಸರಕಾರ. ನಾನು ಒಂದು ಕ್ವಿಂಟಾಲು ಹಣ್ಣು ಬೆಳೆದರೆ ಅದನ್ನು ಹೇಗಾದರೂ ಗ್ರಾಹಕರನ್ನು ಹುಡುಕಿ ಮಾರಾಟ ಮಾಡಬಹುದು….

Read more
pendal grown vegitable

ಕಡಿಮೆ ಖರ್ಚಿನಲ್ಲಿ ದಿಡೀರ್ ತರಕಾರಿ ಚಪ್ಪರ.

 ಬೇಸಿಗೆಯಲ್ಲಿ  ತರಕಾರಿ ಬೆಳೆದರೆ ಲಾಭವಿದೆ.  ಈ ಸಮಯದಲ್ಲಿ  ಮದುವೆ, ಗ್ರಹಪ್ರವೇಶ, ಜಾತ್ರೆ, ಮುಂತಾದ ಕಾರ್ಯಕ್ರಮಗಳು ಅಧಿಕ. ಬಳ್ಳಿ ತರಕಾರಿಗಳನ್ನು ಚಪ್ಪರ ಹಾಕಿ  ಬೆಳೆದರೆ ಗುಣಮಟ್ಟದ ತರಕಾರಿ ಸಿಗುತ್ತದೆ. ಸಾಂಪ್ರದಾಯಿಕ ಚಪ್ಪರ ಮಾಡುವ ವಿಧಾನ ಲಾಭದಾಯಕವಲ್ಲ. ಅದರ ಬದಲು ಚಪ್ಪರಕ್ಕಾಗಿಯೇ ಇರುವ ಬಲೆಗಳು ಅಥವಾ ಪ್ಯಾಕಿಂಗ್ ಹಗ್ಗ ಬಳಸಿದರೆ ಮರದ ಅಗತ್ಯ ತುಂಬಾ ಕಡಿಮೆ. ಬೇಸಿಗೆಯ ತರಕಾರಿ ಲಾಭದಾಯಕ: ಮಳೆಗಾಲಕ್ಕಿಂತ ಬೇಸಿಗೆ ಕಾಲದಲ್ಲಿ ಇಳುವರಿ ಹೆಚ್ಚು ಬರುತ್ತದೆ.  ಬೇಗ ಇಳುವರಿ ಬರುತ್ತದೆ. ಬಿಸಿಲು ಚೆನ್ನಾಗಿ ಇರುವ ಕಾರಣ ರೋಗ,…

Read more
Ginger yield

ಶುಂಠಿ – ಗಡ್ಡೆ ತೂಕ ಬರಲು ಸೂಕ್ತ ಬೇಸಾಯ ವಿಧಾನ.

ಶುಂಠಿಯ ಸಸ್ಯ ಬೆಳೆವಣಿಗೆಯ ಮೇಲೆ ಗಡ್ಡೆ ಬೆಳೆವಣಿಗೆ ಇರುತ್ತದೆ. ಎಳವೆಯಲ್ಲಿ ಸಸ್ಯ ಚೆನ್ನಾಗಿ ಬೆಳೆದರೆ ಗಡ್ಡೆ ದೊಡ್ಡದಾಗುತ್ತದೆ. ಇದು ಸಸ್ಯದ ಮೊಳಕೆಗಳ ಮೇಲೆ ಅವಲಂಭಿತವಾಗಿದೆ. ಹೆಚ್ಚು ಮೊಳಕೆಗಳು ಆರೋಗ್ಯಕರ ಸಸ್ಯಗಳಿದ್ದಾಗ ಗಡ್ಡೆ ದೊಡ್ಡದಾಗಲೇ ಬೇಕು. ಬರೇ ಸಸ್ಯ ಬೆಳೆವಣಿಗೆ ಮಾತ್ರವಲ್ಲ ಸಮತೋಲನದ ಬೆಳೆವಣಿಗೆ ಎಂಬುದು ಎಲ್ಲಕ್ಕಿಂತ ಮುಖ್ಯ. ಕೆಲವು ಮನುಷ್ಯ ಸುಮಾರು 40-45 ವರ್ಷದ ತನಕ ಕಡಿಮೆ ತೂಕದವರಾಗಿರುತ್ತಾರೆ. ನಂತರದ ವರ್ಷಗಳಲ್ಲಿ ಶರೀರದಲ್ಲಿ ಮಾಂಸ ಹೆಚ್ಚಾಗದಿದ್ದರೂ ತೂಕ ಹೆಚ್ಚಾಗುತ್ತಾರೆ. ಕಾರಣ ಅವರ ಎಲುಬುಗಳ ತೂಕ ಹೆಚ್ಚಾಗಿರುತ್ತದೆ. ಹಾಗೆಯೇ…

Read more

ತಜ್ಞರ ಮೌನ – ಭವಿಷ್ಯದಲ್ಲಿ ಅಪಾಯ ತರಬಹುದೇ?

ನಮ್ಮ ಪರಿಸರದಲ್ಲಿ ಇರುವ ಕಿಟಗಳಲ್ಲಿ 20% ಮಾತ್ರ ಹಾನಿಕರಕ ಕೀಟಗಳು. ಉಳಿದ 80% ಉಪಕಾರೀ ಕೀಟಗಳು ಎಂಬುದನ್ನು ಕೀಟಶಾಸ್ತ್ರ ಒಪ್ಪಿಕೊಳ್ಳುತ್ತದೆ. ಆದರೆ ಕೆಲವೊಂದು ವಿಚಾರದಲ್ಲಿ ಮಾತ್ರ ಮೌನವಾಗಿದೆ. ಕೀಟ ಶಾಸ್ತ್ರಜ್ಞರಿಗೆ ಮತ್ತು ಪರಿಸರ ಕಳಕಳಿ ಉಳ್ಳವರಿಗೆ ಕನಿಷ್ಟ ತಮ್ಮ ಅಭಿಪ್ರಾಯವನ್ನಾದರೂ ಬಹಿರಂಗವಾಗಿ ತಿಳಿಸುವ ಜವಾಬ್ಧಾರಿ ಇದೆ. ಅವರು ಮಾತಾಡಬೇಕು. ಆಗಲೇ ಈ ಸಮಸ್ಯೆ ಪರಿಹಾರ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಬಹಳ ಜಾಸ್ತಿಯಾಗತೊಡಗಿದೆ. ಕೀಟನಾಶಕ ಬಳಸದೆ ಕೃಷಿ ಮಾಡುತ್ತೇನೆ ಎಂಬುದರ ಹಿಂದಿನ ಸತ್ಯಾಸತ್ಯತೆ ದೇವರಿಗೆ ಮಾತ್ರ…

Read more
PM Narendra modi

ರೈತರ ಕಲ್ಯಾಣಕ್ಕೆ ಕೇಂದ್ರ ಸರಕಾರದ “ಕೃಷಿ ಸುಧಾರಣಾ ಬಿಲ್”

ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮಾರುಕಟ್ಟೆ ವ್ಯವಸ್ಥೆಗೆ ಭಾರೀ ಸರ್ಜರಿ ಬೇಕು ಎಂದು ಮನಗಂಡ ಕೇಂದ್ರ ಸರಕಾರ ಕಿಸಾನ್ ಬಿಲ್ 2020 ನ್ನು  ರಚಿಸಿ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಿ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಅಲ್ಲಿ ಅವರ ಅಂಕಿತ ಬಿದ್ದ ನಂತರ ಅದು ಜ್ಯಾರಿಗೆ ಬರಲಿದೆ. ಈ ಬಿಲ್ ಬಗ್ಗೆ ಜನ ಮನಬಂದಂತೆ ಮಾತಾಡುತ್ತಾರೆ. ಆದರೆ ಪ್ರಧಾನಿಗಳು ಅದರ ಬಗ್ಗೆ ಸ್ಪಷ್ಟಣೆಯನ್ನೂ ನೀಡಿದ್ದಾರೆ.  ಕೃಷಿ ಕ್ಷೇತ್ರದ ಸುಧಾರಣೆಗೆ ಕೆಲವು ಕಾನೂನಾತ್ಮಕ ಬದಲಾವಣೆ ಬೇಕೇ…

Read more
ಕಬ್ಬು ಸಸ್ಯ -sugarcane plants

ಕಬ್ಬು ಬೆಳೆಯಲ್ಲಿ ದಂಟು ಕೊರಕ ಕೀಟದ ನಿಯಂತ್ರಣ ಹೇಗೆ?

ಕಬ್ಬಿನ ಬೆಳೆ ಉಳಿದೆಲ್ಲಾ ವಾಣಿಜ್ಯ ಬೆಳೆಗಳಿಗಿಂತ ಸುಲಭದ ಬೆಳೆ.ಆದಾಗ್ಯೂ ಇದಕ್ಕೆ ಕೆಲವು ಕೀಟ ರೋಗ ಸಮಸ್ಯೆಗಳು ಇಲ್ಲದಿಲ್ಲ. ಬೇರು ಹುಳದಂತ ಸಮಸ್ಯೆ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಯಲೇ ಸಾಧ್ಯವಿಲ್ಲ ಎಂಬ ಮಟ್ಟಕ್ಕೆ ಬಂದರೆ, ಗಂಟು ಕೊರೆಯುವ ಹುಳವೂ (Internode borer) ಬಹುತೇಕ ಎಲ್ಲಾ ಕಡೆ ಇದೆ. ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಕರ್ನಾಟಕದ ಬಹುತೇಕ ಕಬ್ಬು ಬೆಳೆಯುವ ಭಾಗಗಳಲ್ಲಿ ಈ ಕೀಟದ ತೊಂದರೆ ಹೆಚ್ಚಾಗಿದ್ದು, ಗಂಟುಗಳು ಹತ್ತಿರವಾಗಿ(ಕಿರಿದಾಗಿ), ಗುಣಮಟ್ಟ ಕುಂಠಿತವಾಗಿ ಕಬ್ಬಿನ ರಿಕವರಿ ನಷ್ಟ…

Read more
ಅಲಸಂಡೆ ಬೆಳೆ

ರೋಗ- ಕೀಟಗಳ ಹಾನಿ ಕಡಿಮೆ ಮಾಡಲು ತರಕಾರಿ ಬೆಳೆಗೆ ಮಲ್ಚಿಂಗ್ ಶೀಟು ಹಾಕಿ.

ಇಂದು ನಾವು ಹೇರಳವಾಗಿ ತರಕಾರಿಗಳನ್ನು ಬೆಳೆದು ಬಳಸುತ್ತಿದ್ದರೆ, ಆ ಯಶಸ್ಸಿನ ಹಿಂದೆ ಮಲ್ಚಿಂಗ್ ಶೀಟು ಎಂಬ ತಂತ್ರಜ್ಞಾನದ ಕೊಡುಗೆ ಬಹಳ ಇದೆ. ಇದು ಇಲ್ಲವಾಗಿದ್ದರೆ ಬಹುಶಃ 25-30% ಬೆಳೆ ಕಡಿಮೆಯಾಗಿ, ರೈತರಿಗೆ ಲಾಭವೂ ಕಡಿಮೆಯಾಗುತ್ತಿತ್ತು. ಪ್ರತೀ ವರ್ಷವೂ ತರಕಾರಿ ಬೆಳೆಯುವರಿಗೆ ಒಂದಿಲ್ಲೊಂದು ತೊಂದರೆ.  ಬಾರೀ ಪ್ರಮಾಣದಲ್ಲಿ  ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರೊತ್ತಾಯವಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು…

Read more
error: Content is protected !!