ಹತ್ತಿ ಹಿಂಡಿಯಲ್ಲಿ ಶಿಲೀಂದ್ರ ಬೆಳೆದಿರುವುದು

ಮಾನವ ಮತ್ತು ಪಶುಗಳ ಅಸ್ವಾಸ್ತ್ಯಕ್ಕೆ ಕಾರಣವಾಗುವ ಆಹಾರ ವಸ್ತುಗಳು..

ನಾವು ಮತ್ತು ಪಶುಗಳಿಗೆ ತಿನ್ನಿಸುವ ಆಹಾರದಲ್ಲಿ ಕೆಲವೊಮ್ಮೆ ಶಿಲೀಂದ್ರ ಬೆಳೆದಿರುತ್ತದೆ. ಇದು ಒಂದು ವಿಷ.ಇದನ್ನು ಅಪ್ಲೋಟಾಕ್ಸಿನ್ ಎನ್ನುತ್ತಾರೆ. ಅಫ್ಲಾಟಾಕ್ಸಿನ್  ಎಂಬುದು ಒಂದು ವಿಧದ ಶಿಲೀಂದ್ರ ಉತ್ಪತ್ತಿ ಮಾಡುವ ವಿಷಕಾರಿ ಅಂಶ.  ನಾವು ಬಳಕೆ ಮಾಡುವ ಬೇರೆ ಬೇರೆ ವಸ್ತುಗಳ ಮೂಲಕ  ಅದು ನಮ್ಮ ಶರೀರವನ್ನು ಪ್ರವೇಶಿಸಿ ನಮ್ಮಲ್ಲಿ  ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.  ಈ ಶಿಲೀಂದ್ರದ  ಹೆಸರು : Aspergillus flavus.ಮತ್ತು  Aspergillus Parasiticus ಇದು ಬೀಜಾಣು ರೂಪದಲ್ಲಿ ಮನುಷ್ಯ  ಹಾಗೂ ಪ್ರಾಣಿಗಳ ಶರೀರಕ್ಕೆ ಸೇರಿದಾಗ, ಅದರ ವಿಷ ಜೀವ ಕೋಶಗಳ…

Read more
ಏಲಕ್ಕಿ ಬೆಳೆ

ಏಲಕ್ಕಿ ಬೆಳೆಯುತ್ತೀರಾ – ಇಲ್ಲಿದೆ ತಳಿಗಳ ಬಗ್ಗೆ ಮಾಹಿತಿ.

ಮಲೆನಾಡು, ಅರೆಮಲೆನಾಡಿನ ರೈತರು ಅಡಿಕೆ ತೋಟದಲ್ಲಿ ಲಾಭದಾಯಕ ಮಿಶ್ರ ಬೆಳೆಯ ಹುಡುಕಾಟದಲ್ಲಿದ್ದಾರೆ. ಇವರಿಗೆ ಯಾವ ತಳಿಯನ್ನು ಬೆಳೆದರ ಉತ್ತಮ , ಯಾವ ಯಾವ ಉತ್ತಮ ತಳಿಗಳಿವೆ ಎಂಬ ಬಗ್ಗೆ ಮಡಿಕೇರಿಯ ಅಪ್ಪಂಗಳದ ಸಾಂಬಾರ  ಬೆಳೆಗಳ ಪ್ರಾದೇಶಿಕ ಸಂಶೋಧನಾ ಸಂಸ್ಥೆಯ  ಮೂಲಕ ಈ ಮಾಹಿತಿ ಲಭ್ಯವಿದೆ. ಬೆಳೆಯುವ ಪ್ರದೇಶ, ಪುಷ್ಪಗೊಚ್ಚಲುಗಳ ಸ್ವಭಾವ, ಗಿಡಗಳ ಗಾತ್ರ ಮತ್ತು ಇತರ ಗುಣಗಳನ್ನು ನೋಡಿ ಏಲಕ್ಕಿಯ ಪ್ರಭೇಧಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಮಲಬಾರ್ ಪ್ರಭೇದದ ಗಿಡಗಳ ಕೊತ್ತುಗಳು ನೆಲದ ಮೇಲೆ ಹರಡಿರುತ್ತವೆ. ಈ…

Read more
ಅನನಾಸು ತೋಟ

ಅನನಾಸು – ಹಣ್ಣಿನ ಬೆಳೆಗಳಲ್ಲಿ ಇದು ಸುಲಭದ್ದು.

ಪರಂಗಿ ಹಣ್ಣು ಎಂಬ ಹೆಸರಿನ ಅನನಾಸು ಕರಾವಳಿ ಒಳನಾಡು ಪ್ರದೇಶದ ಬೌಗೋಳಿಕತೆಗೆ ಹೊಂದಿಕೆಯಾಗುವ ಹಣ್ಣಿನ ಬೆಳೆ. ಜನ ಪರಂಗಿ ಹಣ್ಣು ಬೆಳೆಯಲು ರೈತರು ಅದುಹಾಕುತ್ತಾರೆ , ಇದು ಹಾಕುತ್ತಾರೆ, ರಾಸಾಯನಿಕ ಎಂಬಿತ್ಯಾದಿ ಹೇಳುತ್ತಾರೆ. ಇದೆಲ್ಲಾ ಸುಳ್ಳು. ಈ ಗಿಡದ ಎಲ್ಲಾ ಶರೀರ ಪ್ರಕೃತಿ ಬರ ಸಹಿಷ್ಣು. ಇದಕ್ಕೆ ಬೇರೆ ಬೆಳೆಗೆ ಗೊಬ್ಬರ ಕೊಟ್ಟಂತೆ ಕೊಡಲಿಕ್ಕೆ ಕಷ್ಟ.ಅಷ್ಟು ಪ್ರಮಾಣದಲ್ಲಿ ಗೊಬ್ಬರವೂ ಬೇಡ. ಅದಕ್ಕಾಗಿ ಬೆಳೆಯುವವರು ಸದಾ ಪೋಶಕಾಂಶಗಳನ್ನು ಕಡಿಮೆ ತೀರಾ ಕಡಿಮೆ ಸಾಂದ್ರತೆಯಲ್ಲಿ ಎಲೆಗಳಿಗೆ ಸಿಂಪಡಿಸುತ್ತಾರೆ. ಇದನ್ನೇ ದೂರದಿಂದ…

Read more
ಕೊಕ್ಕೋ ಕೋಡು

ಕೊಕ್ಕೋ ಬೆಳೆದರೆ ಹಸುರು ಸೊಪ್ಪಿಗೆ ಬರವಿಲ್ಲ.

ಇತ್ತೀಚಿನ ದಿನಗಳಲ್ಲಿ ನಮಗೆ ಹಿಂದಿನಂತೆ ತೋಟಕ್ಕೆ ಹಸಿ ಸೊಪ್ಪು ಸದೆ ಹಾಕಲು ಸಂಪನ್ಮೂಲಗಳಿಲ್ಲ. ಕಾಡು ಇಲ್ಲ. ತರುವ ಮಜೂರಿಯೂ ಅಧಿಕ. ಕೊಕ್ಕೋ ಬೆಳೆ ತೋಟದಲ್ಲಿದ್ದರೆ ವರ್ಷಕ್ಕೆ ಸಾಕಷ್ಟು ಹಸುರು ಸೊಪ್ಪು ದೊರೆಯುತ್ತದೆ. ಈ ಸೊಪ್ಪಿನಲ್ಲಿ ಪೋಷಕಾಂಶಗಳು ಹೆಚ್ಚು ಇರುತ್ತವೆ.  ರಾಸಾಯನಿಕ ಮೂಲದ ಸೂಕ್ಷ್ಮ ಪೋಷಕ, ಸುಣ್ಣ, ಮೆಗ್ನೀಶಿಯಂ ಬಳಸುವ ಖರ್ಚನ್ನು ಇದು ಉಳಿಸುತ್ತದೆ. ಹಸಿ ಸೊಪ್ಪು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಗೆ ಒಳ್ಳೆಯ ಆಹಾರ. ಅಡಿಕೆ ಮರಗಳ ಮಧ್ಯಂತರದಲ್ಲಿ ಕೊಕ್ಕೋ ಬೆಳೆದಾಗ  ಕೊಕ್ಕೋ ಸಸ್ಯವು ತನ್ನ ಪಾಲಿನ ಪೋಷಕಾಂಶವನ್ನು …

Read more
ಸಾಂಬಾರ ಬೆಳೆಗಳ ಸಂಶೊಧನಾ ಸಂಸ್ಥೆ ಅಪ್ಪಂಗಳ ಮಡಿಕೇರಿ

ನೀವು ಸಾಂಬಾರ ಬೆಳೆಗಾರರೇ? ಇಲ್ಲಿಗೆ ಒಮ್ಮೆ ಭೇಟಿ ಕೊಡಬಹುದು.

ಸಾಂಬಾರ ಬೆಳೆಗಳಾದ ಏಲಕ್ಕಿ, ಕರಿಮೆಣಸು ಅರಶಿನ, ಶುಂಠಿ ಮುಂತಾದ ಬೆಳೆ ಬೆಳೆಯುವ ರೈತರು ವೈಜ್ಞಾನಿಕ ಬೆಳೆ ಮಾಹಿತಿ, ತಳಿ ಮಾಹಿತಿ ಬಯಸುವುದೇ ಆದರೆ ಕರ್ನಾಟಕದ ಮಡಿಕೇರಿಯಲ್ಲಿರುವ ಪ್ರಾದೇಶಿಕ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಗೆ ಒಮ್ಮೆ ಭೇಟಿ ಕೊಡಿ. ಇಲ್ಲಿ ನಿಮಗೆ  ಬೇಕಾದ ಮಾಹಿತಿಗಳು ಲಭ್ಯವಿದೆ. ಮಡಿಕೇರಿಯ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರವನ್ನು 1961 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಯಿತು. ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು 1976 ರಲ್ಲಿ ಕಾಸರಗೋಡ್‍ನ ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಯಿತು….

Read more
ಗ್ರಾಮೀಣ ಪಶು ಸಂಗೋಪನೆ

ಪಶು ಸಂಗೋಪನೆಯಿಂದ -ಆರೋಗ್ಯ ಮತ್ತು ಗೊಬ್ಬರದ ಲಾಭ.

ಹಿಂದಿನಿಂದಲೂ  ಕೃಷಿ ಮಾಡುವವರು  ಹಸು ಸಾಕಾಣಿಕೆ ಮಾಡುತ್ತಿದ್ದರು. ಈಗಲೂ ಹೆಚ್ಚಿನ ಜನ ಕೃಷಿಗೆ ಗೊಬ್ಬರ ಬೇಕು ಎಂಬ ಉದ್ದೇಶಕ್ಕಾಗಿ ಹಸು ಸಕಾಣೆ ಮಾಡುತ್ತಾರೆ. ಕೆಲವು ಜನ ಹಸು ಸಾಕಣೆ ಇಲ್ಲದೆ ಕೃಷಿ ಮಾಡಬಹುದು ಎನ್ನುವ ವಾದದವರೂ ಇದ್ದಾರೆ. ಮಣ್ಣಿನ ಫಲವತ್ತೆತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಅಗತ್ಯ. ಮಿತವ್ಯಯದಲ್ಲಿ ಸಾವಯವ ಗೊಬ್ಬರ ಆಗುವುದಿದ್ದರೆ ಅದು ಹಸುವಿನ ತ್ಯಾಜ್ಯಗಳಿಂದ ಮಾತ್ರ. ಅಲ್ಲದೆ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕ ಆಹಾರಕ್ಕೂ ಹಸು ಸಾಕಾಣಿಕೆ ಅಗತ್ಯ. ಒಂದೇ ದಿನದಲ್ಲಿ ಗೊಬ್ಬರ ಆಗಬೇಕೇ,…

Read more
sugarcane crop

ಕಬ್ಬು ಬೆಳೆಯಲ್ಲಿ ಕೂಳೆ ಬೆಳೆ ನಿರ್ವಹಣೆ ಹೀಗೆ.

ಕೂಳೆ ಬೆಳೆ ಬೆಳೆದರ ಖರ್ಚು ತುಂಬಾ ಕಡಿಮೆಯಾಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಇಳುವರಿ ಚೆನ್ನಾಗಿಯೇ ಬರುತ್ತದೆ. ನಮ್ಮ ದೇಶದಲ್ಲಿ ಕೆಲವು ರೈತರು ಕೂಳೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದರೆ ಬಹಳ ಜನ ಕಡಿಮೆ ಇಳುವರಿ ಪಡೆಯುತ್ತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಕೂಳೆ ಬೆಳೆಯಲ್ಲಿ ಮೂಲ ಬೆಳೆಗಿಂತ ಹೆಚ್ಚು ಇಳುವರಿ ಪಡೆಯುತ್ತಾರೆ. ನಮಗೂ ಸರಿಯಾದ ಬೇಸಾಯ ಕ್ರ ಮ ಅನುಸರಿಸಿದರೆ 2-3 ಕೂಳೆ ಬೆಳೆಯನ್ನು ಬೆಳೆಸಲು ಸಾಧ್ಯವಿದೆ. ನಮ್ಮಲ್ಲಿ ಸಾಮಾನ್ಯವಾಗಿ ತುಂಬಾ ಸೋಮಾರಿಗಳು ಮಾತ್ರ ಕೂಳೆ…

Read more
organic manure

ಸಾವಯವ ಗೊಬ್ಬರಗಳನ್ನು ನೀವೇ ತಯಾರಿಸಿಕೊಳ್ಳಿ- ಅದೇ ಉತ್ತಮ

ಆತ್ಮ ನಿರ್ಭರ ವನ್ನು ನೀವು ಇಚ್ಚೆ ಪಡುವುದೇ ಆಗಿದ್ದರೆ, ನಿಮ್ಮ ಗೊಬ್ಬರದ ಅಗತ್ಯಗಳನ್ನು ನೀವೇ  ಮಾಡಿಕೊಳ್ಳಿ. ಆತ್ಮ ನಿರ್ಭರ ರೈತರಾಗಿ. ನೀವು ಗೊಬ್ಬರ ಮಾರಾಟಗಾರರನ್ನು ಪೋಷಿಸಬೇಕಾಗಿಲ್ಲ. ನಿಮ್ಮ ಶ್ರಮ, ನಿಮ್ಮ ಸಂಪಾದನೆ ಯಾವುದೋ ಕಂಪೆನಿಯನ್ನು, ಯಾವುದೋ ಗೊಬ್ಬರ ಮಾರಾಟ ಮಾಡಿ ಜೀವನ ನಡೆಸುವವನ ಏಳಿಗೆಗಾಗಿ ಇರುವುದಲ್ಲ. ಅದು ನಿಮ್ಮ ವೃತ್ತಿ ಕ್ಷೇತ್ರವನ್ನು ಸಧೃಢಪಡಿಸಲಿಕ್ಕೆ , ನಿಮ್ಮ ಏಳಿಗೆಗೆ ಇರುವಂತದ್ದು.  ಸಾವಯವ ಗೊಬ್ಬರ ಎಂದರೆ ಅದರಲ್ಲಿ ಯಾವ ಹೊಸ ತಾಂತ್ರಿಕತೆಯೂ ಇಲ್ಲ. ಇದನ್ನು ತಯಾರಿಸಿ ಕೊಡಲು ಯಾರ ನೆರವೂ…

Read more
ಅಡಿಕೆ ತೋಟದಲ್ಲಿ ಏಲಕ್ಕಿ

ಅಡಿಕೆ ತೋಟದಲ್ಲಿ ಏಲಕ್ಕಿ ಬೆಳೆದರೆ ಲಾಭವಿದೆ.

ಸಾಂಬಾರ ಪದಾರ್ಥಗಳಲ್ಲಿ ರಾಣಿಯ ಸ್ಥಾನವನ್ನು ಅಲಂಕರಿಸಿದ ಬೆಳೆ ಅಂದರೆ ಏಲಕ್ಕಿ. ಅಂತರ ರಾಷ್ಟ್ರೀಯ  ಮಾರುಕಟ್ಟೆ ಜೊತೆಗೆ ದೇಶೀಯ ಮಾರುಕಟ್ಟೆ ಎರಡರಲ್ಲೂ ಯಾವಾಗಲೂ ಬೇಡಿಕೆ ಪಡೆದ ಬೆಳೆ. ಇದು ಮಲೆನಾಡು, ಅರೆಮಲೆನಾಡಿನ ಅಡಿಕೆ ತೋಟಗಳಲ್ಲಿ ಚೆನ್ನಾಗಿ ಬೆಳೆಯಬಲ್ಲುದು. ಅಡಿಯಷ್ಟೇ ಆದಾಯವನ್ನೂ ಕೊಡಬಲ್ಲುದು. ವಿಶಿಷ್ಟ ವಾತಾವರಣ ಬೆಳೆ: ಪಶ್ಛಿಮ ಘಟ್ಟದ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಪರಿಮಳದ ಕಾಳನ್ನು ಬಿಡುತ್ತಿದ್ದ  ಸಸ್ಯವಾಗಿದ್ದ ಈ ಏಲಕ್ಕಿ, ಈಗ ರೈತರ ಹೊಲದಲ್ಲಿ  ಬೆಳೆಸಲ್ಪಡುತ್ತಿದೆ. ವನಿಲ್ಲಾ ಎಂಬ ಸಾಂಬಾರ ಪದಾರ್ಥದ ನಂತರ ಇದಕ್ಕೇ…

Read more
Local cow hallikar- ಕರ್ನಾಟಕದ ಸ್ಥಳಿಯ ತಳಿ ಹಳ್ಲಿ ಕಾರ್

ದೇಸೀಹಸು- ಪೌಷ್ಟಿಕ ಹಾಲಿನ ಖನಿ

ನಾವು ಹಾಲು ಕರೆಯುವಾಗ ಅದಕ್ಕೆ ಒಂದು ಸುವಾಸನೆ ಇರಬೇಕು. ಹಾಲು ಹಿಂಡಲು ಹೋಗುವಾಗ ವಾಸನೆ  ಉಂಟೇ  ಆ ಹಾಲೂ ವಾಸನೆಯದ್ದು. ಸ್ಥಳೀಯ ಹಸುವಿನ ಹಾಲು  ಹಿಂಡುವಾಗ ಒಂದು ಪರಿಮಳ ಇದೆ. ಯಾವ ಅಡ್ಡ ವಾಸನೆಯೂ  ಇಲ್ಲ. ಇದರ ರುಚಿ ಬಲ್ಲವನೇ ಬಲ್ಲ. ಮಕ್ಕಳಿಂದ ಹಿಡಿದು ವೃದ್ದಾಪ್ಯದಲ್ಲಿಯು ಅತ್ಯವಶ್ಯಕವಾಗಿ ಬಳಸುವ ಹಾಗು ಬಳಸಲೇಬೇಕಾದ ಆಹಾರ ಎಂದರೆ “ಹಾಲು ಹಾಗು ಹಾಲಿನಿಂದ ತಯಾರಿಸಿದ ಇತರೆ ಪದಾರ್ಥಗಳು”. ಹಾಲು ಒಂದು ಪರಿಪೂರ್ಣ  ಆಹಾರವಾಗಿದ್ದು ಅದರಲ್ಲಿರುವ ಪೋಷಕಾಂಶಗಳು ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ…

Read more
error: Content is protected !!