krushiabhivruddi

A village towards economic empowerment

A village towards economic empowerment

This small village provides permanent employment and gives economic empowerment through an arecanut dehusking unit. It is called “Adike Kana”. Its story is very impressive and interesting. What is special about this unit? Where it is located and what are the advantages of this type of unit? We can see here. About the KANA, or unit:…

Read more
‘ಅಡಿಕೆ ಕಣ’

‘ಅಡಿಕೆ ಕಣ’ ಬೆಳೆಗಾರರ ಪಾಲಿಗೆ ಈ ವ್ಯವಸ್ಥೆ ಇದ್ದರೆ ನಿಶ್ಚಿಂತೆ.

ಅಡಿಕೆಗೆ ಬೆಲೆ ಚೆನ್ನಾಗಿದೆ, ಬೆಳೆಗಾರರು ಖುಷಿಯಾಗಿದ್ದಾರೆ ಎಂದೆಣಿಸದಿರಿ. ಬೆಲೆ ಹೆಚ್ಚಾದಂತೆ ಅದರ ಉತ್ಪಾದನಾ ವೆಚ್ಚವೂ ಹೆಚ್ಚಳವಾಗುತ್ತದೆ. ಕೆಲಸದವರ ಸಂಬಳ ವರ್ಷಕ್ಕೆ 10% ದಂತೆ ಹೆಚ್ಚಳವಾಗುತ್ತದೆ. ಬೆಳೆ ಬಂದರೆ ಕೊಯ್ಯುವ ಸಮಸ್ಯೆ. ಕೊಯಿಲು ಮುಗಿದ ಮೇಲೆ ಸುಲಿಯುವ ಸಮಸ್ಯೆ. ಎಲ್ಲಾ ಕೆಲಸಕ್ಕೂ ಹಣ ಕೊಟ್ಟರೂ ಮಾಡುವವರಿಲ್ಲದಿದ್ದರೆ ಏನು ಮಾಡುವುದು? ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾನ್ಲೆ ಊರಿನಲ್ಲಿ ಇಂತಹ ಸಮಸ್ಯೆಗೆ ಪರಿಹಾರ ಇದೆ. ಈ ಊರಿನ ಒಂದು ಪಂಗಡದ ಜನರೆಲ್ಲಾ ಒಟ್ಟು ಸೇರಿ ‘ಅಡಿಕೆ ಕಣ’ ಎಂಬ ವ್ಯವಸ್ಥೆಯನ್ನು…

Read more
ಬೋರ್ಡೋ ದ್ರಾವಣ ಸಿಂಪರಣೆ

ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ. ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ. ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ…

Read more
ಬದನೆಯ ಕಾಯಿ ಕೊಳೆತ

ಬದನೆಯ ಕಾಯಿಗಳು ಯಾಕೆ ಕೊಳೆಯುತ್ತವೆ.

ಬದನೆ  ಪ್ರಮುಖ ತರಕಾರಿ ಬೆಳೆಯಾಗಿದ್ದು, ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಇದನ್ನು ಬೆಳೆಸುತ್ತಾರೆ. ಹೆಚ್ಚಿನ ಕೃಷಿಕರು ಅಧಿಕ ಬೇಡಿಕೆ –ಬೆಲೆ ಕಾರಣಕ್ಕೆ ನಾಟಿ ತಳಿಯನ್ನೇ ಬೆಳೆಸುತ್ತಿದ್ದು, ಇತ್ತೀಚಿಗಿನ ಬೇಸಾಯ ಕ್ರಮ, ಹವಾಮಾನದಿಂದಾಗಿ ಬೆಳೆಗೆ ಸೊರಗು ರೋಗದ ಬಾಧೆ ಅಧಿಕವಾಗಿದೆ. ಇದರಿಂದ ಕಾಯಿ ಕೊಳೆಯುವಿಕೆ ಹಚ್ಚಾಗುತ್ತದೆ. ಹೆಚ್ಚಿನ ಬೆಳೆಗಾರರು ಸಣ್ಣ  ಮತ್ತು ಅತೀ ಸಣ್ಣ ಬೆಳೆಗಾರರಾಗಿದ್ದು ಇದು ರೋಗವೋ – ಕೀಟವೂ ಎಂಬುದರ ಜ್ಞಾನ ಹೊಂದಿರುವುದಿಲ್ಲ.   ಸಮೀಪದ  ಗೊಬ್ಬರ– ಕೀಟನಾಶಕ ಮಾರಾಟ ಅಂಗಡಿಯವರ ಸಲಹೆಯ ಮೇರೆಗೆ  ಅದಕ್ಕೆ ಉಪಚಾರ …

Read more
ಮರ ಹಾವಸೆ

ಈ ಸಸ್ಯಗಳಲ್ಲಿದೆ ಉತ್ತಮ ಪೋಷಕಾಂಶ.

ನಮ್ಮ ಸುತ್ತಮುತ್ತ ಅದೆಷ್ಟೋ  ವೈವಿಧ್ಯಮಯ ಸಸ್ಯಗಳು ಇವೆ. ಇವುಗಳ ಬಗ್ಗೆ ನಮಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಕೆಲವು ತಿಳಿದವರು ಇದನ್ನು ಬಳಸುತ್ತಾರೆ. ಇಂತದ್ದರಲ್ಲಿ ಒಂದು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಒಂದು ಸಸ್ಯ ವರ್ಗ ಮೋಸ್ (moss) ಅಥವಾ ಮರ ಹಾವಸೆ. ಇದು Bryophytes ಪ್ರಬೇಧಕ್ಕೆ ಸೇರಿದ ಸಸ್ಯ ವರ್ಗ.  ಇದು ಮರ ಹಾವಸೆ: ಮರ ಹಾವಸೆಯಲ್ಲಿ ನೂರಾರು (129) ವಿಧಗಳಿವೆ. ಇವುಗಳಲ್ಲಿ ಕೆಲವು ಮಳೆ ಕಾಡುಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಪಶ್ಚಿಮ ಘಟ್ಟ…

Read more
ಚಾಲಿ ಅಸ್ಥಿರ

ಅಡಿಕೆ ಮಾರುಕಟ್ಟೆಯ ಸ್ಥಿತಿ- ಕೆಂಪಡಿಕೆ ಅಬಾಧಿತ- ಚಾಲಿ ಅಸ್ಥಿರ.

ಕೆಂಪಡಿಕೆ ಮಾರುಕಟ್ಟೆಯಲ್ಲಿ ದೊಡ್ದ ಸಂಚಲನ ಇಲ್ಲ. ಆದರೆ ಚಾಲಿ ಮಾತ್ರ ಬಹಳ ಅಸ್ಥಿರತೆಯಲ್ಲಿ ಮುನ್ನಡೆಯುತ್ತಿದೆ. ಖಾಸಗಿಯವರ ದರ ಸಾಂಸ್ಥಿಕ ಮಾರುಕಟ್ಟೆಗಿಂತ ಕಡಿಮೆಯಾಗಿದೆ. ಸಾಂಸ್ಥಿಕ ಮಾರುಕಟ್ಟೆಯಲ್ಲಿ  ಪ್ರಕಟಣೆಯ ದರಕ್ಕೂ ಖರೀದಿ ದರಕ್ಕೂ  ತುಂಬಾ ವ್ಯತ್ಯಾಸ ಇದೆ. ಗುಣಮಟ್ಟಕ್ಕೆ ಹೆಚ್ಚಿನ ಪ್ರಾತಿನಿಧ್ಯ ಬಂದಿದೆ. ಗುಣಮಟ್ಟದ ಅಡಿಕೆಗೆ ಮಾತ್ರ  ಗರಿಷ್ಟ ದರ ಇದೆ. ಖಾಸಗಿಯವರ ನಿರುತ್ಸಾಹ ಚಾಲಿ ಅಡಿಕೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ವಲ್ಪ ಹಿಂದೆ ಬರುವಂತೆ ಮಾಡುತ್ತದೆಯೋ ಎಂಬ ಅನುಮಾನ ಉಂಟಾಗಿದೆ. ವಿದೇಶಗಳಿಂದ ಸರಕಾರದ ಅನುಮತಿಯ ಮೇರೆಗೆ ಅಡಿಕೆ ಆಮದಾಗುತ್ತಿದೆ ಎಂಬ…

Read more
ತೆಂಗಿನ ಮರಗಳ ಶಿರ ಸ್ವಚ್ಚತೆ

ತೆಂಗಿನ ಮರಗಳ ಶಿರ ಭಾಗ ಸ್ವಚ್ಚತೆ ಮತ್ತು ಇಳುವರಿ

ಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ. ತೆಂಗಿನ ಮರದ ಶಿರ ಬಾಗವನ್ನು  ಸ್ವಚ್ಚ ಮಾಡುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದಿರುವ ನಿರ್ವಹಣೆಗಳಲ್ಲಿ ಒಂದು. ನಮ್ಮ ಹಿರಿಯರು ವರ್ಷಕ್ಕೊಮ್ಮೆ ಶಿರಭಾಗವನ್ನು ಪೂರ್ಣ ಸ್ವಚ್ಚ ಮಾಡುತ್ತಿದ್ದರು….

Read more
ಅಡಿಕೆ ಸಸಿ ನೆಡುವ ಕ್ರಮ

ಅಡಿಕೆ ಸಸಿ ನೆಡುವವರು ಗಮನಿಸಿ- ಹೇಗೆ ನೆಡಬೇಕು- ಹೇಗೆ ರಕ್ಷಿಸಬೇಕು?

ಅಡಿಕೆ ಸಸ್ಯ ಏಕದಳ ಸಸ್ಯವಾಗಿದ್ದು, ಇದಕ್ಕೆ ತಾಯಿ ಬೇರು ಇಲ್ಲ. ಕವಲು ಬೇರುಗಳಿರುವ ಏಕದಳ ಸಸ್ಯದ, ಬೇರಿನ ಗುಣ ಮೇಲು ಭಾಗದಲ್ಲಿ ಪಸರಿಸುತ್ತಾ  ಬೆಳೆಯುವುದಾಗಿರುತ್ತದೆ. ಮೊದಲಾಗಿ ಎಲ್ಲಾ ಅಡಿಕೆ ಬೆಳೆಸುವ ರೈತರು ಸಸ್ಯ ಬೆಳವಣಿಗೆಯ ಕ್ರಮವನ್ನು  ತಿಳಿದು, ಅದಕ್ಕನುಗುಣವಾದ ಬೇಸಾಯ ಕ್ರಮವನ್ನು ಅನುಸರಿಸಬೇಕು. ಅಡಿಕೆ ಸಸಿ ನೆಡುವ ಹೊಂಡ ಹೇಗಿರಬೇಕು, ಹೇಗೆ ನೆಡಬೇಕು- ಹೇಗೆ ರಕ್ಷಿಸಬೇಕು? ಎಂಬುದರ ಫೂರ್ತಿ ಮಾಹಿತಿ ಇಲ್ಲಿದೆ. ಎಳವೆಯಲ್ಲಿ ಒಂದು ಗಿಡವನ್ನು  ಸರಿಯಾಗಿ ಪೋಷಣೆ ಮಾಡಿದರೆ ಮಾತ್ರ ಅದರ ಮುಂದಿನ ಬೆಳವಣಿಗೆಗೆ ಅಡಿಪಾಯ…

Read more
ಕೆಂಪಡಿಕೆ ಮಾಡಲು ಹೊಂದಿಕೆಯಾಗುವ ಹೊಸ ತಳಿ ಮಧುರ ಮಂಗಳ

ಕೆಂಪಡಿಕೆ ಮಾಡಲು ಸೂಕ್ತವಾದ ವಿವಿಧ ತಳಿಗಳು.

ಅಡಿಕೆ ಬೆಳೆಯುವ ಕೆಲವು ಪ್ರದೇಶಗಳಲ್ಲಿ ಬೇಯಿಸಿ ಕೆಂಪಡಿಕೆ ಮಾಡುವುದು ಅಲ್ಲಿನ ಪರಂಪರಾಗತ ಕ್ರಮ. ಬೇಯಿಸಲು ಅದಕ್ಕೆಂದೇ ಸೂಕ್ತವಾದ ತಳಿಗಳನ್ನು ಮಾತ್ರ ಬೆಳೆಸಬೇಕು. ಕೆಂಪಡಿಕೆ  ಮಾಡಲು ಹೊಂದುವ ಅಡಿಕೆ ಬಿಸಿಲಿನಲ್ಲಿ ಒಣಗಿಸಿ ಮಾಡುವ ಚಾಲಿ ಅಡಿಕೆಗೆ ಸೂಕ್ತವಲ್ಲ. ಚಾಲಿ ಮಾಡುವ ಅಡಿಕೆ ಕೆಂಪಡಿಕೆ ಮಾಡಲೂ ಸೂಕ್ತವಲ್ಲ. ಆಯಾಯಾ ಪ್ರದೇಶಕ್ಕೆ ಹೊಂದಿಕೆಯಾಗುವ ರೂಡಿಯ ತಳಿಗಳನ್ನು ಬೆಳೆಸುವುದು ಎಲ್ಲದಕ್ಕಿಂತ ಉತ್ತಮ. ಕರಾವಳಿಯ ಪ್ರದೇಶವನ್ನು  ಹೊರತಾಗಿಸಿ ರಾಜ್ಯದ ಉಳಿದ 6  ಜಿಲ್ಲೆಗಳಲ್ಲಿ ಅಡಿಕೆಯನ್ನು ಬೇಯಿಸುತ್ತಾರೆ. ಇದನ್ನು ಕೆಂಪಡಿಕೆ ಎನ್ನುತ್ತಾರೆ. ಈ ಉದ್ದೇಶಕ್ಕೆ  ಎಲ್ಲಾ…

Read more
'ಪೂರ್ವ ಶಿಷ್ಟ ಪದ್ದತಿ'ಗಳನ್ನು ಪಾಲಿಸಿದ ಕೃಷಿ

ಮರೆಯಾಗುತ್ತಿದೆ ಕೃಷಿ ಕ್ಷೇತ್ರದ ‘ಪೂರ್ವ ಶಿಷ್ಟ ಪದ್ದತಿ’ಗಳು.

ಪೂರ್ವ ಶಿಷ್ಟ ಪದ್ದತಿ (Customs and Usages) ಎಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆ. ಇದು  ಕಾನೂನಾತ್ಮಕವಾಗಿಲ್ಲದಿದ್ದರೂ ಇದನ್ನು ಕಾನೂನು ರಕ್ಷಕರು ಅಥವಾ ನ್ಯಾಯಾಲಯ ತಳ್ಳಿ ಹಾಕುವಂತಿಲ್ಲ. ಪೂರ್ವ ಪದ್ದತಿಗಳನ್ನು ಮೀರಿ ಕಾನೂನು ಅಲ್ಲ ಎಂಬುದನ್ನು ಸರ್ವೋಚ್ಚ ನ್ಯಾಯಾಯಲವೂ ಒಪ್ಪಿಕೊಳ್ಳುತ್ತದೆ. ಇವು ಬ್ರಿಟೀಷ್ ಸರಕಾರ ವ್ಯವಸ್ಥೆಯಲ್ಲಿ ಗವರ್ನರ್ ಜನರಲ್ ಗಳು ಕೊಡುತ್ತಿದ್ದ ತೀರ್ಮಾನ. ಇದು ಎಲ್ಲರೂ ಒಪ್ಪಿರುವ ನ್ಯಾಯಸಮ್ಮತವಾದ ಪದ್ದತಿ. ಅನಾದಿ ಕಾಲದಿಂದಲೂ ಇದು ಚಾಲ್ತಿಯಲ್ಲಿತ್ತು. ಇದನ್ನು ಪ್ರತೀಯೊಬ್ಬ ಕೃಷಿಕನೂ ಅನುಸರಿಸಿದ್ದೇ ಆದರೆ ಪರಸ್ಪರ ಜಗಳ, ತಕರಾರು…

Read more
error: Content is protected !!