“ಹಸಿದವನಿಗೆ ಅನ್ನ ಕೊಡುತ್ತಾ ಇದ್ದರೆ ಸ್ವಾವಲಂಬನೆ ಯಾವಾಗ ?
ಕಲ್ಯಾಣ ಯೋಜನೆಗಳ ಗುರಿ ಸ್ವಾವಲಂಬನೆಯಾಗಬೇಕು. ನಿರಂತರವಾಗಿ ಕೊಡುತ್ತಾ ಇದ್ದರೆ ಅದಕ್ಕೆ ಅರ್ಥವಿಲ್ಲ.ಒಂದು ಕುಟುಂಬದಲ್ಲಿ ತಂದೆ , ತಾಯಿ ಮಕ್ಕಳು ವೃದ್ಧರು ಇದ್ದರೆಂದರೆ ಮಕ್ಕಳು ಮತ್ತು ವೃದ್ಧರನ್ನು ತಂದೆ ತಾಯಿ ಸಾಕುತ್ತಾರೆ.ಅವರು ವೃದ್ಧರಾದಾಗ ಅದೇ ಮಕ್ಕಳು ಸಾಕುತ್ತಾರೆ. ಹೀಗೆ ಕುಟುಂಬ ವ್ಯವಸ್ಥೆ ಮುಂದುವರಿಯುತ್ತದೆ. ಆದರೆ ಸರಕಾರದ ಕಲ್ಯಾಣ ಯೋಜನೆಗಳು ಮಾತ್ರ ಇದಕ್ಕೆ ಭಿನ್ನವಾಗಿ ಇದೆ. ನಮ್ಮ ದೇಶದಲ್ಲಿ ಮಧ್ಯಮವರ್ಗ ಬಡತನದೆಡೆಗೆ ಸಾಗುತ್ತಿದೆ. ಬಡವರು ಸೌಲಭ್ಯಗಳನ್ನು ಪಡೆಯುತ್ತಲೇ ಇದ್ದಾರೆ. ಅವರು ಶ್ರೀಮಂತರಾಗುವುದು ಯಾವಾಗಲೋ? “ಹಸಿದವನಿಗೆ ಸಿದ್ಧವಾದ ಮೀನನ್ನು ಕೊಡಬೇಡಿ; ಮೀನು…
