ಕೊಕ್ಕೋ ಗಿಡ – ಪ್ರೂನಿಂಗ್ ಮಾಡುವ ವಿಧಾನ.

ಕೊಕ್ಕೋ ಸಸ್ಯ ಬೆಳೆಯಲು ಬಿಟ್ಟರೆ ಮರವೇ ಆಗಬಹುದು. ಹಾಗೆಂದು ಯಾವ ಬೆಳೆಗೂ ತೊಂದರೆ ಇಲ್ಲವಾದರೆ  ಅದನ್ನು ಅದರಷ್ಟಕ್ಕೇ ಬೆಳೆಯಲು ಬಿಡಿ. ಇಳುವರಿ ಹೆಚ್ಚುತ್ತದೆ. ಮಿಶ್ರ ಬೆಳೆಯಾಗಿ ಅಡಿಕೆ ತೋಟದಲ್ಲಿ ಬೆಳೆಸುವಾಗ ನಿಮ್ಮ ಒಡಾಟಕ್ಕೆ,ನೀರಾವರಿ, ಕೊಯಿಲು ಮತ್ತು ಇನ್ನಿತರ ಅನುಕೂಲಕ್ಕೆ ಸಮರ್ಪಕವಾಗಿ ಪ್ರೂನಿಂಗ್ ಮಾಡಬೇಕು. ಕೊಕ್ಕೋ ಬೆಳೆ ಕರಾವಳಿ, ಮಲೆನಾಡು, ಅರೆ ಮಲೆನಾಡು, ಹಾಗೆಯೇ  ಅಡಿಕೆ ತೆಂಗು ಬೆಳೆಯುವ ಬಯಲು ನಾಡಿಗೂ ಇದು  ಉತ್ತಮ ಅದಾಯದ  ಬೆಳೆ. ಕೊಕ್ಕೋವನ್ನು  ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕೊಕ್ಕೋ…

Read more
ತೋಟದಲ್ಲಿ ಫಸಲು ಕಡಿಮೆ- ರೋಗ ಹೆಚ್ಚಾಗಲು ಕಾರಣ

ತೋಟದಲ್ಲಿ ಫಸಲು ಕಡಿಮೆ- ರೋಗ ಹೆಚ್ಚಾಗಲು ಕಾರಣ ಏನು? .

ಹೆಚ್ಚಿನ ಫಸಲು  ಪಡೆಯಲು ಕೇವಲ ಗೊಬ್ಬರ,ನೀರಾವರಿ ಮಾಡಿದರೆ ಸಾಲದು.  ಬೆಳೆಯ ಉತ್ಪಾದನೆ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಸದಾ ಸುಸ್ಥಿತಿಯಲ್ಲಿ  ಇಟ್ಟುಕೊಳ್ಳಲೇ ಬೇಕು. ನೀರು ಹೆಚ್ಚಾಗುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತದೆ. ಮಣ್ಣಿನ ಸ್ವಾಸ್ತ್ಥ್ಯ ಸುಧಾರಣೆಗೆ ನಾವು ಗೊಬ್ಬರ ಹಾಕುತ್ತೇವೆ, ಉಳುಮೆ ಮಾಡುತ್ತೇವೆ. ಆದರೆ ಇದರಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ ಎಂಬುದು ಭ್ರಮೆ. ಮಣ್ಣಿನಲ್ಲಿ ಸಮರ್ಪಕ ಹಬೆಯಾಡುವಿಕೆ, ಉಷ್ಣತೆಯ  ಸಮತೋಲನ, ಇದ್ದರೆ ಮಾತ್ರ ನಾವು ಕೊಡುವ ನೀರು, ಗೊಬ್ಬರ ಫಲ ಕೊಡುತ್ತದೆ. ಬಹಳ ಜನ ನನ್ನ ತೋಟದಲ್ಲಿ ನೀರು ನಿಲ್ಲುವುದಿಲ್ಲ,…

Read more

ಬಯೋಗ್ಯಾಸ್ ನಿಂದ ಸಿಲಿಂಡರ್ ಗ್ಯಾಸ್- ಸರಕಾರದ ಇಂಗಿತ.

ಭಾರತ ಪೆಟ್ರೋಲಿಯಂ ಇಂಧನ ಕ್ಷೇತ್ರದಲ್ಲಿ ಸ್ವಾವಲಂಭಿಯಲ್ಲ. ಇಲ್ಲಿಗೆ ಬೇಕಾಗುವ ಎಲ್ಲಾ ನಮೂನೆಯ ಇಂಧನಕ್ಕೂ  ಬೇರೆ ದೇಶಗಳ ಅವಲಂಬನೆ ಆಗಲೇ ಬೇಕು. ಸ್ವಾವಲಂಭಿ ಭಾರತದ ಕನಸನ್ನು ಹೊತ್ತ ಕೇಂದ್ರ ಸರಕಾರ, ಇಂಧನ ಕ್ಷೇತ್ರದಲ್ಲಿ ಪರಾವಲಂಭನೆ ಕಡಿಮೆ ಮಾಡಲು ಬಯೋಗ್ಯಾಸ್ (Bio gas with natural gas) ಅನ್ನು ನೈಸರ್ಗಿಕ ಗ್ಯಾಸ್ ಆಗಿ ಪರಿವರ್ತಿಸಲು  ಚಿಂತನೆ ನಡೆಸಿದೆ. ಜೈವಿಕ ಇಂಧನಗಳಲ್ಲಿ ಮೂರು ವಿಧಗಳು. ಒಂದು ಇಥೆನಾಲ್ ಇದು ಸಕ್ಕರೆ ಕಾರ್ಖಾನೆಯಲ್ಲಿ ಲಭ್ಯ. ಇಮ್ಮೊಂದು ಜೈವಿಕ ಸಸ್ಯ ಜನ್ಯ ಇಂಧನಗಳು. ಇವೆರದನ್ನೂ…

Read more

ಬೀಜ – ಸಸಿ ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೆ ತಿಳಿದುಕೊಳ್ಳಿ.

ಹಿರಿಯರು ಹೇಳುವುದುಂಟು , ಪರವೂರಿನ ಸುಭಗನಿಗಿಂತ ( ನಯ ವಿನಯದ ವ್ಯಕ್ತಿ) ಊರಿನ ಕಳ್ಳನಾದರೂ ಆಗಬಬಹುದು ಎಂದು. ಇದು ನಿಜ. ರೈತರು ಖರೀದಿ ಮಾಡುವ ಸಸಿ, ಬೀಜ  ಇವುಗಳನ್ನು ಗೊತ್ತು ಪರಿಚಯ ಇರುವವರಿಂದಲೇ ಖರೀದಿ ಮಾಡಿ. ನಾಳೆ ಮೋಸವಾದರೆ ಅವರು ನಿಮ್ಮ ಕಣ್ಣು ಮುಂದೆಯೇ ಇರುತ್ತಾರೆ. ನೆಡು ಸಾಮಾಗ್ರಿಗಳಾದ ಬೀಜ, ಸಸಿಗಳ ವ್ಯವಹಾರ ಎಂದರೆ ಬಲವಾದ ನಂಬಿಕೆ. ಇದು ದೇವರಿಗೆ ನಮಸ್ಕರಿಸಿ ಆಶೀರ್ವಾದ ಬೇಡುವುದಕ್ಕಿಂತಲೂ ಮಿಕ್ಕಿದ ನಂಬಿಕೆಯ ವ್ಯವಹಾರ. ಒಬ್ಬ ರೈತ ಒಂದು ಬೀಜ ಅಥವಾ ಸಸಿಯನ್ನು…

Read more
areca nut plants

ಅಡಿಕೆಗಿಡ ನೆಡುವಾಗ ಟ್ರೆಂಚ್ ಪದ್ದತಿ ಬೇಡ- ಗಿಡ ಸೊರಗುತ್ತದೆ.

ಅಡಿಕೆ, ಮುಂತಾದ ಸಸ್ಯಗಳಿಗೆ ತಂತು ( Fiber roots) ಬೇರು ಮಾತ್ರ ಇರುತ್ತದೆ. ಈ ತಂತು ಬೇರುಗಳಲ್ಲಿ  ಮತ್ತೆ ಕವಲುಗಳು ಒಡೆದು ಬೇರು ವ್ಯೂಹ ರಚನೆಯಾಗುತ್ತದೆ. ಈ ಬೇರುಗಳು ತುಂಬಾ ಮೃದುವಾಗಿರುತ್ತವೆ. ಹೆಚ್ಚಿನ ತೇವ, ಅಧಿಕ ಬಿಸಿಯನ್ನು ತಡೆದುಕೊಳ್ಳಲಾರವು. ಆದ ಕಾರಣ ನಾವು ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ಸಸಿ ನೆಟ್ಟರೆ ಅದರ ಬೇರುಗಳಿಗೆ ತೊಂದರೆಯಾಗಿ ಬೆಳವಣಿಗೆಗೆ ಅನನುಕೂಲವಾಗುತ್ತದೆ. ಸಸ್ಯಗಳ ಬೆಳವಣಿಗೆಗೆ ಬೇರುಗಳೇ ಸರ್ವಾಧಾರ. ಬೇರುಗಳ ರಕ್ಷಣೆ ಮತ್ತು ಅವುಗಳ ಪ್ರಸರಣಕ್ಕೆ ಎಷ್ಟು ಅನುಕೂಲ ಮಾಡಿಕೊಡುತ್ತೇವೆಯೋ ಅಷ್ಟು ಆ…

Read more

ಹಲ್ಲಿಲ್ಲದ್ದ ರೈತನಿಗೆ ಕಡಲೆ ತಿನ್ನಿಸುವ ವೆಬಿನಾರ್ ಗಳು.

ಮಾರ್ಚ್ ತಿಂಗಳ ನಂತರ ಬಂದ ಒಂದು ಹೊಸ ಅವತಾರ, ವೆಬಿನಾರ್ ಗಳು. ಬೇರೆ ಕ್ಷೇತ್ರಗಳ ವಿಷಯ ನಮಗೆ ಅನಗತ್ಯ. ಆದರೆ ಕೃಷಿ ಕ್ಷೇತ್ರದಲ್ಲಿ ಈ ವೆಬಿನಾರ್ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ರೈತರಿಗೆ ತಿಳಿಯಬಯಸುತ್ತೇವೆ. ಇದು ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಗಿದೆ. ಮೇಲುನೋಟಕ್ಕೆ ಇದು ರೈತರ ಸೇವೆ ಎಂದು ಕಂಡರೂ ಇದರಲ್ಲಿ ಕೆಲವು ಪೇಪರ್ ವರ್ಕ್ ಮತ್ತು ಹಣ ಖರ್ಚು ಮಾಡುವ ದಂಧೆ ಇರಲೂ ಬಹುದು. ವೆಬಿನಾರ್ ಎಂದರೆ ಕೇವಲ ಸಂಬಂಧಿಸಿದವರು  ಮಾತ್ರ ತಮ್ಮ…

Read more
Farmer harvesting the watermelon

ರೈತರೇ ಹೆಚ್ಚು ಬೆಳೆಸಲು ಹೋಗದಿರಿ- ಪರಿಸ್ಥಿತಿ ಸರಿಯಾಗಿಲ್ಲ…

ಹಿರಿಯರು ಒಂದು ಮಾತು ಹೇಳುತ್ತಾರೆ, ನಿಮ್ಮ ತಲೆಗೆ ನಿಮ್ಮದೇ ಕೈ ಎಂದು. ನಾವು ಬದುಕಲು ನಾವೇ ದುಡಿಯಬೇಕು. ಇದು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಹೀಗೇನೇ. ಆದರೆ ಕೃಷಿ ಕ್ಷೇತ್ರ ಇದಕ್ಕಿಂತ ಭಿನ್ನ. ಇಲ್ಲಿ ನಾವು ಎಷ್ಟೂ ದುಡಿಯಬಹುದು. ಆದರೆ ಆ ದುಡಿಮೆಗೆ  ಪ್ರತಿಫಲ ಕೊಡುವವರು ಬೇರೆಯವರು. ಇದರಿಂದಾಗಿ ಕೃಷಿ ಕ್ಷೇತ್ರ ಇನ್ನು ಕೆಲವು ವರ್ಷ ಕಾಲ ಮಂಕಾಡೆ ಮಲಗುವ ಸಾಧ್ಯತೆ ಇದೆ. ಕೊರೋನಾ ಉಳಿದೆಲ್ಲಾ ಕ್ಷೇತ್ರಗಳನ್ನು ಬಾದಿಸಿದ್ದು, ಅತ್ಯಲ್ಪ. ಒಂದು ಉದ್ದಿಮೆ ಉತ್ಪಾದನೆ ಮಾಡದಿದ್ದರೆ, ಏನೂ ಆಗುವುದಿಲ್ಲ….

Read more
ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ . ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು. ಅದು ಮುಗಿದ ಸುದ್ದಿಯಾಯಿತು….

Read more

ಬಿದಿರು ಬೆಳಸಬೇಕೆಂದಿರುವಿರೇ – ಇದನ್ನು ತಪ್ಪದೆ ಓದಿ.

ಬಿದಿರು ಬೆಳೆಸುವವರು  ಬೀಜದಿಂದ ಮಾಡಿದ ಸಸಿಯನ್ನು ಬೆಳೆಸಿದರೆ ಮಾತ್ರ ಅದಕ್ಕೆ ಪೂರ್ಣ ಆಯುಸ್ಸು. ಒಂದು ವೇಳೆ ಅದು ಬೆಳೆದ ಬಿದಿರಿನ ಕಳಲೆ, ಅಥವಾ ಅದರಿಂದ ಮಾಡಿದ ಸಸಿಯೇ ಆಗಿದ್ದರೆ ಬೇಗ ಅದರಲ್ಲಿ ಹೂ ಬಿಡಬಹುದು. ಬಿದಿರು ಬೆಳೆಸಿದರೆ ಅದರಿಂದ ತುಂಬಾ ಲಾಭವಿದೆ. ಒಂದೊಂದು ಬಿದಿರ ಹಿಂಡು ವರ್ಷಕ್ಕೆ  ಏನಿಲ್ಲವೆಂದರೂ ಕಳಲೆಯ ಮೂಲಕ  300-500 ರೂ. ತನಕ ಆದಾಯ ಕೊಡುತ್ತದೆ. ಅಲ್ಲದೆ ಬಿದಿರಿನ ಸೊಪ್ಪು ಗೊಬ್ಬರ. ಬಿದಿರನ್ನು ಬೇರೆ ಬೇರೆ ಬಳಕೆಗೆ ಉಪಯೋಗಿಸಬಹುದು. ಸಸಿಗೆ ಬೀಜವೇ ಸೂಕ್ತ: ಕಳೆದ…

Read more
ಸಮಗ್ರ ಕೃಷಿ ಯಲ್ಲಿ ಆಡು ಕುರಿ ಸಾಕಾಣಿಕೆ ಲಾಭದ್ದು- Goat and sheep farming is profitable in integrated farming

ಸಮಗ್ರ ಕೃಷಿ ಪದ್ದತಿಯಿಂದ ಕೃಷಿಕರ ಜೀವನ ಸುಬಧ್ರ.

ಕೃಷಿ ಮಾಡುವಾಗ ಲಾಭದ ಬೆಳೆಗಳ ಜೊತೆಗೆ ಕೃಷಿ ಆಧಾರಿತ ಉಪಕಸುಬುಗಳಾದ ಹೈನುಗಾರಿಕೆ, ಕೊಳಿ ಸಾಕಾಣಿಕೆ, ಆಡು ಮತ್ತು ಕುರಿ ಸಾಕಾಣಿಕೆ ಮುಂತಾದವುಗಳನ್ನು ಮಾಡಿಕೊಂಡರೆ ಅದು ಸುಸ್ಥಿರ.     ರೈತರು ತಮ್ಮಲ್ಲಿರುವ  ಸಂಪನ್ಮೂಲಗಳನ್ನು ಆಧರಿಸಿ  ಮಣ್ಣಿಗೆ ಹವಾಮಾನಕ್ಕೆ ಹೊಂದಿಕೊಳುವಂತೆ ಬೆಳೆ ಮತ್ತು ಕೃಷಿ ಪೂರಕ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು. ಇಂಥ ಇಂತಹ ಕೃಷಿ ಪದ್ದತಿಗೆ ಮಿಶ್ರಕ್ರೃಷಿ ಅಥವಾ ಸಮಗ್ರಕ್ರೃಷಿ ಪದ್ದತಿ ಎಂದು ಕರೆಯುತ್ತಾರೆ. ಬೇಕಾಗುವ ಸಂಪನ್ಮೂಲಗಳು: ಈ ಕೃಷಿ ಪದ್ದತಿ ಅಳವಡಿಸಲು ರೈತನಿಗೆ  ಬೇಕಾಗುವುದು ಲಭ್ಯವಿರುವ  ನೀರು, ಜಮೀನು, ಕುಟುಂಬದ…

Read more
error: Content is protected !!