krushiabhivruddi

ಪ್ರೂನಿಂಗ್ ಮಾಡಿದ ಅಡಿಕೆ ಸಸ್ಯ

ಪ್ರೂನಿಂಗ್ ಮಾಡಿ  ಅಡಿಕೆ ಸಸ್ಯ ಬೆಳವಣಿಗೆ  ಹೆಚ್ಚಿಸಿ.

ಸಸ್ಯಗಳಲ್ಲಿ ಹಿತಮಿತವಾಗಿ ಎಲೆ ಗೆಲ್ಲು ಕಡಿದರೆ ಮತ್ತೆ ಬರುವ ಹೊಸ ಚಿಗುರುಗಳು ಸಧೃಢವಾಗಿ ಬರುತ್ತವೆ. ಏಕದಳ ಸಸ್ಯಗಳ ಗೆಲ್ಲು ಕಡಿದರೆ  ನಿರಾಯಾಸವಾಗಿ ಅದು ಚಿಗುರಿ ಬದುಕಿಕೊಳ್ಳುತ್ತದೆ. ಹಾಗೆಂದು ದ್ವಿದಳ ಸಸ್ಯಗಳಲ್ಲಿ ಎಲ್ಲಾ ಎಲೆ ಕಡಿಯುವ ಕ್ರಮ ಇಲ್ಲ. ಅದನ್ನು ಹಿತ ಮಿತವಾಗಿ ಸ್ವಲ್ಪ ಪ್ರೂನಿಂಗ್ ಮಾಡಿ ಬೆಳವಣಿಗೆಗೆ ಬೂಸ್ಟ್ ಕೊಡಬಹುದು. ಅಡಿಕೆ ಸಸಿಗಳಲ್ಲಿ ಒಂದು ಎರಡು ವರ್ಷ ಪ್ರಾಯದಲ್ಲಿ  ಬೆಳವಣಿಗೆ ಹೆಚ್ಚಿಸಲು ಕೆಳಭಾಗದ ಎರಡು ಎಲೆಯನ್ನು ಅರ್ಧ ದಷ್ಟು ತುಂಡು ಮಾಡಿದರೆ ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಅಡಿಕೆ…

Read more
ಹಳೆ ಆಡಿಕೆ

ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ರೂ.100 ಯಾಕೆ?

ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.25 ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ  ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವ ವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ 100 ರೂ. ಹೆಚ್ಚು ಸಿಗುತ್ತದೆ. ಈ ತನಕ ಹಳೆ ಅಡಿಕೆಗೂ ಹೊಸ ಅಡಿಕೆಗೂ ವ್ಯತ್ಯಾಸ ರೂ. 30-40 ಇರುತ್ತಿತ್ತು.  ಆದರೆ…

Read more
ಪ್ರಪಂಚದಲ್ಲೇ ಅತೀ ಉತ್ಕೃಷ್ಟ ಸಾಗುವಾನಿ ತಳಿ

ಪ್ರಪಂಚದಲ್ಲೇ ಅತೀ ಉತ್ಕೃಷ್ಟ ಸಾಗುವಾನಿ ತಳಿ ಇದು.

ಕೆಲವೊಂದು ಮರಮಟ್ಟುಗಳು ಅವುಗಳ ವಂಶ ಗುಣಕ್ಕನುಗುಣವಾಗಿ ಚೆನ್ನಾಗಿ ಬೆಳೆಯುತ್ತದೆ. ಕೆಲವು ಎಷ್ಟೇ ಪಾಲನೆ ಪೋಷಣೆ  ಮಾಡಿದರೂ ಬೆಳವಣಿಗೆ ಕಡಿಮೆ. ತಳಿ ಆಯ್ಕೆ ಮಾಡುವಾಗ ಯಾವಾಗಲೂ ಉತ್ತಮ ವಂಶ ಗುಣದ ತಳಿಯನ್ನೇ ಆಯ್ಕೆ ಮಾಡುವುದು ಕ್ರಮ. ಕೇರಳದ ನಿಲಂಬೂರು ಎಂಬಲ್ಲಿ  ಇಂತಹ ವಂಶ ಗುಣದ ಸಾಗುವಾನಿ ತಳಿಯನ್ನು  ಬ್ರಿಟೀಷರೇ ಆಯ್ಕೆ ಮಾಡಿದ್ದಾರೆ. ಸ್ವಾತಂತ್ರ್ಯಾ ನಂತರ ನಾವೂ ಅದನ್ನು ಮುಂದುವರಿಸಿದ್ದೇವೆ. ಪ್ರಪಂಚದಲ್ಲೇ ಅತ್ಯುತೃಷ್ಟ ಸಾಗುವಾನಿ ಎಂದು ಇದ್ದರೆ ಅದು ಯಾವುದೇ ಒಂದು ಸಸ್ಯ- ಪ್ರಾಣಿ ಅದರ ಉತ್ಕೃಷ್ಟ ಗುಣಮಟ್ಟಕ್ಕೆ ಅದರ…

Read more
ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ

ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ.

ಪ್ರತೀಯೊಬ್ಬ ಕೃಷಿಕರೂ ಒಂದಲ್ಲ ಒಂದು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಾರೆ. ಸಿಂಪಡಿಸುವವರು ಕೀಟನಾಶಕದಿಂದ ಆಗುವ ಯಾವುದೇ ಅನಾಹುತಗಳಿಗೆ ಮೊದಲ ಬಲಿಪಶುಗಳು. ಆದುದರಿಂದ ರೈತರೇ ಮೊದಲು ಜಾಗರೂಕತೆ ವಹಿಸಬೇಕು. ಕೀಟನಾಶದ ಬಳಕೆ ಪ್ರಮಾಣ, ಅದರ ಜೊತೆಗೆ ಕೊಟ್ಟಿರುವ ಹಸ್ತ ಪ್ರತಿ ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷತೆಯಿಂದ  ಬಳಸಬೇಕು. ರಾಸಾಯನಿಕ ಕೀಟ – ರೋಗ ನಾಶಕ ಗೊಬ್ಬರಗಳ ಬಗ್ಗೆ  ಸಮಾಜ ಅಪಸ್ವರ ಎತ್ತಲು ಕೃಷಿಕರಾದ ನಾವೂ ಕಾರಣರು. ನಮ್ಮ ಕೃಷಿ ಜ್ಞಾನದಲ್ಲಿ ಬೆಳೆ ಪೊಷಕ,ಸಂರಕ್ಷಕಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿಲ್ಲ….

Read more
ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ.

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ- ಚಾಲಿಗೆ ಮುಹೂರ್ತ ಕೂಡಿಲ್ಲ. ರಾಶಿ 50,000 ದಾಟಿದೆ.

ಕೆಂಪಡಿಕೆ ರಾಶಿಗೆ ಶಿರಸಿಯಲ್ಲಿ, ಹೊಸನಗರದಲ್ಲಿ ಇಂದು ಕ್ವಿಂಟಾಲಿಗೆ 50,000 ದಾಟಿದೆ. ಯಲ್ಲಾಪುರದಲ್ಲಿ 54,000 ದಾಟಿದೆ. ಇನ್ನೇನು ಕೆಲವೇ ವಾರಗಳಲ್ಲಿ ಇನ್ನೂ ಚೇತರಿಕೆ ಆಗುವ ಸಂಭವ ಇದೆ ಎನ್ನುತ್ತಾರೆ ಶಿವಮೊಗ್ಗದ ವರ್ತಕರೊಬ್ಬರು. ಚಾಲಿ ದರ ಮಾತ್ರ ಏರಿಲ್ಲ. ಆದರೆ ಮಾರುಕಟ್ಟೆಗೆ ಅಡಿಕೆ ಬಾರದ ಕಾರಣ ಏನಾಗುತ್ತದೆ ವ್ಯಾಪಾರಿ ತಂತ್ರ ಎಂಬುದನ್ನು ಕಾದು ನೋಡಬೇಕಾಗಿದೆ. ಚಾಲಿಗೂ ಬೇಡಿಕೆ ಇದೆ. ಕೆಂಪಡಿಕೆಗೂ ಬೇಡಿಕೆ ಇದೆ. ಆದರೆ ದರ ಏರಿಕೆಗೆ ಸೂಕ್ತ ಮುಹೂರ್ತ ಕೂಡಿ ಬರಬೇಕು. ಬಹಳ ಜನ ಈ ವರ್ಷ ಅಡಿಕೆಗೆ…

Read more
ಕಳೆ ಸೇವಂತಿಗೆ ಸಸ್ಯ

ಕಳೆ ಸೇವಂತಿಗೆ ಸಸ್ಯದ  ಸ್ವಾಭಾವಿಕ ನಿಯಂತ್ರಣ ಸಾಧ್ಯ.

ಯಾವುದೇ ಒಂದು ಸಸ್ಯ  ಶಾಶ್ವತವಾಗಿ ಉಳಿಯುವುದೇ ಇಲ್ಲ. ಸಸ್ಯಗಳನ್ನು  ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ 2 ತಿಂಗಳಲ್ಲಿ ಮತ್ತೆ ಬೆಳೆಯುತ್ತದೆ. ಕೈಯಿಂದ ಕಿತ್ತರೆ ಮತ್ತೆ ಒಂದು ವಾರದಲ್ಲಿ ಚಿಗುರುತ್ತದೆ. ಯಂತ್ರದಿಂದ ಕಿತ್ತರೆ ಸಹ ಹೀಗೆಯೇ. ಆದರೆ ಅನಾದಿ ಕಾಲದಿಂದಲೂ ಒಂದೊಂದು ಕಳೆಯಂತೆ ಬಾಧಿಸುವ ಸಸ್ಯ ಅಥವಾ ಹುಲ್ಲು ಸಸ್ಯ ಹುಟ್ಟಿ ಮೆರೆದು ತನ್ನಷ್ಟಕ್ಕೆ ಅಳಿದು ಮತ್ತೊಂದು ಬಂದು ಚಕ್ರ ಮುಂದುವರಿಯುತ್ತಲೇ ಇದೆ….

Read more
ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ

ಖರ್ಚು ಇಲ್ಲದೆ ನಿರಂತರ ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ. .

ಕೃಷಿಕರು ಬೆಳೆ ಬೆಳೆದು ಪಡೆಯುವ ಆದಾಯದಲ್ಲಿ  ಖರ್ಚು ಕಳೆದರೆ ನಿವ್ವಳ ಉಳಿಯುವುದು ಕೂಲಿ ಕೆಲಸದವರ ಆದಾಯಕ್ಕಿಂತ ಕಡಿಮೆ. ಅದಕ್ಕೇ ಬಹುತೇಕ ಕೃಷಿಕರು ಖರ್ಚು ವೆಚ್ಚಗಳನ್ನು ಬರೆದಿಡುವುದಿಲ್ಲ. ಸ್ವಲ್ಪ ಸ್ವಲ್ಪವಾದರೂ ಖರ್ಚು ಇಲ್ಲದೆ ಪಡೆಯಬಹುದಾದ ಬೆಳೆಗಳ ಬಗ್ಗೆ  ಕೃಷಿಕರು ಯೋಚಿಸಬೇಕಾಗಿದೆ. ಕೃಷಿಯೊಂದಿಗೆ ಬೆಲೆಬಾಳುವ ಮರಮಟ್ಟನ್ನು ಬೆಳೆಸಿದರೆ  ನಿವೃತ್ತಿಯ ಕಾಲದಲ್ಲಿ ಅದು ಒಂದು ಆಸ್ತಿಯಾಗಬಲ್ಲದು. ಕೆಲವು ವರ್ಷವೂ ವಾಣಿಜ್ಯ ಮಹತ್ವ ಉಳ್ಳ ಮರಮಟ್ಟು ಬೆಳೆದರೆ ಅದರಲ್ಲಿ ಬರುವ ಫಸಲು ವರ್ಷ ವರ್ಷವೂ ಆದಾಯಕೊಡುತ್ತದೆ. ಅಂತಹ ಮರಮಟ್ಟುಗಳಲ್ಲಿ ರಾಂ ಪತ್ರೆ, ಮುರುಗಲ,…

Read more
ಹಾಲು ಕರೆಯುವುದು

ದನಗಳು ಇನ್ನು ಹಾಲು ಕೊಡಲಾರವು!

ಕೆಲ ದಿನಗಳ ಹಿಂದೆ ಶ್ರೀ ರಮೇಶ್ ದೇಲಂಪಾಡಿಯವರು  ಅನಿಲ್ ಕುಮಾರ್ ಜಿ ಅವರ ಒಂದು ಪೋಸ್ಟ್ ಹಂಚಿಕೊಂಡಿದ್ದರು. ದನಗಳು ಹಾಲು ಕೊಡುವುದಿಲ್ಲ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಸುವ ಒಂದು ಅರ್ಥಗರ್ಭಿತ ಬರಹ. ಇದಕ್ಕೆ ಪೂರಕವಾಗಿ ಇಂದಿನ ಹಸು ಸಾಕಾಣೆ ಮತ್ತು ಅದನ್ನು ಮುಂದುವರಿಸುವ ಕಷ್ಟದ ಬಗ್ಗೆ ಇಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇವೆ. ಅನಾದಿ ಕಾಲದಿಂದಲೂ ಹಸು ಸಾಕುವುದು ಮಾನವನ ಒಂದು ಉಪಕಸುಬಾಗಿತ್ತು. ಹಸುಗಳನ್ನು ಸಾಕಿದರೆ ಮಾತ್ರ ಅದು ಉಳಿಯುತ್ತದೆ. ಇದು ಅನ್ಯರ ಆಶ್ರಯದಲ್ಲಿ ಬೆಳೆಯಬೇಕಾದ ಪ್ರಾಣಿ. ಅದಕ್ಕಾಗಿಯೇ…

Read more
ಅಡಿಕೆ ಮಾರುಕಟ್ಟೆ ಸ್ಥಿರ

ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ…

Read more
ಬೇರು ಹುಳ ಪೀಡಿತ ಅಡಿಕೆ ತೋಟ

ಬೇರು ಹುಳ ನಿಯಂತ್ರಣಕ್ಕೆ ಜೈವಿಕ ನಿಯಂತ್ರಕ –EPN.

ಜೈವಿಕವಾಗಿ ಕೆಲವು ಕೀಟಗಳನ್ನು ನಿಯಂತ್ರಿಸಲು ಸಾಧ್ಯ. ಅದರಲ್ಲಿ ಒಂದು EPN.  ಇದು ಬೇರು ಹುಳಗಳನ್ನೇ ಆಶ್ರಯಿಸಿ ಬದುಕಿ, ಅದನ್ನು ಕೊಲ್ಲುತ್ತದೆ. ಇದರ ಬಳಕೆ ಸುಲಭ. ಇದನ್ನು ರೈತರೇ ಉತ್ಪಾದಿಸುವ ತಂತ್ರಜ್ಝಾನವನ್ನು  CPCRI ಹೇಳಿಕೊಡುತ್ತದೆ. ಅಡಿಕೆ ತೆಂಗು, ಕಬ್ಬು ಬೆಳೆಗಾರರು ಬೇರು ಹುಳದ ಸಮಸ್ಯೆಗೆ ಯಾವುದು ಉತ್ತಮ ಪರಿಹಾರ ಎಂಬ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗೆ ಈ ಹುಳ  ನಿಯಂತ್ರಣಕ್ಕೆ ಜೈವಿಕ ಪರಿಹಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗಿದೆ. ಇದರಲ್ಲಿ ಒಮ್ದು ಎಂಟಮೋ ಪಥೋಜೆನಿಕ್ ನಮಟೋಡ್ (EPN) Entomopathogenic Nematodes ಇದನ್ನು ಬಳಸಿ…

Read more
error: Content is protected !!